Don't Miss!
- News ಪಿಕ್ ಪಾಕೇಟ್ ಕಾಂಗ್ರೆಸ್, ಕನ್ನಡಿಗರ ಕೈಗೆ 'ಚಿಪ್ಪು' ಪೋಸ್ಟರ್ ಬಿಡುಗಡೆ: ಬಿಜೆಪಿ ತಿರುಗೇಟು
- Sports IPL 2024: ಚಹಾಲ್ ಬಿಟ್ಟುಕೊಟ್ಟಿದರ ಬಗ್ಗೆ ಕಾರಣ ತಿಳಿಸಿದ ಆರ್ಸಿಬಿ ಮಾಜಿ ನಿರ್ದೇಶಕ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Lifestyle ಮೊಬೈಲ್ ಬೇಡ..ಗ್ಯಾಜೆಟ್ ಬೇಡ..ಹಸ್ತದಿಂದ ಪೇಮೆಂಟ್ ಮಾಡಿ..! ಇದು ಟಿಜಿಟಲ್ ಕ್ರಾಂತಿ..!
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೃತಿ ಕರಬಂಧಗೆ ಏರ್ ಪೋರ್ಟ್ ನಲ್ಲಿ ಆಗಿದ್ದೇನು?
ರಿಯಲ್ ಸ್ಟಾರ್ ಉಪೇಂದ್ರ ಜೊತೆ 'ಸೂಪರ್ ರಂಗ' ಚಿತ್ರದಲ್ಲಿ ಸೂಪರ್ ಆಗಿ ಅಭಿನಯಿಸಿರುವ 'ಗೂಗ್ಲಿ' ಬೆಡಗಿ ಕೃತಿ ಕರಬಂಧಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನದ ನಿಲ್ದಾಣದಲ್ಲಿ ಕಿರಿಕಿರಿ ಪ್ರಸಂಗವೊಂದು ಎದುರಾಗಿದೆ.
ಈ ಘಟನೆ ನಡೆದು ಬಹಳ ದಿನಗಳಾಗಿದ್ದರೂ ಅವರು ಆ ನೋವನ್ನು ಈಗ ತೋಡಿಕೊಂಡಿದ್ದಾರೆ. ನನಗೆ ಬಂದ ಪರಿಸ್ಥಿತಿ ಇನ್ಯಾರಿಗೂ ಬಾರದಿರಲಿ ಎಂಬ ಸದುದ್ದೇಶದಿಂದ ಅವರಿಗ ಆದ ಕಹಿ ಘಟನೆಯನ್ನು ತಮ್ಮ ಫೇಸ್ ಬುಕ್ ನಲ್ಲಿ ಇಂಗ್ಲಿಷ್ ನಲ್ಲಿ ಸುದೀರ್ಘವಾಗಿ ಬರೆದು ಹಾಕಿಕೊಂಡಿದ್ದಾರೆ.
ಹೆಚ್ಚಿನ ಲಗೇಜ್ ಇದೆ ಎಂದು ಅವರ ಬಳಿ ಹೆಚ್ಚಿನ ದುಡ್ಡು ಪೀಕಿದ್ದಾರಂತೆ ಚೆಕ್ ಇನ್ ಅಧಿಕಾರಿ. ಜೊತೆಗೆ ಅವರ ಜೊತೆ ಬಹಳ ನಿಷ್ಠುರವಾಗಿಯೂ ನಡೆದುಕೊಂಡಿದ್ದಾರಂತೆ. ಇದರಿಂದ ಕೃತಿ ಅವರ ಮನಸ್ಸಿಗೆ ಸಹಜವಾಗಿಯೇ ಬಹಳ ಬೇಜಾರಾಗಿದೆಯಂತೆ.
ತಾನು ಒಬ್ಬ ನಟಿಯಾಗಿ ಈ ರೀತಿ ಮಾತನಾಡುತ್ತಿಲ್ಲ. ಒಬ್ಬ ಸಾಮಾನ್ಯ ಪ್ರಜೆಯಾಗಿ, ಪ್ರಯಾಣಿಕಳಾಗಿ ಈ ಕಿರಿಕಿರಿ ಅನುಭವಿಸಿದ್ದೇನೆ. ಬೇರೆ ಹೆಣ್ಣುಮಕ್ಕಳಿಗೆ ಈ ರೀತಿ ಆಗುವುದು ಬೇಡ ಎಂದು ಈ ಪತ್ರ ಬರೆಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ ಕೃತಿ. ಅವರ ಪತ್ರ ಏರ್ ಇಂಡಿಯಾ ಕಣ್ಣಿಗೆ ಬಿದ್ದಿದ್ದರೆ ಅಷ್ಟೇ ಸಾಕಲ್ಲವೇ?