Don't Miss!
- News 'ಚೆಂಬು' ಜಾಹೀರಾತಿನ ಮೂಲಕ ಮೋದಿ ಸರ್ಕಾರದ ವಿರುದ್ದ ನೇರ ದಾಳಿಗಿಳಿದ ಕಾಂಗ್ರೆಸ್
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪಂಕಜ್ 'ರಣ'ಕಹಳೆಗೆ ಸೆನ್ಸಾರ್ ರೆಡ್ ಸಿಗ್ನಲ್
ಹಾಗಿದ್ದರೆ ರಣ ಚಿತ್ರದಲ್ಲಿ ಅಂಥದ್ದೇನಿದೆ ಎಂದರೆ ಸೆನ್ಸಾರ್ ಮಂಡಳಿ ಪ್ರಕಾರ 'ರಣ ಚಿತ್ರದಲ್ಲಿ ಬರೀ ರಣಕಹಳೆ. ಇಡೀ ಸಿನಿಮಾ ರಕ್ತದ ಮಳೆ ಸುರಿಸುತ್ತದೆ. ಎಲ್ಲಾ ದೃಶ್ಯಗಳಲ್ಲಿ ಕೇವಲ ರಕ್ತದೋಕುಳಿ. ಬರೋಬ್ಬರಿ ಏಳು ಹತ್ಯೆಗಳು, ಭಾರೀ ಬುಲೆಟ್ ಸದ್ದುಗಳು. ಇಂತಹ ಚಿತ್ರಕ್ಕೆ ಸೆನ್ಸಾರ್ 'ಪ್ರಮಾಣ ಪತ್ರ' ಕೊಡಲು ನಮ್ಮಿಂದಂತೂ ಸಾಧ್ಯವಿಲ್ಲ" ಎಂದು ಪ್ರಾದೇಶಿಕ ಸೆನ್ಸಾರ್ ಮಂಡಳಿ ಕೈ ಎತ್ತಿದೆ.
ಈಗ ನಿರ್ಮಾಪಕ ಶಿವಾನಂದ ಮಾದಶೆಟ್ಟಿ ಆಯ್ಕೆ ರಿವೈಸ್ ಕಮಿಟಿ ಮುಂದೆ ಹೋಗಿದ್ದಾರೆ. ಚಿತ್ರ ಟ್ರಿಬ್ಯುನಲ್ ಗೆ ಹೋಗಿದೆ. ಅಲ್ಲಿಂದ ಉತ್ತರ ಬರುವವರೆಗೆ ಕಾಯಲೇಬೇಕು. ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಬೇರೆ ಇದ್ದಾರೆ. ಸುಪ್ರೀತಾ, ಸೋನಿಯಾ ಗೌಡ ಎಂಬಿಬ್ಬರು ನಾಯಕಿಯರೂ ಇದ್ದಾರೆ. ರಣ ಚಿತ್ರವನ್ನು ಮುಗಿಸಿದ್ದಲ್ಲದೇ ಅದೇ ಪಂಕಜ್ ಗೆ 'ರೆಡ್' ಎಂಬ ಇನ್ನೊಂದು ಚಿತ್ರವನ್ನೂ ಘೋಷಿಸಿ ಅದನ್ನೂ ಚಿತ್ರೀಕರಿಸುತ್ತಿದ್ದಾರೆ.
ಒಟ್ಟಿನಲ್ಲಿ ಈ ವಿವಾದದಿಂದಾದರೂ ಚಿತ್ರಕ್ಕೆ ಲಾಭ ಆಗಬಹುದೋ ಏನೋ! ಪಂಕಜ್ ಸದ್ಯಕ್ಕೆ ಸಾಲು ಸಾಲು ಚಿತ್ರಗಳ ಸೋಲಿನ ಸರದಾರ. ರಣ ಮೂಲಕವಾದರೂ ಗೆಲ್ಲುವ ಪಣ ತೊಟ್ಟಿದ್ದಾರೆ. ಆದರೆ ಅಷ್ಟರಲ್ಲೇ ದೊಡ್ಡ ವಿಘ್ನವೊಂದು ಬಂದು ಕೂತಿದೆ. ಚಿತ್ರದಲ್ಲಿರುವ ಅದೆಷ್ಟು ಹತ್ಯೆಗಳನ್ನು ಕಿತ್ತು ಬೀಸಾಕಬೇಕೋ ಏನೋ! ಎಲ್ಲಾ ಹೋದರೆ ಆಕ್ಷನ್ ಬೇಸ್ಡ್ ಚಿತ್ರದ ಹೆಸರಿಗೆ ಬೆಲೆಯಾದರೂ ಎಲ್ಲಿರುತ್ತೆ ಹೇಳಿ...? (ಒನ್ ಇಂಡಿಯಾ ಕನ್ನಡ)