ಕವಿ, ಕಾದಂಬರಿಕಾರ ಎಂಎನ್ ವ್ಯಾಸರಾವ್ ಅಸ್ತಂಗತ

By Mahesh

ನಾನು ಬ್ಯಾಂಕ್ ಉದ್ಯೋಗಿಯಾಗಿದ್ದಾಗ (1974) ಪುಟ್ಟಣ್ಣ ಕಣಗಾಲ್‌ರವರು 'ಲೆಕ್ಕದ ಮೇಲೆ' ಹಾಡು ಬರೆಯಲು ಕೇಳಿದರು. ಸನ್ನಿವೇಶ - ಇಷ್ಟವಿಲ್ಲದೆಯೂ ಇರಬೇಕಾದ ಮನೆಯಲ್ಲಿ ಎಲ್ಲಕ್ಕೂ ಲೆಕ್ಕವಿಟ್ಟು ಹಣ ಕೊಡುವೆನೆಂಬ ಮಹಿಳೆಗೆ ಆ ಮನೆಯಾತ ದ್ವಂದ್ವ ನಿವಾರಿಸುವುದು. ಪುಟ್ಟಣ್ಣ, ರವಿಯವರ ಜತೆ ಪ್ರಯಾಣದಲ್ಲಿ ಎಳನೀರು ಕುಡಿವಾಗ ನಡೆದ ಸಂಭಾಷಣೆ, ಪ್ರಕೃತಿ ಏನ್ ಲೆಕ್ಕ ಇಡತ್ತೆ ಸಾರ್? ಎಂದ ನನಗೆ 'ಬಿಡಿ ಬಂತು ಹಾಡು' ಎಂದರು ಪುಟ್ಟಣ್ಣ. ಆಗ ಮೂಡಿದ ಹಾಡೇ 'ನಾಕೊಂದ್ಲ ನಾಕು... ಇಷ್ಟೇ ಲೆಕ್ಕದ ನಂಟು'. ತಾಳ್ಮೆಯಿಂದ ಪ್ರೋತ್ಸಾಹಿಸಿ ರಾಗದ ಲೆಕ್ಕಾಚಾರ ತಿಳಿಸಿ ಮುನ್ನಡೆಸಿದರು. ಎಂದು ವಿಕ್ರಮ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಕವಿ ಎಂಎನ್ ವ್ಯಾಸರಾವ್ ಅವರು ಹಾಡು ಹುಟ್ಟಿದ ಕಥೆ ಹೇಳಿಕೊಂಡಿದ್ದರು.

'ಶುಭಮಂಗಳ' ಚಿತ್ರದಲ್ಲಿ ನಾಕ್ಲೊಂದ ನಾಕು, ನಾಕೆರಡ್ಲ ಎಂಟು ಹಾಡು ಬರೆದ ವ್ಯಾಸರಾವ್ ಅವರ ನೀ ಇಲ್ಲದೆ, ನನಗೇನಿದೆ.. ಭಾವಗೀತೆ ಜನಪ್ರಿಯ. ಭಾನುವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದ ಕವಿಗೆ ಅಭಿಮಾನಿಗಳು ಅಶ್ರುತರ್ಪಣ ಸಲ್ಲಿಸಿದ್ದಾರೆ.

Kannada poet Lyricist MN Vyasarao passes away

ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಕೆಂಪೇಗೌಡ, ಸ್ವರಮಂದಾರ, ಆರ್ಯಭಟ ಪ್ರಶಸ್ತಿ ವಿಜೇತ ಸೃಜನಶೀಲ ಕವಿ ಬಾರದ ಲೋಕಕ್ಕೆ ಪ್ರಯಾಣಿಸಿದ್ದಾರೆ..

More from Filmibeat

English summary
Kannada poet Lyricist MN Vyasarao passes away.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X