Don't Miss!
- News ಬೆಂಗಳೂರಲ್ಲಿ ಬೋರ್ವೆಲ್ ನಿರ್ವಹಣೆಗೆ ಆಧುನಿಕ ತಂತ್ರಜ್ಞಾನ ಅಳವಡಿಕೆ
- Technology Best Coolers: ಭಾರತದಲ್ಲಿ 5 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ ಇರುವ ಅತ್ಯುತ್ತಮ ಕೂಲರ್ಗಳು! ಫೀಚರ್ಸ್ ಏನಿದೆ?
- Sports IPL 2024: ಮುಂಬೈ ಇಂಡಿಯನ್ಸ್ಗೆ ಆಘಾತದ ಮೇಲೆ ಆಘಾತ; ಸ್ಟಾರ್ ಬೌಲರ್ ಔಟ್
- Lifestyle ಫ್ಲ್ಯಾಟ್ನಲ್ಲಿ ವಾಸಿಸಲು ಹೋಗುವಾಗ ಸಮೃದ್ಧಿ, ಆರೋಗ್ಯಕ್ಕಾಗಿ ವಾಸ್ತು ಹೀಗಿದೆಯೇ ಎಂದು ನೋಡಬೇಕು
- Automobiles ಡಿ ಬಾಸ್ ಪತ್ನಿ ಖರೀದಿಸಿದ್ದು ಸಾಮಾನ್ಯ ಕಾರಲ್ಲ: ಬಂಗಲೆಯಂತಹ ಇಂಟೀರಿಯರ್!
- Finance ಭಾರತದಲ್ಲಿ ಚಿನ್ನದ ಬೆಲೆ ಇಳಿಕೆ, ನಿಮ್ಮ ನಗರದಲ್ಲಿ 24 ಕ್ಯಾರೆಟ್ ಚಿನ್ನದ ದರ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾಡಹಬ್ಬಕ್ಕೆ ಲಕ್ಷ್ಮಿ...ನೋ ವನ್ ಕ್ಯಾನ್ ಟಚ್ ಮೀ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಪ್ರಿಯಾಮಣಿ ಅಭಿನಯದ ಲಕ್ಷ್ಮಿ ಚಿತ್ರ ಗ್ರಾಫಿಕ್ಸ್ ಕಾರಣದಿಂದ ಲೇಟ್ ಆಗುತ್ತಿದೆ ಎಂದು ಚಿತ್ರದ ನಿರ್ಮಾಪಕ ಭಾಸ್ಕರ್ ಹಾಗೂ ಆದಿ ನಾರಾಯಣ ತಿಳಿಸಿದ್ದಾರೆ. ಹೆಸರಾಂತ ಉದ್ಯಮ ಭರಣಿ ಮಿನರಲ್ಸ್ ಅವರ ಮೊದಲ ಪ್ರಯತ್ನ 'ಲಕ್ಷ್ಮಿ'.
ಈ ಚಿತ್ರ ಭರಣಿ ಮಿನರಲ್ಸ್ ನಿರ್ಮಾಣದ ಚೊಚ್ಚಲ ಚಿತ್ರವಾದರೂ ತೆರೆಕಂಡಿದ್ದು ಮಾತ್ರ ಆರ್ ಚಂದ್ರು ನಿರ್ದೇಶನದ 'ಕೋ..ಕೋ...ಕೋಳಿ ಕೋತಿ' ಚಿತ್ರ. ಈಗ 'ಲಕ್ಷ್ಮಿ' ಚಿತ್ರಕ್ಕೆ ಎರಡು ಹಾಡುಗಳು ಮಾತ್ರ ಬಾಕಿ ಉಳಿದ್ದಿದ್ದು ಮಾತುಗಳ ಲೇಪನ ಕಾರ್ಯ ಮುಗಿದಿದೆ.
ಉಳಿದ ಎರಡು ಹಾಡುಗಳ ಚಿತ್ರೀಕರಣಕ್ಕಾಗಿ ಸ್ವಿಟ್ಜರ್ಲ್ಯಾಂಡ್ ಗೆ ಹಾರಿದ್ದಾರೆ ಚಿತ್ರದ ನಾಯಕ ನಟ ಶಿವಣ್ಣ ಹಾಗೂ ಪ್ರಿಯಾಮಣಿ. ನಾಡಹಬ್ಬ ದಸರಾ ವೇಳೆಗೆ 'ಲಕ್ಷ್ಮಿ' ಅನ್ನು ತೆರೆಗೆ ತರಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಅದ್ದೂರಿ ಮುಹೂರ್ತದ ಬಳಿಕ ಬೆಂಗಳೂರು ಹಾಗೂ ಹೊರದೇಶಗಳಲ್ಲೂ ಚಿತ್ರೀಕರಣ ಮಾಡಿ ತಾಂತ್ರಿಕ ಗ್ರಾಫಿಕ್ಸ್ ಕೆಲಸಕ್ಕಾಗಿ ಹಲವಾರು ತಿಂಗಳುಗಳೆ ಹಿಡಿಯಿತು ಎಂದು ತಿಳಿಸುತ್ತಾರೆ ನಿರ್ದೇಶಕ ರಾಘವ ಲೋಕಿ.
ಗುರುಕಿರಣ್ ಅವರು ಆರು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಕೆ ಎಸ್ ಚಂದ್ರಶೇಖರ್ ಅವರ ಛಾಯಾಗ್ರಹಣ, ಕೆ. ಎಂ ಪ್ರಕಾಶ್ ಅವರ ಸಂಕಲನ, ಎಂ ಎಸ್ ರಮೇಶ್ ಅವರ ಸಂಭಾಷಣೆ, ಇಸ್ಮಾಯಿಲ್ ಅವರ ಕಲಾ ನಿರ್ದೇಶನ, ಥ್ರಿಲ್ಲರ್ ಮಂಜು ಸ್ಟಂಟ್ಸ್, ಪ್ರದೀಪ್ ಆಂಟೋನಿ ನೃತ್ಯ ನಿರ್ದೇಶನ, ಆನಂದಪ್ರಿಯ ಅವರ ಸಹಾಯ ನಿರ್ದೇಶನ, ಬಾಬು ಹಾಗೂ ಸಾನಿಯಾ ಸರ್ದಾರಿಯ ವಸ್ತ್ರ ವಿನ್ಯಾಸ ಚಿತ್ರಕ್ಕಿದೆ.
ಆಶಿಷ್ ವಿದ್ಯಾರ್ಥಿ, ರವಿಕಾಳೆ, ವಿನ್ಸೆಂಟ್, ಕೋಮಲ್, ರಂಗಾಯಣ ರಘು ಹಾಗೂ ಇತರರು ಪಾತ್ರವರ್ಗದಲ್ಲಿದ್ದಾರೆ. ಲಕ್ಷ್ಮಿ ಚಿತ್ರದ ಅಡಿಬರಹ "ನೋ ವನ್ ಕ್ಯಾನ್ ಟಚ್ ಮೀ". ಆಕ್ಷನ್ ಥ್ರಿಲ್ಲರ್ ಆದ ಚಿತ್ರದ ಕಥಾವಸ್ತುವು ಭಿನ್ನವಾಗಿದೆ. ಸಾಮಾನ್ಯನೊಬ್ಬ ಭಯೋತ್ಪಾದನೆಯೊಂದಿಗೆ ಮುಖಾಮುಖಿಯಾಗುವುದೇ ಚಿತ್ರದ ಕಥಾಹಂದರ. (ಒನ್ಇಂಡಿಯಾ ಕನ್ನಡ)