Don't Miss!
- News Lok Sabha Election 2024 Phase 1 Polling LIVE: ಲೋಕಸಭಾ ಚುನಾವಣೆ 2024ರ ಮೊದಲ ಹಂತದ ಮತದಾನ!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕವಿ, ಕಾದಂಬರಿಕಾರ ಎಂಎನ್ ವ್ಯಾಸರಾವ್ ಅಸ್ತಂಗತ
ನಾನು ಬ್ಯಾಂಕ್ ಉದ್ಯೋಗಿಯಾಗಿದ್ದಾಗ (1974) ಪುಟ್ಟಣ್ಣ ಕಣಗಾಲ್ರವರು 'ಲೆಕ್ಕದ ಮೇಲೆ' ಹಾಡು ಬರೆಯಲು ಕೇಳಿದರು. ಸನ್ನಿವೇಶ - ಇಷ್ಟವಿಲ್ಲದೆಯೂ ಇರಬೇಕಾದ ಮನೆಯಲ್ಲಿ ಎಲ್ಲಕ್ಕೂ ಲೆಕ್ಕವಿಟ್ಟು ಹಣ ಕೊಡುವೆನೆಂಬ ಮಹಿಳೆಗೆ ಆ ಮನೆಯಾತ ದ್ವಂದ್ವ ನಿವಾರಿಸುವುದು. ಪುಟ್ಟಣ್ಣ, ರವಿಯವರ ಜತೆ ಪ್ರಯಾಣದಲ್ಲಿ ಎಳನೀರು ಕುಡಿವಾಗ ನಡೆದ ಸಂಭಾಷಣೆ, ಪ್ರಕೃತಿ ಏನ್ ಲೆಕ್ಕ ಇಡತ್ತೆ ಸಾರ್? ಎಂದ ನನಗೆ 'ಬಿಡಿ ಬಂತು ಹಾಡು' ಎಂದರು ಪುಟ್ಟಣ್ಣ. ಆಗ ಮೂಡಿದ ಹಾಡೇ 'ನಾಕೊಂದ್ಲ ನಾಕು... ಇಷ್ಟೇ ಲೆಕ್ಕದ ನಂಟು'. ತಾಳ್ಮೆಯಿಂದ ಪ್ರೋತ್ಸಾಹಿಸಿ ರಾಗದ ಲೆಕ್ಕಾಚಾರ ತಿಳಿಸಿ ಮುನ್ನಡೆಸಿದರು. ಎಂದು ವಿಕ್ರಮ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಕವಿ ಎಂಎನ್ ವ್ಯಾಸರಾವ್ ಅವರು ಹಾಡು ಹುಟ್ಟಿದ ಕಥೆ ಹೇಳಿಕೊಂಡಿದ್ದರು.
'ಶುಭಮಂಗಳ' ಚಿತ್ರದಲ್ಲಿ ನಾಕ್ಲೊಂದ ನಾಕು, ನಾಕೆರಡ್ಲ ಎಂಟು ಹಾಡು ಬರೆದ ವ್ಯಾಸರಾವ್ ಅವರ ನೀ ಇಲ್ಲದೆ, ನನಗೇನಿದೆ.. ಭಾವಗೀತೆ ಜನಪ್ರಿಯ. ಭಾನುವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದ ಕವಿಗೆ ಅಭಿಮಾನಿಗಳು ಅಶ್ರುತರ್ಪಣ ಸಲ್ಲಿಸಿದ್ದಾರೆ.
ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಕೆಂಪೇಗೌಡ, ಸ್ವರಮಂದಾರ, ಆರ್ಯಭಟ ಪ್ರಶಸ್ತಿ ವಿಜೇತ ಸೃಜನಶೀಲ ಕವಿ ಬಾರದ ಲೋಕಕ್ಕೆ ಪ್ರಯಾಣಿಸಿದ್ದಾರೆ..