Just In
Don't Miss!
- Lifestyle
ಮಂಗಳವಾರದ ರಾಶಿಫಲ: ಈ ದಿನ ನಿಮ್ಮ ರಾಶಿಯ ಭವಿಷ್ಯ ಹೇಗಿದೆ ನೋಡಿ
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- News
Republic Day 2021 Live Updates : ರಾಜಪಥದಲ್ಲಿ 72ನೇ ಗಣತಂತ್ರದಿನ ಸಂಭ್ರಮ
- Automobiles
ಗಣರಾಜ್ಯೋತ್ಸವದ ಸಂಭ್ರಮಕ್ಕಾಗಿ ಮ್ಯಾಗ್ನೈಟ್ ಕಾರಿನೊಂದಿಗೆ ನಿಸ್ಸಾನ್ ಹೊಸ ಅಭಿಯಾನ ಘೋಷಣೆ
- Sports
ಐಎಸ್ಎಲ್: ಬಾಗನ್ ಸೋಲಿಸುವ ಆತ್ಮವಿಶ್ವಾಸದಲ್ಲಿ ನಾರ್ಥ್ ಈಸ್ಟ್
- Finance
ಎಲ್&ಟಿ ತ್ರೈಮಾಸಿಕ ಆದಾಯ 5% ಏರಿಕೆ: ದಾಖಲೆಯ 2,467 ಕೋಟಿ ರೂಪಾಯಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ಯಾಂಡಲ್ ವುಡ್ ಗೆ 'ಢುಂಢಿ' ಯೋಗೇಶ್ ಮಾಸ್ಟರ್
ಕೋಟ್ಯಂತರ ಮಂದಿ ಆರಾಧಿಸುವ ಗಣೇಶನನ್ನು ವಿಚಿತ್ರವಾಗಿ ಬಿಂಬಿಸಿ ವಿವಾದಕ್ಕೆ ಒಳಗಾದ 'ಢುಂಢಿ' ಕಾದಂಬರಿ ಕರ್ತೃ ಯೋಗೇಶ್ ಮಾಸ್ಟರ್ ಇದೀಗ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಮೂಲಕ ಚಿತ್ರರಂಗಕ್ಕೆ ಅಡಿಯಿಟಿದ್ದಾರೆ.
ಆಸ್ಕರ್, ವಿಸ್ ಮಲ್ಲಿಗೆ ಚಿತ್ರಗಳನ್ನು ನಿದೇಶಿಸಿದ್ದ ಆಸ್ಕರ್ ಕೃಷ್ಣ ಈಗ ಮೂರು ವೆರೈಟಿ ಪ್ರೀತಿಯನ್ನು ಹೇಳ ಹೊರಟಿದ್ದಾರೆ. ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯದ ಮೂರು ಯುವ ಜೋಡಿಗಳ ಮೂರು ಡಿಫೆರೆಂಟ್ ಲವ್ ಸ್ಟೋರಿ ಹೊಂದಿರುವ ಈ ಚಿತ್ರದ ಹೆಸರು "ಪ್ರೀತಿ ಪ್ಯಾರ್ & ಲವ್". ['ಢುಂಢಿ' ಲೇಖಕ ಯೋಗೇಶ್ ಮಾಸ್ಟರ್ ಯಾರು?]
ಆಸ್ಕರ್ ಕೃಷ್ಣ ಈ ಚಿತ್ರದ ನಿದೇಶನದ ಜೊತೆ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಲಾಲಿ ಸ್ವಾಮಿ ಸಹ ನಿರ್ಮಾಪಕರಾಗಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಗಳನ್ನು ಯೋಗೇಶ್ ಮಾಸ್ಟರ್ ಹಾಗೂ ಕೃಷ್ಣ ರಚಿಸಿದ್ದಾರೆ.
ನವೆಂಬರ್ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಲಿರುವ ಈ ಚಿತ್ರಕ್ಕೆ ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿ ದಾರವಾಡ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಮೂರು ಜನ ನಾಯಕ ಹಾಗೂ ಮೂರು ನಾಯಕಿಯರ ಆಯ್ಕೆ ನಡೆಯುತ್ತಿದೆ.
ರಾಜೇಂದ್ರ ಕಾರಂತ್, ಸುಚೇಂದ್ರ ಪ್ರಸಾದ್, ನೀನಾಸಂ ಯಶವಂತ್, ನೀನಾಸಂ ಮಹಂತೇಶ್ ತಾರಬಳಗದಲ್ಲಿದ್ದು, ಚಿತ್ರಕ್ಕೆ ಸೂರ್ಯಕಾಂತ್ ಹೊನ್ನಾಳ್ಳಿ ಛಾಯಗ್ರಹಣ, ಹರೀಶ್ ಜಿ. ಸಂಕಲನ, ಸೂಪರ್ ಜೋನ್ಸ್ ಸಾಹಸ, ಮನು ನೃತ್ಯ ನಿರ್ದೇಶನವಿದೆ. (ಫಿಲ್ಮಿಬೀಟ್ ಕನ್ನಡ)