Don't Miss!
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಜಾಲ' ಇದು ನರಭಕ್ಷಕರ ಪ್ರಕ್ಷುಬ್ಧ ಕತೆ
ಒಂದು ಸಸ್ಪೆನ್ಸ್ ಥ್ರಿಲ್ಲರ್ ಕತೆಯನ್ನು ಹೀಗೂ ತೋರಿಸಬಹುದಾ?ಕೆಲವರು ಕಾಡಿಗೆ ಹೋಗುತ್ತಾರೆ. ಹೋಗ್ತಾ ಹೋಗ್ತಾ ಕಾನನದಲ್ಲಿ ಮಾಯವಾಗುತ್ತಾರೆ. ಎಲ್ಲಿಗೆ ಹೋದರು? ಏನಾದರು? ಆ ರಹಸ್ಯ ಬೇಸಲು ಹೋದವರು ಎಲ್ಲಿ ಮರೆಯಾದರು? ಈ ಎಲ್ಲ ಪ್ರಶ್ನೆಗೆ ಉತ್ತರ ಹಾಗೂ ಪ್ರಶ್ನೆ ಜಾಲ ಚಿತ್ರ!
ಇದು ನರಭಕ್ಷಕರ ಪ್ರಕ್ಷುಬ್ಧ ಕತೆ. ಸಾಯುವವರ ಸಾವಯವ ಚಿತ್ರಕತೆ. ನಿರ್ದೇಶಕ ನಾಗನಾಥ ಜೋಶಿ ಒಂದು ವಿಚಿತ್ರ ವ್ಯಥೆಯನ್ನು ಭಯಾನಕ ರೀತಿಯಲ್ಲಿ ಚಿತ್ರಿಸಿದ್ದಾರೆ. ಹತ್ತಾರು ಹುಡುಗಿಯರು, ಜತೆಗೆ ಹುಡುಗರು, ಒಂದಷ್ಟು ರೊಮ್ಯಾನ್ಸ್, ನಿಮಾನ್ಸ್, ಪಡ್ಡೆಗಳಿಗೆ ಎಂಜಾಯ್ ಮಾಡಲು ಮತ್ತೊಂದು ಚಾನ್ಸ್. ಕತೆಯ ನಿರೂಪಣೆಗೆ ಬಳಸಿರುವ ಲೊಕೇಶನ್ ಚೆನ್ನಾಗಿದೆ. ಆದರೆ ಅದನ್ನು ಕ್ಯಾಮೆರಾ ಕಣ್ಣಲ್ಲಿ ಹಿಡಿದಿಡಲು ನಿರ್ದೇಶಕರು ಪರ ಪರ ಪರದಾಡಿದ್ದಾರೆ.
ಒಟ್ಟಾರೆ ಇಡೀ ಚಿತ್ರವನ್ನು ಕಾಮಿಡಿ ರೂಪದಲ್ಲಿ ನೋಡಿದರೆ ಪ್ರೇಕ್ಷಕರು ಬಚಾವ್. ಹೊಸಬರೇ ಹೆಚ್ಚಿರುವ ಜಾಲದಲ್ಲಿ ಪ್ರತೀ ದೃಶ್ಯವೂ ಹಾಸ್ಯದ ಜಲಧಾರೆ. ವಿಚಿತ್ರ ಹಾಗೂ ವಿನೋದದ ಅಮೃತಧಾರೆ. ಜೋಶಿ ಆಯ್ಕೆ ಮಾಡಿಕೊಂಡ ಕತೆಯ ತಿರುಳು ಇಷ್ಟವಾಗುತ್ತದೆ. ಸಂಭಾಷಣೆ ಸಾಂಗವಾಗಿ ಸಾಗುತ್ತದೆ. ನೋಡ್ತಾ ನೋಡ್ತಾ ಕಳೆದದ್ದೆಲ್ಲಿ, ಕಳೆದುಕೊಂಡಿದ್ದೆಲ್ಲಿ ಎನ್ನುವುದು ನಿಮ್ಮ ತುರ್ತು ಅವಗಾಹನೆಗೆ!