ಜೂಜು ಜಾಹೀರಾತಿಗೆ ವಿರೋಧ: ಸುದೀಪ್ ಹೇಳಿದ್ದೇನು?
ನಟ ಸುದೀಪ್ ಇಂದು (ಸೆಪ್ಟೆಂಬರ್ 01) ಸಿದ್ದಗಂಗೆಗೆ ಭೇಟಿ ನೀಡಿದ್ದರು. ಈ ಸಮಯ ಮಾಧ್ಯಮದೊಟ್ಟಿಗೆ ಹಲವು ವಿಷಯ ಮಾತನಾಡಿದ ಸುದೀಪ್, ಜೂಜು ಜಾಹೀರಾತಿನ ಬಗ್ಗೆ ಎದ್ದಿರುವ ಅಪಸ್ವರದ ಬಗ್ಗೆಯೂ ಮಾತನಾಡಿದರು.
Recommended Video
ಅದ್ದೂರಿಯಾಗಿ ನಡೀತು ಯಶ್ ಮಗನ ನಾಮಕರಣ | Filmibeat Kannada
ನಟ ಚೇತನ್, ಜೂಜು ಜಾಹೀರಾತು (ರಮ್ಮಿ) ಜಾಹೀರಾತಿನ ಬಗ್ಗೆ ಟ್ವೀಟ್ ಮಾಡಿದ್ದು, ಕೇವಲ ಹಣಕ್ಕಾಗಿ ಮದ್ಯ (ಸೋಡ), ಗುಟ್ಕಾ/ಪಾನ್ ಮಸಲಾ, ಜೂಜು (ರಮ್ಮಿ) ಇನ್ನು ಇತ್ಯಾದಿಗಳ ಬಗ್ಗೆ ಮುಕ್ತವಾಗಿ ಜಾಹೀರಾತು ನೀಡುವ ಸ್ಟಾರ್ಸ್ಗಳ ಮೇಲೆ ಬೆರಳು ತೋರಿಸದಿರುವುದು ಮೋಸವಲ್ಲವೇ? ಎಂದಿದ್ದರು.
ಚೇತನ್ ಹೇಳಿಕೆಗೆ ತುಸು ಖಾರವಾಗಿಯೇ ಪ್ರತಿಕ್ರಿಯಿಸಿದ ಸುದೀಪ್, 'ಹೇಳಬೇಕು ಎಂದುಕೊಂಡಿರುವುದನ್ನು ನೇರವಾಗಿ ಹೇಳಬೇಕು' ಎಂದಿದ್ದಾರೆ.

ಮುಂದುವರೆದು ಮಾತನಾಡಿದ ಸುದೀಪ್, 'ಅವರು ಸಾಮಾನ್ಯವಾಗಿ ಮೋದಿ ಅಥವಾ ರಾಷ್ಟ್ರಪತಿಗೆ ಹೇಳಿರುತ್ತಾರೆ. ಏಕೆಂದರೆ ಅನುಮತಿ (ಜೂಜು ಹಾಗೂ ಸಂಬಂಧಿತ ಜಾಹೀರಾತಿಗೆ) ಅನುಮತಿ ಕೊಟ್ಟವರು ಅವರೇ ಹಾಗಾಗಿ ಅವರ ಬಗ್ಗೆ ಮಾತನಾಡಿರಬಹುದೇ ಹೊರತು ನನ್ನ ಬಗ್ಗೆ ಅಲ್ಲ' ಎಂದಿದ್ದಾರೆ ಸುದೀಪ್.
English summary
Actor Sudeep talked about Rummy advertisement and allegations about it.


Click it and Unblock the Notifications