Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶ್ರವಂತ್, ಮನಿಶ್ ಚಂದ್ರ 'ನಾವಿಕ' ಚಿತ್ರವಿಮರ್ಶೆ
ಸಹೋದರರ ಸವಾಲ್ ಆಗಿರುವ 'ನಾವಿಕ' ಚಿತ್ರದಲ್ಲಿ, ನಾಯಕರಲ್ಲೊಬ್ಬರಾದ ಶಂಕರ್ (ಶ್ರವಂತ್ ರಾವ್) ಕಾನೂನಿನ ಚೌಕಟ್ಟಿನಲ್ಲಿ ಸಮಾಜ ಘಾತುಕರನ್ನು ನಿಯಂತ್ರಿಸಬೇಕೆಂಬ ಉದ್ದೇಶ, ಗುರಿ ಹೊಂದಿರುವವರು. ಆದರೆ ಇನ್ನೊಬ್ಬರು ಸೂರಿ (ಮನಿಶ್ ಚಂದ್ರ) ಕಾನೂನನ್ನು ನಂಬಿ ಕುಳಿತರಾಗದು, ಸಮಾಜ ಕಂಟಕರನ್ನು ಮುಗಿಸಲೇಬೇಕು ಎಂಬ ಮಾತಿಗೆ ಕಟ್ಟುಬಿದ್ದವರು. ಇವರಿಬ್ಬರ ಗುರಿ ಒಂದೇ ಆದರೂ ದಾರಿ ಬೇರೆ ಬೇರೆ. ಸಹೋದರರಿಬ್ಬರ 'ಶತ್ರು ಸಂಹಾರ'ದ ಕಥೆಯನ್ನು ನೀಟಾಗಿ ಮನಮುಟ್ಟುವಂತೆ ಹೇಳಬೇಕಿದ್ದ ನಿರ್ದೇಶಕ ಸೇನ್ ಪ್ರಕಾಶ್, ಅಬ್ಬರದ ನಿರೂಪಣೆ ನಂಬಿ ಮೋಸಹೋಗಿದ್ದಾರೆ ಎನ್ನಬಹುದು.
ಬಿಗಿಯಾದ ನಿರೂಪಣೆ ಮೇಲೆ ಸಾಗಬೇಕಾಗಿದ್ದ ಚಿತ್ರಕಥೆ, ಉದ್ದುದ್ದ ಹಾಗೂ ಅನಗತ್ಯ ವೈಭವೀಕರಣದ ಸಂಭಾಷಣೆ ಮೂಲಕ ಹಾದಿ ತಪ್ಪಿದೆ. ನಿರ್ದೇಶಕರಿಗೆ ಏನೋ ಹೇಳಬೇಕು ಎಂಬುದು ಗೊತ್ತಿದೆಯಾದರೂ ಅದನ್ನು ಚಿತ್ರದಲ್ಲಿ ಪಾತ್ರದ ಮೂಲಕ ಹೇಗೆ ಹೇಳಿಸಬೇಕು ಎಂಬುದಾಗಲೀ ಅಥವಾ ದೃಶ್ಯ ಮಾಧ್ಯಮವಾಗಿರುವ ಸಿನಿಮಾ ಮೂಲಕ ಅದನ್ನು ಪ್ರೇಕ್ಷಕರಿಗೆ ಹೇಗೆ ಮುಟ್ಟಿಸಬೇಕೆಂಬುದಾಗಲೀ ಗೊತ್ತಿಲ್ಲ. ಸಿದ್ಧ ಸೂತ್ರದ ಕಥೆಯೊಂದನ್ನು ಸಾಕಷ್ಟು ಹೋಮ್ ವರ್ಕ್ ಮಾಡಿಕೊಳ್ಳದೇ ತೆರೆಗೆ ತರುವ ಪ್ರಯತ್ನ ಮಾಡಿರುವ ನಿರ್ದೇಶಕರ 'ನಾವಿಕ', ದಾರಿವಿಲ್ಲದೇ ಗಾಳಿಪಟ ಹಾರಿಸಿಬಿಟ್ಟಂತಾಗಿದೆ.
