Just In
Don't Miss!
- News
ಶಿವಮೊಗ್ಗ-ಬೆಂಗಳೂರು ರೈಲು ಪ್ರಯಾಣಿಕರಿಗೆ ಶುಭ ಸುದ್ದಿ
- Sports
ಶ್ರೀಲಂಕಾದಿಂದಲೇ ಟೀಮ್ ಇಂಡಿಯಾಗೆ ಎಚ್ಚರಿಕೆ ರವಾನಿಸಿದ ಜೋ ರೂಟ್
- Finance
"ಟಿಕ್ ಟಾಕ್ ಸೇರಿ ಚೀನಾದ ಕೆಲವು ಆಪ್ ಗಳಿಗೆ ಭಾರತದಲ್ಲಿ ಶಾಶ್ವತ ನಿಷೇಧ"
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಟ್ಟಾ ಕನ್ನಡಿಗರು ನೋಡಲೇಬೇಕಾದ ಚಿತ್ರ: ಪ್ರಾರ್ಥನೆ
ಪತ್ರಕರ್ತ ಸದಾಶಿವ ಶೆಣೈ ಚೊಚ್ಚಲ ನಿರ್ದೇಶನದ ಚಿತ್ರ 'ಪ್ರಾರ್ಥನೆ'. ಈ ಚಿತ್ರದ ಪ್ರೀಮಿಯರ್ ಪ್ರದರ್ಶನ ಇತ್ತೀಚೆಗೆ ನಡೆಯಿತು. ಡಿಸೆಂಬರ್ ಮೂರನೇ ವಾರದಲ್ಲಿ ಚಿತ್ರ ತೆರೆಕಾಣುತ್ತಿದೆ. ಚಿತ್ರ ವಿಮರ್ಶೆಗಳನ್ನು ತನ್ನ ಅಸಂಖ್ಯಾತ ಓದುಗರಿಗೆ ನೀಡುವಲ್ಲಿ ಸದಾ ಮುಂದಿರುವ ಒನ್ಇಂಡಿಯಾ 'ಪ್ರಾರ್ಥನೆ' ಚಿತ್ರ ವಿಮರ್ಶೆಯನ್ನು ನಿಮ್ಮ ಮುಂದೆ ಸಾದರಪಡಿಸುತ್ತಿದೆ. ನಿರಾತಂಕವಾಗಿ ಓದಿ. ಮುಕ್ತ, ನಿರ್ಭೀತ, ನ್ಯಾಯಸಮ್ಮತ ಅಭಿಪ್ರಾಯಕ್ಕೆ ಸ್ವಾಗತ, ಸಂಪಾದಕ.
ಸಿನಿಮಾಗಳ ಬಗ್ಗೆ ಮೈಲಿಗಟ್ಟಲೇ ಬರೆಯುವ ಸಿನಿಮಾ ಪತ್ರಕರ್ತರು ಸಿನಿಮಾ ಮಾಡಿ ತೋರಿಸಲಿ...ಆಗ ನಮ್ಮ ಕಷ್ಟ ಏನು ಎಂಬುದು ಗೊತ್ತಾಗುತ್ತದೆ! ಹೀಗೆ ಕೆಲ ಸಿನಿಮಾ ಮಂದಿ ಪತ್ರಕರ್ತರು ಬರೆದ ಚಿತ್ರವಿಮರ್ಶೆಗೆ ವಿರುದ್ಧವಾಗಿ ಕಾಮೆಂಟ್ ಮಾಡಿದ್ದನ್ನು ಕೇಳಿದ್ದೇವೆ, ನೋಡಿದ್ದೇವೆ, ನೋಡುತ್ತಲೇ ಇದ್ದೇವೆ. ಅಂಥ ಗಾಂಧಿನಗರದ ಒಂದು ವರ್ಗದ ದರ್ಪದ ಮಂದಿಗೆ ದರ್ಪಣ ಹಿಡಿದಿದ್ದಾರೆ ಸಿನಿಮಾ ಪತ್ರಕರ್ತ ಸದಾಶಿವ ಶೆಣೈ. ಅವರ ನಿರ್ದೇಶನದಲ್ಲಿ ಮೂಡಿಬಂದ ಪ್ರಾರ್ಥನೆ ಚಿತ್ರವನ್ನು ಖಂಡಿತ ರಾಜ್ಯದ ಪ್ರತಿಯೊಬ್ಬ ಪ್ರಜೆಯೂ ನೋಡಬೇಕು!
