Don't Miss!
- Finance ಇನ್ಮುಂದೆ ದುಬಾರಿಯಾಗಲಿದೆ ಎಸ್ಬಿಐ ಡೆಬಿಟ್, ಕ್ರೆಡಿಟ್ ಕಾರ್ಡ್ ನಿರ್ವಹಣಾ ಶುಲ್ಕ
- Sports RCB vs KKR: ಚಿನ್ನಸ್ವಾಮಿಯಲ್ಲಿ ಮತ್ತೊಂದು ರೋಚಕ ಪಂದ್ಯ; ಸಂಭಾವ್ಯ ಆಡುವ 11ರ ಬಳಗ, ಲೈವ್ ಸ್ಟ್ರೀಮಿಂಗ್
- News DK Suresh Assets: ಕೋಟಿ ಕೋಟಿ ಒಡೆಯ ಡಿಕೆ ಸುರೇಶ್! ಇಲ್ಲೆಲ್ಲಾ ಇದೆ ಜಮೀನು, ಮನೆ, ಸಾಲ!
- Automobiles Jonty Rhodes: ರಾಯಲ್ ಎನ್ಫೀಲ್ಡ್ ಬೈಕ್ಗಳಿಗೆ ಮನಸೋತ ದ.ಆಫ್ರಿಕಾ ಕ್ರಿಕೆಟರ್!
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Technology ಬಿಎಸ್ಎನ್ಎಲ್ ಗ್ರಾಹಕರಿಗೆ ಸಿಹಿಸುದ್ದಿ!..ಬಜೆಟ್ ದರದಲ್ಲಿ ಹೊಸ ಪ್ಲ್ಯಾನ್ ಲಾಂಚ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಮ್ಮ ಕೈ ಕಟ್ಟಿಹಾಕಿದ್ದಾರೆ: ಡಬ್ಬಿಂಗ್ ಬಗ್ಗೆ ಸಾ.ರಾ.ಗೋವಿಂದು ಹತಾಶೆ
ಡಬ್ಬಿಂಗ್ ವಿರುದ್ಧ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಚಲನಚಿತ್ರ ವಾಣಿಜ್ಯ ಮಂಡಳಿ ಮುಖ್ಯಸ್ಥ, ನಿರ್ಮಾಪಕ ಸಾ.ರಾ.ಗೋವಿಂದು.
ಡಬ್ಬಿಂಗ್ ಹಾವಳಿ ವಿರುದ್ಧ ಅಸಮಾಧಾನಗೊಂಡ ಕರ್ನಾಟಕ ರಾಷ್ಟ್ರ ಸಮಿತಿ ಸದಸ್ಯರು ಇಂದು ಫಿಲಂ ಛೇಂಬರ್ಗೆ ಭೇಟಿ ನೀಡಿ ಸಾ.ರಾ.ಗೋವಿಂದು ಅವರೊಂದಿಗೆ ಚರ್ಚೆ ನಡೆದು, ಅವರಿಗೆ ಮನವಿ ಅರ್ಜಿಯೊಂದನ್ನು ನೀಡಿದರು.
ಈ ಸಂದರ್ಭದಲ್ಲಿ ಡಬ್ಬಿಂಗ್ ವಿರುದ್ಧ ತಾವು ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಡಿರುವ ಹೋರಾಟದ ಬಗ್ಗೆ ಮಾತನಾಡಿದ ಸಾ.ರಾ.ಗೋವಿಂದು, 'ನ್ಯಾಯಾಲಯದ ಆದೇಶಗಳು ನಮ್ಮ ಕೈ ಕಟ್ಟಿಹಾಕಿವೆ' ಎಂದು ಅಸಮಾಧಾನ ಹೊರಹಾಕಿದರು.
ಈ ಹಿಂದೆ ಅನ್ಯ ಭಾಷೆಗಳ ಸಿನಿಮಾಗಳಿಗೆ ಇಂತಿಷ್ಟೇ ಚಿತ್ರಮಂದಿರವನ್ನು ಮಾತ್ರವೇ ನೀಡಬೇಕು ಎಂಬ ನಿಯಮ ಮಾಡಿಕೊಂಡಿದ್ದೆವು. ಆಗ 'ರಾ ಒನ್' ಎಂಬ ಸಿನಿಮಾ ಬಿಡುಗಡೆ ಆಯ್ತು. ಅವರಿಗೆ ನಿಯಮದಂತೆ ಕೆಲವು ಸಿನಿಮಾ ಮಂದಿರಗಳನ್ನು ನೀಡಿದೆವು, ಅವರು ನಮ್ಮ ವಿರುದ್ಧ ನ್ಯಾಯಾಲಯಕ್ಕೆ ಹೋಗಿ ಗೆದ್ದರು. ಅಂದಿನಿಂದ ಯಾವ ಭಾಷೆಯ ಸಿನಿಮಾ ಎಷ್ಟು ಚಿತ್ರಮಂದಿರಗಳಲ್ಲಿ ಬೇಕಾದರೂ ಬಿಡುಗಡೆ ಆಗಬಹುದು ಎಂಬಂತಾಗಿದೆ ಎಂದರು ಸಾ.ರಾ.ಗೋವಿಂದು.
ಬಾಹುಬಲಿ ಸಿನಿಮಾವನ್ನು ರಾಜ್ಯದಲ್ಲಿ 200 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದರು. ಎದೆಗೆ ಗುಂಡು ಹೊಡೆದ ಅನುಭವವಾಯಿತು. ಆದರೆ ನ್ಯಾಯಾಲಯದ ಆದೇಶಗಳು ನಮ್ಮನ್ನು ಕಟ್ಟಿಹಾಕಿವೆ. ನಿಮ್ಮಂಥಹವರು ಆದರೂ ಇದರ ಬಗ್ಗೆ ಪ್ರತಿಭಟಿಸುತ್ತಿದ್ದೀರ, ನಿಮಗೆ ನನ್ನ ಗೌರವ ಇದ್ದೇ ಇರುತ್ತದೆ ಎಂದರು ಸಾ.ರಾ.ಗೋವಿಂದು.
Recommended Video
'ವಿಜಯ್ ನಟನೆಯ ಮಾಸ್ಟರ್ ಸಿನಿಮಾ ಕರ್ನಾಕಟದಲ್ಲಿ ಕನ್ನಡದಲ್ಲಿ, ಆಂಧ್ರ, ತೆಲಂಗಾಣಗಳಲ್ಲಿ ತೆಲುಗಿನಲ್ಲಿ, ಕೇರಳದಲ್ಲಿ ಮಲಯಾಳಂ ನಲ್ಲಿ ಬಿಡುಗಡೆ ಆಗಿದೆ. ಇದಕ್ಕೇನು ಅರ್ಥವಿಲ್ಲವೇ, ಭಾಷೆಯ ಬಗ್ಗೆ ಗೌರವ ಬೇಡವೇ, ನಮ್ಮ ಭಾಷೆ ಏನಾಯ್ತು, ಈ ನ್ಯಾಯಾಲಯಗಳಿಗೆ ಇದೆಲ್ಲಾ ಯಾಕೆ ಅರ್ಥವಾಗುತ್ತಿಲ್ಲ' ಎಂದು ಸಾ.ರಾ.ಗೋವಿಂದು ಅಸಮಾಧಾನ ಹೊರಹಾಕಿದ್ದಾರೆ.