Don't Miss!
- Automobiles Bullet Train: ಭಾರತದಲ್ಲಿ ಮೊದಲ ಬಾರಿಗೆ ನವೀನ ರೀತಿಯ ಹಳಿ ಬಳಕೆ.. 320 ಕಿ.ಮೀ ವೇಗದಲ್ಲಿ ಓಡುತ್ತೆ ರೈಲು!
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಂಡಾರಿ ಸಹೋದರರ ಎಡವಟ್ಟು : ಜಗ್ಗೇಶ್ ಕಡೆಯಿಂದ ಬಂದ ಒಂದು ಟ್ವೀಟ್
Recommended Video
ನಿರ್ದೇಶಕ ಅನೂಪ್ ಭಂಡಾರಿ ಮತ್ತು ನಟ ನಿರೂಪ್ ಭಂಡಾರಿ ಕನ್ನಡ ಸಿನಿಮಾ ಪ್ರೇಕ್ಷಕರ ಬಗ್ಗೆ ಆಡಿದ್ದ ಮಾತಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ''ರಾಜರಥ' ಸಿನಿಮಾ ನೋಡದ ಪ್ರೇಕ್ಷಕರಿಗೆ 'ಕಚಡ ನನ್ ಮಕ್ಳು'' ಎಂದಿದ್ದ ಭಂಡಾರಿ ಸಹೋದರರ ಮಾತು ಕೇಳಿ ಸಾಕಷ್ಟು ಜನರು ಕೆಂಡಾಮಂಡಲವಾಗಿದ್ದಾರೆ. ಜೊತೆಗೆ ಈಗಾಗಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು ಸಹ ಭಂಡಾರಿ ಬ್ರದರ್ಸ್ ಗೆ ಎಚ್ಚರಿಕೆ ನೀಡಿದ್ದರು.
ಇದೀಗ ಈ ಘಟನೆ ಬಗ್ಗೆ ನಟ ಜಗ್ಗೇಶ್ ಕೂಡ ಟ್ವೀಟ್ ಮಾಡಿದ್ದಾರೆ. ''ನಲ್ಮೆಯ ಮಿತ್ರರೆ, ಭಂಡಾರಿ ಬ್ರದರ್ಸ್ ಬಹಳ ಮುಗ್ದರು. ವೈಯಕ್ತಿಕವಾಗಿ ತಂದೆ ಮಕ್ಕಳು ಇಬ್ಬರು ಪರಿಚಯ. ಅಂದು ಅವರು ಮಾತಾಡಿದ್ದೆಲ್ಲಾ ತಮಾಷೆ ಹರಟೆಯ ನಿರೂಪಣೆ ಸಮಯದಲ್ಲಿ ಆದ ಅವಘಡ. ಉದ್ದೇಶಪೂರ್ವಕ ಅಲ್ಲಾ.. ನಮ್ಮ ಉದ್ಯಮದ ಪ್ರತಿಯೊಬ್ಬರು ಅನ್ನದಾತರನ್ನು ಗೌರವಿಸುತ್ತಾರೆ. ವಿಷಾಲ ಹೃದಯದಿಂದ ವಿಮರ್ಷಿಸಿ ಮರೆತುಬಿಡಿ. ಉದ್ಯಮದ ಹಿರಿಯನಾಗಿ ಹೃದಯದ ಪ್ರಾರ್ಥನೆ'' ಎಂದು ಜಗ್ಗೇಶ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಮನವಿ ಮಾಡಿದ್ದಾರೆ.
ಭಂಡಾರಿ ಬ್ರದರ್ಸ್ ವಿವಾದ : 'ರಾಜರಥ' ಚಿತ್ರ ನೋಡದಿದ್ದವರು 'ಕಚಡ ಲೋಫರ್ ನನ್ ಮಕ್ಳು'
ನಲ್ಮೆಯಮಿತ್ರರೆ ಭಂಡಾರಿ ಬ್ರದರ್ಸ್ ಬಹಳ ಮುಗ್ದರು.ವೈಯಕ್ತಿಕವಾಗಿ ಅವರ ತಂದೆಮಕ್ಕಳು ಪರಿಚಯ.ಅಂದು ಅವರು ಮಾತಾಡಿದ್ದಲ್ಲಾ ತಮಾಷೆ ಹರಟೆಯ ನಿರೂಪಣೆ ಸಮಯದಲ್ಲಿ ಆದ ಅವಘಡ..ಉಧ್ಧೇಶಪೂರ್ವಕ ಅಲ್ಲಾ..
— ನವರಸನಾಯಕ ಜಗ್ಗೇಶ್ (@Jaggesh2) April 3, 2018
ನಮ್ಮಉಧ್ಯಮದ ಪ್ರತಿಯೊಬ್ಬರಿಗು ಅನ್ನಧಾತರನ್ನು ಗೌರವಿಸುತ್ತಾರೆ..ವಿಷಾಲಹೃದಯದಿಂದ ವಿಮರ್ಷಿಸಿ ಮರೆತುಬಿಡಿ..ಉಧ್ಯಮದ ಹಿರಿಯನಾಗಿ ಹೃದಯದ ಪ್ರಾರ್ಥನೆ
ವಿವಾದದ ಬಗ್ಗೆ
ಇತ್ತೀಚಿನ ಸಂದರ್ಶನದ ನಡುವೆ ನಿರೂಪಕಿ Rapid ರಶ್ಮಿ ''ರಾಜರಥ' ಸಿನಿಮಾ ನೋಡದ ಪ್ರೇಕ್ಷಕರು______'' ಎಂದು ಬಿಟ್ಟ ಸ್ಥಳವನ್ನು ತುಂಬಿಸುವಂತೆ ಕೇಳುತ್ತಾರೆ. ಮೊದಲು ಉತ್ತರಿಸಿದ ಅನೂಪ್ ಭಂಡಾರಿ ''ರಾಜರಥ' ಸಿನಿಮಾ ನೋಡದ ಪ್ರೇಕ್ಷಕರು 'ಕಚಡ ನನ್ ಮಕ್ಳು'' ಎಂದು ಹೇಳುತ್ತಾರೆ. ನಂತರ ಆ ಪ್ರಶ್ನೆ ನಟಿ ಅವಾಂತಿಕಾ ಶೆಟ್ಟಿಗೆ ಹೋಗುತ್ತದೆ. ಅವರೂ ಸಹ ಅನೂಪ್ ಅವರ ಉತ್ತರವನ್ನೇ ಮತ್ತೆ ಹೇಳುತ್ತಾರೆ. ಕೊನೆಗೆ ನಿರೂಪ್ ಭಂಡಾರಿ ಕೂಡ ''ರಾಜರಥ' ಸಿನಿಮಾ ನೋಡದ ಪ್ರೇಕ್ಷಕರು 'ಕಚಡ ಮಾತ್ರವಲ್ಲ ಲೋಫರ್ ನನ್ ಮಕ್ಳು'' ಎಂದು ಹೇಳಿಬಿಡುತ್ತಾರೆ.
'ರಾಜರಥ ವಿವಾದ' : ಭಂಡಾರಿ ಹುಡುಗರಿಗೆ ಸಾ.ರಾ.ಗೋವಿಂದು ಎಚ್ಚರಿಕೆ