Don't Miss!
- News ಮೈತ್ರಿ ಹೆಸರಿನಲ್ಲಿ ಬೆನ್ನಿಗೆ ಚೂರಿ ಹಾಕಿದರು; ಎಚ್.ಡಿ. ಕುಮಾರಸ್ವಾಮಿ ಆಕ್ರೋಶ
- Automobiles KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಾಯಕಿ ಹರಿಣಿ ತಂದೆ ಅನುಮಾನಾಸ್ಪದ ಸಾವಿಗಿದೆ 390 ಕೋಟಿ ಸಾಲದ ಲಿಂಕ್!
ತೆಲುಗು-ತಮಿಳು ಭಾಷೆಯ ಜನಪ್ರಿಯ ಗಾಯಕಿ ಹರಿಣಿ ತಂದೆ ಎಕೆ ರಾವ್ ಕೆಲ ದಿನಗಳ ಹಿಂದಷ್ಟೆ ಯಲಹಂಕದ ರೈಲ್ವೆ ನಿಲ್ದಾಣದ ಬಳಿ ಶವವಾಗಿ ಪತ್ತೆಯಾಗಿದ್ದರು.
ರೈಲು ಹಳಿಗಳ ಮೇಲೆ ಶವ ದೊರೆತಿರುವ ಕಾರಣ ಇದು ಆತ್ಮಹತ್ಯೆ ಎಂದು ಪರಿಗಣಿಸಲಾಗಿತ್ತು, ಆದರೆ ಎಕೆ ರಾವ್ ಕುತ್ತಿಗೆ ಹಾಗೂ ಕೈಯ ಮೇಲೆ ಚಾಕುವಿನಿಂದ ಇರಿದ ಗುರುತುಗಳು ಪತ್ತೆಯಾದ ಕಾರಣ ಇದು ಕೊಲೆಯೆಂದು ಅನುಮಾನ ವ್ಯಕ್ತಪಡಿಸಲಾಗಿದೆ.
ಹರಿಣಿ ಕುಟುಂಬದವರು ಕೆಲವು ದಿನಗಳಿಂದ ನಾಪತ್ತೆಯಾಗಿದ್ದರು. ಆದರೆ ಶವ ದೊರೆತ ಮೇಲೆ ಅವರು ರೈಲ್ವೆ ಪೊಲೀಸರ ಮುಂದೆ ಹಾಜರಾಗಿದ್ದು, ತಂದೆ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ ಅವರ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದರು. ಪ್ರಕರಣದ ತನಿಖೆ ನಡೆಸಿರುವ ಪೊಲೀಸರಿಗೆ ಈ ಸಾವಿನ ಹಿಂದೆ ನೂರಾರು ಕೋಟಿ ರೂಪಾಯಿ ಹಣದ ನಂಟಿರುವುದು ಪತ್ತೆಯಾಗಿದೆ.
ಪ್ರತಿಷ್ಠಿತ ಸಂಸ್ಥೆಯೊಂದರ ಸಿಇಓ ಆಗಿದ್ದ ಹರಿಣಿ ತಂದೆ ಎಕೆ ರಾವ್, ತಮ್ಮ ಪರಿಚಯದ ಇಬ್ಬರು ಉದ್ಯಮಿಗಳಿಗೆ ನೂರಾರು ಕೋಟಿ ರುಪಾಯಿ ಸಾಲ ಕೊಡಿಸಲು ಮುಂದಾಗಿದ್ದರು. ಉದ್ಯಮಿ ಗಿರೀಶ್ ಹಾಗೂ ಪಣಿತರನ್ ಎಂಬಾತನಿಗೆ ಹಾಗೂ ಇನ್ನೂ ಒಬ್ಬ ವ್ಯಕ್ತಿಗೆ ಎಕೆ ರಾವ್ ಸಾಲ ಕೊಡಿಸಲು ಮುಂದಾಗಿದ್ದರು. ಅದೂ ಬರೋಬ್ಬರಿ 390 ಕೋಟಿ ರುಪಾಯಿ!
ಡ್ಯಾನಿಯಲ್ ಆರ್ಮ್ಸ್ಟ್ರಾಂಗ್ ಎಂಬಾತನಿಂದ ಗಿರೀಶ್ಗೆ 150 ಕೋಟಿ ರುಪಾಯಿ ಸಾಲ, ಪರಿಣತರನ್ಗೆ 240 ಕೋಟಿ ರುಪಾಯಿ ಸಾಲ ಕೊಡಿಸಲು ಮುಂದಾಗಿದ್ದರು. ಸಾಲ ನೀಡಲು ಮುಂಗಡವಾಗಿ ಡ್ಯಾನಿಯಲ್ ಆರ್ಮ್ಸ್ಟ್ರಾಂಗ್ 5.90 ಕೋಟಿ ರುಪಾಯಿ ಬಡ್ಡಿ ಹಣವನ್ನು ಪಡೆದುಕೊಂಡಿದ್ದ. ಈ ಮೊತ್ತವನ್ನು ಗಿರೀಶ್ ಹಾಗೂ ಪಣಿತರನ್ ನೀಡಿದ್ದರು. ಆದರೆ ಹಣ ಪಡೆದ ಬಳಿಕ ಡ್ಯಾನಿಯಲ್ ಆರ್ಮ್ಸ್ಟ್ರಾಂಗ್ ನಾಪತ್ತೆಯಾಗಿದ್ದ.
