'ಸತ್ಯಾನಂದ' ಚಿತ್ರಕ್ಕೆ ಹೊಸ ಹೆಸರು 'ಯಾರಿವನು'

By Rajendra

ಕಡೆಗೂ 'ಸತ್ಯಾನಂದ' ಚಿತ್ರಕ್ಕೆ ಟೈಟಲ್ ಬದಲಾಗಿದೆ. ಹೊಸ ಟೈಟಲ್ ಕ್ಯಾಚಿಯಾಗಿದ್ದು ನಟ, ನಿರ್ಮಾಪಕ ಹಾಗೂ ನಿರ್ದೇಶಕ ಮದನ್ ಪಟೇಲ್ ಸಖತ್ ಖುಷಿಯಾಗಿದ್ದಾರೆ. 'ಸತ್ಯಾನಂದ' ಎಂಬ ಶೀರ್ಷಿಕೆಯನ್ನು ಬದಲಾಯಿಸಿ ಎಂದು ಕರ್ನಾಟಕ ಹೈಕೋರ್ಟ್ ಸೂಚಿಸಿರುವ ಹಿನ್ನೆಲೆಯಲ್ಲಿ ಪಟೇಲ್ ಕಾರ್ಯಮಗ್ನರಾಗಿದ್ದರು.

ತಮ್ಮ 'ಸತ್ಯಾನಂದ' ಚಿತ್ರಕ್ಕೆ ಹೊಸ ಟೈಟಲ್ ಸೂಚಿಸಿ ಎಂದು ಅವರು ಕರೆಕೊಟ್ಟಿದ್ದರು. ಸೂಕ್ತ ಶೀರ್ಷಿಕೆ ಸೂಚಿಸಿ ಆಯ್ಕೆಯಾದವರಿಗೆ ರು.5 ಲಕ್ಷ ಬಹುಮಾನ ನೀಡುವುದಾಗಿಯೂ ಘೋಷಿಸಿದ್ದರು. ಮದನ್ ಪಟೇಲ್ ಅವರ ಕರೆಗೆ ಓಗೊಟ್ಟ ಸಾವಿರಾರು ಎಸ್ಎಂಎಸ್ ಗಳು ಬಂದಿವೆ.

Satynanda is now Yaarivanu
ಕಡೆಗೆ ಅವರಿಗೆ ಒಂದು ಶೀರ್ಷಿಕೆ ಇಷ್ಟವಾಗಿಯಿತಂತೆ. ಅದೇನೆಂದರೆ 'ಯಾರಿವನು'? ಎಂಬುದು. ಆದರೆ ಇದೇ ಶೀರ್ಷಿಕೆಯನ್ನು ಒಟ್ಟು ನಾಲ್ಕು ಮಂದಿ ರವಾನಿಸಿದ್ದಾರೆ. ಕಡೆಗೆ ಅವರಲ್ಲಿ ಒಬ್ಬರನ್ನು ಲಕ್ಕಿ ಡಿಪ್ ಮೂಲಕ ಹಿರಿಯ ಪತ್ರಕರ್ತರಾದ ಗಣೇಶ್ ಕಾಸರಗೋಡು ಅವರು ಆಯ್ಕೆ ಮಾಡಿದರು.

ಆಯ್ಕೆಯಾಗಿರುವ ಅದೃಷ್ಟಶಾಲಿ ಹೆಸರು ಮಂಡ್ಯದ ರಾಜೇಶ್. ಈ ಟೈಟಲ್ ಸಮಸ್ಯೆಯೂ ಪರಿಹಾರವಾಗಿದೆ. ಇನ್ನೇನಿದ್ದರೂ ಚಿತ್ರ ಬಿಡುಗಡೆಯಾಗುವುದೊಂದು ಬಾಕಿ ಇದೆ. ಈ ಹಿಂದೆ ವರನಟ ಡಾ.ರಾಜ್ ಕುಮಾರ್ ಅವರು ಅಭಿನಯದಲ್ಲಿ 'ಯಾರಿವನು' ಎಂಬ ಚಿತ್ರ ಮೂಡಿಬಂದಿತ್ತು.

ಕ್ರೇಜಿಸ್ಟಾರ್ ರವಿಚಂದ್ರನ್ ಅವರ 'ಪ್ರೇಮಲೋಕ' ಚಿತ್ರದಲ್ಲಿ "ಯಾರಿವನು ಈ ಮನ್ಮಥನು..." ಎಂಬ ಹಾಡು ನೆನಪಿರಬೇಕಲ್ಲ. ಬಹುಶಃ 'ಯಾರಿವನು' ಚಿತ್ರದ ನಾಯಕನು ಮನ್ಮಥನೇ ಇರಬೇಕು? (ಒನ್ಇಂಡಿಯಾ ಕನ್ನಡ)

More from Filmibeat

English summary
Manda Patel's 'Satyananda' has now been titled as Yaarivanu. Four people suggested the name Yaarivanu. out of which one lucky person was selected in a lucky dip by senior journalist Ganesh Kasargod. The winner name is Rajashekarand is from Mandya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X