Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಲ್ಮಾನ್ ಖಾನ್ ಜೊತೆ ತಪ್ಪಿದ ದರ್ಶನ್ ಭಾರಿ ಫೈಟ್
ಜೊತೆಗೆ ಸ್ವತಃ ದರ್ಶನ್ ಕೂಡ ಈ ವಿಷಯದಲ್ಲಿ ಚಿತ್ರದ ನಿರ್ಮಾಪಕರಿಗೆ ಸಾಥ್ ನೀಡಿದ್ದಾರೆ. 'ಚಿಂಗಾರಿ' ಚಿತ್ರದ ನಂತರ ನನ್ನ ಇನ್ನೊಂದು ಸಿನಿಮಾ ಬರಬೇಕಿತ್ತು. ಆದರೆ ಗ್ಯಾಪ್ ಜಾಸ್ತಿ ಇಡುವುದು ಅನಿವಾರ್ಯವಾಗಿದೆ. ಬರಲಿರುವ 'ಸಂಗೊಳ್ಳಿ ರಾಯಣ್ಣ' ಸಾಧಾರಣವಾದ ಚಿತ್ರವಲ್ಲ, ಎರಡು ಮೂರು ಚಿತ್ರಗಳಿಗಾಗುವಷ್ಟು ಬಂಡವಾಳವನ್ನು ನಿರ್ಮಾಪಕರು ಇದೊಂದೇ ಚಿತ್ರಕ್ಕೆ ಹಾಕಿದ್ದಾರೆ.
ಅವರು ಹಾಕಿದ ಹಣ ವಾಪಸ್ ಬರಬೇಕೆಂದರೆ 'ಸಂಗೊಳ್ಳಿ ರಾಯಣ್ಣ'ನ ಚಿತ್ರದ ಮೊದಲು ಅಥವಾ ನಂತರ ನನ್ನ ಇನ್ನೊಂದು ಚಿತ್ರ ತೆರೆಗೆ ಬರಬಾರದು. ಆ ಕಾಳಜಿ ನನಗೆ ಇರಲೇಬೇಕಾದದ್ದು, ಇದೆ. ನನ್ನನ್ನು ನಂಬಿ ಸಿನಿಮಾ ಮಾಡುವ ನಿರ್ಮಾಪಕರಿಗೆ ಯಾವುದೇ ರೀತಿಯಲ್ಲೂ ತೊಂದರೆ ಆಗಬಾರದು" ಎಂದು ಮಾಧ್ಯಮದ ಪ್ರಶ್ನೆಯೊಂದಕ್ಕೆ ದರ್ಶನ್ ಕಳಕಳಿಯಿಂದ ಉತ್ತರಿಸಿದ್ದಾರೆ.
ಮುಂದುವರಿದ ದರ್ಶನ್, "ಸದ್ಯಕ್ಕೆ ನನಗಿರುವ ಬೇಡಿಕೆಗೆ ಇನ್ನು ನಾಲ್ಕೈದು ವರ್ಷಗಳಿಗೆ ಆಗುವಷ್ಟು ಸಿನಿಮಾಗಳಿಗೆ ಸಹಿ ಮಾಡಬಹುದು. ಆದರೆ ಹಾಗೆ ಮಾಡಿದರೆ ನಿರ್ಮಾಪಕರಿಗೆ ಭಾರಿ ತೊಂದರೆಯಾಗುತ್ತದೆ. ನನ್ನನ್ನು ನಂಬಿ ನಿರ್ಮಾಪಕರು ಎಂಟು ಹತ್ತು ಕೋಟಿಯನ್ನು ತಮ್ಮ ಚಿತ್ರಗಳಿಗೆ ಸುರಿದಿರುತ್ತಾರೆ. ನಂತರ ಬಿಡುಗಡೆ ಒಂದಾದಮೇಲೆ ಇನ್ನೊಂದು ಎಂದಾದಾಗ ಹಣ ಹಾಕಿದ ನಿರ್ಮಾಪಕರ ಗತಿ ಏನಾಗಬೇಕು?" ಎಂದು ಆನಂದ್ ಅಪ್ಪುಗೋಳ್ ಪರ ನಿಂತಿದ್ದಾರೆ.
ಚಿತ್ರತಂಡಕ್ಕೆ ಆಗಸ್ಟ್ 15ಕ್ಕೆ ಬಿಡುಗಡೆಯಾಗಿಲ್ಲ ಎಂಬ ಚಿಂತೆಯಾದರೆ, ಗಾಂಧಿನಗರದ ಕೆಲವರಿಗೆ ಚಿಂತೆ ಆಗಿದ್ದು ಬೇರೇಯದೇ ಸಂಗತಿಗೆ. ಅಂದು ಬಿಡುಗಡೆಯಾದ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಚಿತ್ರ 'ಏಕ್ ಥಾ ಟೈಗರ್', ಕರ್ನಾಟಕದ ಬಾಕ್ಸ್ ಆಫೀಸನ್ನು ಕೂಡ ಕೊಳ್ಳೆ ಹೊಡೆದಿದೆ. ಹೀಗಿರುವಾಗ, ಆ ಚಿತ್ರಕ್ಕೆ ಪಕ್ಕಾ ಸ್ಪರ್ಧೆ ನೀಡಲು ದರ್ಶನ್ 'ಸಂಗೊಳ್ಳಿ ರಾಯಣ್ಣ' ಚಿತ್ರಕ್ಕೆ ಮಾತ್ರ ಸಾಧ್ಯವಿತ್ತು.
ಹೀಗಿರುವಾಗ ಅನಾವಶ್ಯಕವಾಗಿ ರಜಾದಿನದ ಭಾರಿ ಕಲೆಕ್ಷನ್ ಬಾಲಿವುಡ್ ಚಿತ್ರ 'ಏಕ್ ಥಾ ಟೈಗರ್' ಪಾಲಾಯ್ತಲ್ಲಾ ಎಂಬುದು ಕೆಲವರ ಚಿಂತೆ, ಅದು ಹಲವರ ಪ್ರಕಾರ ನಿಜವೂ ಹೌದು. ರಾಷ್ಟ್ರೀಯ ರಜಾ ಇದ್ದುದರಿಂದ ಆ ದಿನ 'ಸಂಗೊಳ್ಳಿ ರಾಯಣ್ಣ' ಚಿತ್ರ ಬಿಡಗಡೆಯಾಗಿದ್ದರೆ ಸಂಗೊಳ್ಳಿ ರಾಯಣ್ಣರ ಜನ್ಮ ದಿನವೂ ಅಂದೇ ಆಗಿದ್ದರಿಂದ ಸಹಜವಾಗಿ ಸೆಂಟಿಮೆಂಟ್ ಕೂಡ ಸೇರಿಕೊಂಡು ಅನಿರೀಕ್ಷಿತ ದಾಖಲೆ ನಿರ್ಮಿಸಬಹುದಾಗಿತ್ತು. ಅಂತಹ ಅವಕಾಶ ಕೈತಪ್ಪಿದೆ ಎಂಬುದು ಹಲವರ ವಾದ. ಲೇಟ್ ಆದರೂ ಲೇಟೆಸ್ಟ್ ಆಗಿರುತ್ತದೆ ಎಂದಿದೆ ಚಿತ್ರತಂಡ, ಕಾಯಲೇಬೇಕು...(ಒನ್ ಇಂಡಿಯಾ ಕನ್ನಡ)