ಇದರಿಂದಾಗಿ ಡ್ಯಾನಿಯಲ್, ವಿವೇಕಾನಂದ ಹಾಗೂ ರಾಘವ ವಿರುದ್ಧ ಸುದ್ದಗುಂಟೆಪಾಳ್ಯದಲ್ಲಿ ವಂಚನೆ ಪ್ರಕರಣ ದಾಖಲಿಸಲಾಗಿತ್ತು. ಇದೇ ಪ್ರಕರಣದ ವಿಚಾರವಾಗಿ ಹರಿಣಿ ತಂದೆ ಎಕೆ ರಾವ್ ಅವರನ್ನು ಪೊಲೀಸರು ವಿಚಾರಣೆಗೆ ಕರೆದಿದ್ದರು. ವಿಚಾರಣೆಗೆ ಹಾಜರಾಗಿದ್ದ ಮರುದಿನವೇ ಎಕೆ ರಾವ್ ನಿಧನರಾಗಿದ್ದಾರೆ.
ನವೆಂಬರ್ 23ರಂದು ಯಲಹಂಕ ರೈಲು ನಿಲ್ದಾಣದ ಬಳಿ ಎಕೆ ರಾವ್ ಶವ ದೊರೆತಿದೆ. ಅವರ ಶವದ ಸಮೀತ ಚಾಕು ಪತ್ತೆಯಾಗಿದೆ. ಕೈ ಹಾಗೂ ಕುತ್ತಿಗೆಯ ಭಾಗದಲ್ಲಿ ಚಾಕುವಿನಿಂದ ಇರಿದ ಗುರುತುಗಳಿವೆ. ಜೊತೆಗೆ ಅವರ ಶವದ ಬಳಿ ದೂರು ಪ್ರತಿಯೊಂದು, ಕೆಲವು ದಾಖಲೆಗಳು, ಆಧಾರ್ ಕಾರ್ಡ್ಗಳು ಪತ್ತೆಯಾಗಿವೆ. ಎಕೆ ರಾವ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ಪಡೆದಿದ್ದು, ವರದಿ ಬಂದ ಬಳಿಕ ಇದು ಆತ್ಮಹತ್ಯೆಯೋ, ಕೊಲೆಯೊ ಗೊತ್ತಾಗುತ್ತದೆ. ಮೃತ ಎಕೆ ರಾವ್ ಅವರು ಸುಜನಾ ಫೌಂಡೇಶನ್ ಸಂಸ್ಥೆಯಲ್ಲಿ ಸಿಇಓ ಆಗಿ ಕೆಲಸ ಮಾಡುತ್ತಿದ್ದರು. ಜನಪ್ರಿಯ ಸುಜನಾ ಚೌಧರಿ ಈ ಸಂಸ್ಥೆಯನ್ನು ನಡೆಸುತ್ತಾರೆ.
ಹರಿಣಿ ತೆಲುಗು ಚಿತ್ರರಂಗದಲ್ಲಿ ಜನಪ್ರಿಯ ಹಿನ್ನೆಲೆ ಗಾಯಕಿಯಾಗಿದ್ದಾರೆ. ನೂರಾರು ಸೂಪರ್ ಹಿಟ್ ಹಾಡುಗಳನ್ನು ಹಾಡಿದ್ದಾರೆ. ಎ.ಆರ್.ರೆಹಮಾನ್ ಸಂಗೀತ ನಿರ್ದೇಶನದ ಆರಂಭದ ಸಿನಿಮಾಗಳಲ್ಲಿ ಹಲವು ಹಾಡುಗಳನ್ನು ಹಾಡಿರುವ ಹರಿಣಿ, ಮಣಿಶರ್ಮಾ, ಹ್ಯಾರಿಸ್ ಜಯರಾಜ್, ದೇವಿಶ್ರೀಪ್ರಸಾದ್, ಎಸ್ ತಮನ್ ಇನ್ನೂ ಹಲವು ಜನಪ್ರಿಯ ಸಂಗೀತ ನಿರ್ದೇಶಕರಿಗಾಗಿ ಹಾಡುಗಳನ್ನು ಹಾಡಿದ್ದಾರೆ. ತೆಲುಗು ಮಾತ್ರವೇ ಅಲ್ಲದೆ ತಮಿಳಿನಲ್ಲಿಯೂ ನೂರಾರು ಹಿಟ್ ಗೀತೆಗಳನ್ನು ಹರಿಣಿ ನೀಡಿದ್ದಾರೆ.