Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮರೆಯಾದ 'ಸುದರ್ಶನ'ನಿಗೆ ಕಂಬನಿ ಮಿಡಿದ ಕಲಾವಿದರು
ಕನ್ನಡದ ಹಿರಿಯ ನಟ ಆರ್.ಎನ್.ಸುದರ್ಶನ್ ಅವರು ಇನ್ನು ನೆನಪು ಮಾತ್ರ. ಸುಮಾರು 6 ದಶಕಗಳಿಂದ ಕನ್ನಡ ಚಿತ್ರಪ್ರೇಮಿಗಳನ್ನ ರಂಜಿಸುತ್ತಾ ಕನ್ನಡಿಗರ ಮನದಲ್ಲಿ ಜಾಗ ಪಡೆದುಕೊಂಡಿದ್ದ 'ವಿಜಯನಗರದ ವೀರಪುತ್ರ' ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ಅಪಾರ ಕೀರ್ತಿ ಗಳಿಸಿಕೊಂಡಿದ್ದರು.
ನಟ, ಕಂಠದಾನ ಕಲಾವಿದ, ನಿರ್ಮಾಪಕ, ಗಾಯಕನಾಗಿ ಸ್ಯಾಂಡಲ್ ವುಡ್ ಗೆ ಇವರ ಸೇವೆ ಅಪಾರ. ಈ ಸೇವೆಗೆ ಕನಾರ್ಟಕ ಸರ್ಕಾರ, ಕನ್ನಡ ಚಲನಚಿತ್ರರಂಗ ಕನಿಷ್ಠ ಗೌರವ ನೀಡಬೇಕಾಗಿರುವುದು ಧರ್ಮ ಮತ್ತು ಕರ್ತವ್ಯ ಕೂಡ.
ಸುದರ್ಶನ್ ಅವರಿಗೆ ಸಂತಾಪ ಸೂಚಿಸಿದ ನಟಿ ಜಯಮಾಲ'' ಸುದರ್ಶನ್ ಅವರ ಸಾವು ನನಗೆ ತುಂಬ ದುಃಖ ತಂದಿದೆ. ಅವರು ಚೆನ್ನೈನಲ್ಲಿದ್ದರು, ಅವರು ಮರಳಿ ನಮ್ಮ ನಾಡಿಗೆ ಬಂದರು. 'ಸತಿ ಸಲೋಚನ' ಚಿತ್ರಕ್ಕೆ ಕೊಡುಗೆ ನೀಡಿದವರಿಗೆ ಗೌರವಿಸಬೇಕು. ಸಿನಿಮಾ ಎನ್ನುವುದು ನಮ್ಮ ಕುಟುಂಬ'' ಎಂದಿದ್ದಾರೆ.
ಇನ್ನು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ ''ಅವರ ಇಡೀ ಕುಟುಂಬ ಸಿನಿಮಾರಂಗಕ್ಕೆ ದಶಕಗಳ ಕಾಲ ಸೇವೆ ನೀಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರು ಹಿರಿಯ ಕಲಾವಿದರಾಗಿದ್ದರೂ, ತುಂಬ ಶ್ರದ್ಧೆಯಿಂದ ಬದುಕಿದ್ದವರು. ಸರ್ಕಾರ ಮತ್ತು ಉದ್ಯಮಿ ಅವರಿಗೆ ಗೌರವ ನೀಡಬೇಕು'' ಎಂದು ಬೇಸರ ವ್ಯಕ್ತಪಡಿಸಿದರು.
ಸುದರ್ಶನ್ ರವರ ಆತ್ಮಕ್ಕೆ ಶಾಂತಿ ಸಿಗಲಿ!
— ನವರಸನಾಯಕ ಜಗ್ಗೇಶ್ (@Jaggesh2) September 8, 2017
ಇನ್ನು ಜಗ್ಗೇಶ್ ಅವರು ಟ್ವೀಟ್ ಮಾಡಿ ಸುದರ್ಶನ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ.
ಹಿರಿಯ ನಟ ಶಿವರಾಂ ಮಾತನಾಡಿ ''60 ವರ್ಷ ಸಿನಿಮಾ ರಂಗದಲ್ಲಿ ಕೆಲಸ ಮಾಡಿದ್ದಾರೆ. ಅವರ ಕುಟುಂಬ ಪೂರ್ತಿ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದರು. ಇವರ ಸೇವೆ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿಯನ್ನ ನೀಡಿ ರಾಜ್ಯ ಸರ್ಕಾರ ಗೌರವಿಸಿದೆ'' ಎಂದು ಸ್ನೇಹಿತನನ್ನ ನೆನೆಸಿಕೊಂಡರು.