Don't Miss!
- News Mukhtar Ansari's death: ಉತ್ತರಪ್ರದೇಶದಲ್ಲಿ ಕಿಚ್ಚು ಹಚ್ಚಿದ ಗ್ಯಾಂಗ್ಸ್ಟಾರ್, ರಾಜಕಾರಣಿ ಮುಖ್ತಾರ್ ಅನ್ಸಾರಿ ನಿಧನ
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Automobiles Tata Nexon: ಟಾಟಾ ನೆಕ್ಸಾನ್ ಹೊಸ ರೂಪಾಂತರಗಳು ಬಿಡುಗಡೆ, ರೂ.10 ಲಕ್ಷ ಬೆಲೆ.. ಆಕರ್ಷಕ ವೈಶಿಷ್ಟ್ಯಗಳು
- Sports Riyan Parag: 'ಗಾಯದಿಂದ ಮೂರು ದಿನ ಒದ್ದಾಡಿ ಹೋಗಿದ್ದೆ': ರಿಯಾನ್ ಪರಾಗ್
- Finance ಇನ್ಮುಂದೆ ದುಬಾರಿಯಾಗಲಿದೆ ಎಸ್ಬಿಐ ಡೆಬಿಟ್, ಕ್ರೆಡಿಟ್ ಕಾರ್ಡ್ ನಿರ್ವಹಣಾ ಶುಲ್ಕ
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನೀವು 'ಹಾಫ್ ಮೆಂಟ್ಲು' ಆಗೋ ಸಿನಿಮಾ ಬರ್ತಿದೆ
ಹೊಸಬರ ಸಿನಿಮಾಗಳು ಅಂದ್ರೆ ಯಾವ ಪ್ರೇಕ್ಷಕರೂ ಅಷ್ಟಾಗಿ ತಲೆಕೆಡಿಸಿಕೊಳ್ಳಲ್ಲ. ಆದ್ರೆ ವಿಭಿನ್ನವಾಗಿದ್ದು ವಿಶೇಷವಾಗಿದ್ದು ಇದ್ರೆ ಅದನ್ನ ಪ್ರೋತ್ಸಾಹಿಸೋದ್ರಲ್ಲಿ ಕನ್ನಡ ಪ್ರೇಕ್ಷಕರು ಹಿಂದೆ ಬಿದ್ದಿಲ್ಲ. ಈಗ ಸ್ಯಾಂಡಲ್ ವುಡ್ ನಲ್ಲಿ ನಿರೀಕ್ಷೆ ಮಾಡಬಹುದಾದ ಹೊಸಬರ ಸಿನಿಮಾವೊಂದು ನಿಧಾನಕ್ಕೆ ಸದ್ದು ಮಾಡ್ತಿದೆ.
ಅದು 'ಹಾಫ್ ಮೆಂಟ್ಲು' ಸಿನಿಮಾ. ಟೈಟಲ್ ಕೇಳಿದ ಮೊದಲಿಗೆ ಇದೂ ನೂರರಲ್ಲಿ ಮತ್ತೊಂದು ಸಿನಿಮಾ ಅಂದುಕೊಂಡವರು ಈಗ 'ಹಾಫ್ ಮೆಂಟ್ಲು' ಹಾಡುಗಳನ್ನ ಕೇಳಿ ತಲೆದೂಗ್ತಿದ್ದಾರೆ. ಈ ಹಾಡುಗಳ ವಿಶೇಷ ಅಂದ್ರೆ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಸಂಗೀತ ನಿರ್ದೇಶಕ ಬಿ.ಜೆ ಭರತ್ ಮೊದಲು ಸಂಗೀತ ನೀಡಿದ್ದ ಹಾಡುಗಳಿವು. ['ಹಾಫ್ ಮೆಂಟ್ಲು' ರಾತ್ರಿ ಶೂಟಿಂಗ್ ನಲ್ಲಿ ಏನಾಯ್ತು?]
ಈ ಹಾಡುಗಳನ್ನ ನೋಡೀನೇ ನಿರ್ದೇಶಕ ಸುನಿ ತಮ್ಮ ಸಿನಿಮಾಗೆ ಬಿ ಜೆ ಭರತ್ ಸಂಗೀತವನ್ನು ಆಯ್ದುಕೊಂಡಿದ್ರಂತೆ. ಇನ್ನು 'ಹಾಫ್ ಮೆಂಟ್ಲು' ಆರಂಭದಲ್ಲೇ ಮಂಗಳಮುಖಿಯರಿಂದ ಹಾಡೊಂದನ್ನ ಹಾಡಿಸಿ ಸಖತ್ ಸೌಂಡ್ ಮಾಡಿತ್ತು. ಈಗ ಚಿತ್ರದಲ್ಲಿರೋ 9 ಹಾಡುಗಳೂ ವಿಭಿನ್ನವಾಗಿ ಮೂಡಿಬಂದಿವೆ ಅಂತಿದ್ದಾರೆ ಸಿನಿ ಪಂಡಿತರು.
ಅಂದಹಾಗೆ. ಶಶಿಕುಮಾರ್ ಅನ್ನೋ ಹೊಸ ನಿರ್ಮಾಪಕರು ಹಣ ಸುರಿದಿರೋ ಚಿತ್ರವನ್ನ ನಿರ್ದೇಶನ ಮಾಡಿರೋದು ಕೂಡ ನವ ನಿರ್ದೇಶಕ ಲಕ್ಷ್ಮಿ ದಿನೇಶ್ ಒಟ್ಟಾರೆ ಹೊಸಬರೇ ನಿರ್ಮಿಸಿರೋ ಚಿತ್ರದಲ್ಲಿ ಸಂಕಲನಕಾರರೂ ಸೇರಿದಂತೆ ಹಲವು ತಂತ್ರಜ್ಞರು 2013ರಲ್ಲಿ ಗೆದ್ದ ಸಿಂಪಲ್ಲಾಗ್ ಒಂದ್ ಲಲ್ ಸ್ಟೋರಿ ತಂಡದವ್ರು ಅನ್ನೋದು ವಿಶೇಷ.
ಇಷ್ಟಕ್ಕೂ 'ಹಾಫ್ ಮೆಂಟ್ಲು' ಕಥೆ ಏನೆಂದರೆ ಹುಡುಗಿಗಾಗಿ, ಹುಡುಗಿಯಿಂದ, ಹುಡುಗಿಗೋಸ್ಕರ ಹುಚ್ಚನಾದ ಮತ್ತೊಬ್ಬ ಹುಡುಗನ ಹೃದಯ ವಿದ್ರಾವಕ ಕಥೆ. ಅಂದಹಾಗೆ ಹಾಫ್ ಮೆಂಟ್ಲು ಚಿತ್ರಕ್ಕೆ ಬಂಡವಾಳ ಹೂಡುತ್ತಿರುವವರು ಜಿ ಶಿವಕುಮಾರ್, ಸಂಗೀತ ಬಿಜೆ ಭರತ್. ಪಕ್ಕಾ ಲವ್ ಸ್ಟೋರಿಯಾಗಿರುವ ಈ ಚಿತ್ರದಲ್ಲಿ ಮೈಕೋ ನಾಗರಾಜ್, ಹರಿ, ತಬಲಾ ನಾಣಿ, ಶ್ರೀನಿವಾಸ ಗೌಡ ಮುಂತಾದವರಿದ್ದಾರೆ.