ಹೌದು, ಇಡೀ ಸಿನಿಮಾ ಹಾಗಿದೆ. ಕನ್ನಡತನದ ಕತ್ತು ಹಿಸುಕ ಹೊರಟಿರುವ ಇಂಗ್ಲೀಷ್ ಭಾಷೆಯ ವಿರುದ್ಧ ಶೆಣೈ ರಣಕಹಳೆ ಊದಿದ್ದಾರೆ. ತಮ್ಮ ಮಕ್ಕಳು ಓದಿ ಉದ್ದಾರ ಆಗಬೇಕಾದರೆ ಇಂಗ್ಲೀಷ್ ಕಾನ್ಮೆಂಟೇ ಖಾಯಂ ಆಗಬೇಕು ಎನ್ನುವ ಅದೆಷ್ಟೋ ಕುಟುಂಬಗಳಿಗೆ ಶೆಣೈ ಎಚ್ಚರಿಕೆಯ ಗಂಟೆ ಭಾರಿಸಿದ್ದಾರೆ.
ಕನ್ನಡದಲ್ಲಿ ಸಿನಿಮಾಗಳೆಂದರೆ ಕಾಸರವಳ್ಳಿ ಮತ್ತು ಕಾಸು ಕೊಟ್ಟು ನೋಡುವ ಸಿನಿಮಾ ಎಂಬ ಎರಡೇ ವರ್ಗ ಇರುವುದು ಎಂಬ ತಪ್ಪು ಕಲ್ಪನೆ ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿದೆ. ಜನ ನೋಡುವ ಚಿತ್ರಕ್ಕೆ ಅವಾರ್ಡ್ ಬರುವುದಿಲ್ಲ. ಅವಾರ್ಡ್ ಬರುವ ಚಿತ್ರವನ್ನು ಜನ ನೋಡುವುದಿಲ್ಲ ಎಂಬ ಅಲಿಖಿತ ಸಿದ್ಧಾಂತಕ್ಕೆ ಅದ್ಯಾಕೋ ಪ್ರೇಕ್ಷಕ ಬಲಿಯಾಗುತ್ತಿದ್ದಾನೆ. ಅವೆಲ್ಲವನ್ನೂ ಮೆಟ್ಟಿ ನಿಂತು ಶೆಣೈ ಪ್ರಾರ್ಥನೆ ಸಿನಿಮಾ ಮಾಡಿದ್ದಾರೆ.
ಇಡೀ ಚಿತ್ರ ಪ್ರತೀ ಹಂತದಲ್ಲೂ ಒಂದು ಗುಣಮಟ್ಟದ ಕಾತುರತೆ, ಕೌತುಕತೆ ಕಾಪಾಡಿಕೊಂಡು ಹೋಗುತ್ತದೆ. ಶೆಣೈ ಜೊತೆ ಜಿ.ಎಂ. ಪ್ರಹ್ಲಾದ್ ಅವರ ಅಪರೂಪ ಎನಿಸುವ ಕಥೆಯೂ ಕೈ ಜೋಡಿಸಿದೆ. ಇಡೀ ಚಿತ್ರ ಶ್ರೀಮಂತವಾಗಿ ಮೂಡಿಬರಲು ಕಾರಣರಾದವರು ಅನಂತನಾಗ್. ಅನಂತ್ ಇತ್ತೀಚಿನ ದಿನಗಳಲ್ಲಿ ಈ ಮಟ್ಟದ ಕಾಡುವ ಪಾತ್ರ ಮಾಡಿದ್ದು ನೆನಪಿಲ್ಲ.