ಚಿತ್ರಕ್ಕೆ ನಾಯಕರಾಗಿರುವ ಶ್ರವಂತ್ ರಾವ್ ಹಾಗೂ ಮನಿಶ್ ಚಂದ್ರ ಇಬ್ಬರ ಅಭಿನಯವೂ ಓಕೆ. ಶ್ರವಂತ್ ರಾವ್ ಪೊಲೀಸ್ ಪಾತ್ರದಲ್ಲಿ ಕಷ್ಟಪಟ್ಟು ನಟಿಸಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಆದರೆ ಡಾನ್ಸ್ ಹಾಗೂ ಫೈಟ್ಸ್ ನಲ್ಲಿ ಅವರು ಲೀಲಾಜಾಲ. ಇನ್ನು ಪಕ್ಕಾ ಪೊರ್ಕಿಯಾಗಿ ಗಮನಸೆಳೆಯಬೇಕಿದ್ದ ಮನಿಶ್ ಚಂದ್ರ, ಇನ್ನಷ್ಟು ಲವಲವಿಕೆಯಿಂದ ನಟಿಸಿಬೇಕಿತ್ತಾದರೂ ಪಾತ್ರಕ್ಕೆ ತಕ್ಕ ಅಭಿನಯ ನೀಡಿದ್ದಾರೆ. ಯಾಕೋ ಚಿತ್ರದ ತುಂಬಾ ಯಾವುದೋ ಹ್ಯಾಂಗೋವರ್ ನಲ್ಲಿ ಇದ್ದಂತೆ ಕಾಣುತ್ತಾರೆ ಮನಿಶ್. ಆದರೆ ಅದು ಚಿತ್ರಕ್ಕೆ ಮೈನಸ್ ಪಾಯಿಂಟ್ ಆಗದಂತೆ ಅವರು ಎಚ್ಚರಿಕೆ ವಹಿಸಿದ್ದನ್ನು ಮೆಚ್ಚಲೇಬೇಕು.
ಉಳಿದಂತೆ, ನಾಯಕಿಯರಾದ ಸ್ವಾತಿ ಮತ್ತು ಎಸ್ಟರ್ ನೊರಾನಾ ಇಬ್ಬರಲ್ಲಿ ಎಸ್ಟರ್ ಅವರು ಸೌಂದರ್ಯದ ಖನಿಯಾಗಿ ಸಾಕಷ್ಟು ಗಮನಸೆಳೆದರೂ ಅವರ ಪಾತ್ರಕ್ಕೆ ಚಿತ್ರದಲ್ಲಿ ಅಷ್ಟೇನೂ ಮಹತ್ವವಿಲ್ಲ. ಆದರೆ ಮಹತ್ವದ ಪಾತ್ರವಿದ್ದರೂ ಅಭಿನಯದಲ್ಲಿ ತಲ್ಲೀನತೆ ಪಡೆದುಕೊಳ್ಳದ ಸ್ವಾತಿ, ಸಿಕ್ಕ ಒಳ್ಳೆಯ ಅವಕಾಶವನ್ನು ತಾವಾಗೇ ಕೈಚೆಲ್ಲಿದ್ದಾರೆ. ಇನ್ನುಳಿದಂತೆ ಪೋಷಕ ಪಾತ್ರಗಳಲ್ಲಿ ಶೋಭರಾಜ್, ಟೆನ್ನಿಸ್ ಕೃಷ್ಣ ಮಿಂಚಿದ್ದಾರೆ. ಹಾಸ್ಯ ಪಾತ್ರದಲ್ಲಿ ಚಿದಾನಂದ ಹಾಗೂ ಹಾಗೂ ನಟ ನೀನಾಸಂ ಅಶ್ವತ್ಥ್, ಪಾತ್ರ ಬಯಸುವ ಅಭಿನಯ ನೀಡಿದ್ದಾರೆ.
ಸಂಗೀತ ನಿರ್ದೇಶಕ ರಾಜ್ ನಾರಾಯಣ್ ಯಾಕೋ ಸರಿಯಾಗಿ ಸಂಗೀತ ನೀಡುವಲ್ಲಿ ವಿಫಲರಾಗಿದ್ದಾರೆ. ಚಿತ್ರದ ಮೈನಸ್ ಪಾಯಿಂಟ್ ಸಾಲಿಗೆ ಸೇರಿರುವ ಅವರ ಸಂಗೀತದಲ್ಲಿ ಒಂದೇ ಒಂದು ಹಾಡು ಚಿತ್ರ ನೋಡಿ ಈಚೆ ಬಂದಾಗ ನೆನಪಿನಲ್ಲಿರುವುದಿಲ್ಲ. ಸಿನಿಟೆಕ್ ಸೂರಿ ಛಾಯಾಗ್ರಹಣ ಚೆನ್ನಾಗಿದೆ. ನಿರ್ಮಾಪಕರೂ ಆಗಿರುವ ರಂಗಸ್ವಾಮಿ ಬಿಳುಗಲಿ ಈ ಚಿತ್ರಕ್ಕೆ ಕಥೆ ಹೆಣೆದಿದ್ದು, ಕಥೆಯನ್ನು ಇನ್ನೂ ಚೆನ್ನಾಗಿ ಮಾಡಬಹುದಿತ್ತು. ಯೋಗಿಯವರ ಉದ್ದುದ್ದ ಸಂಭಾಷಣೆಯಲ್ಲಿ ಧಮ್ ಕಡಿಮೆ. ಸುಬ್ಬು ಸಾಹಸ, ರಾಜು ನೃತ್ಯ ನಿರ್ದೇಶನ ಓಕೆ. ಒಟ್ಟಿನಲ್ಲಿ, ನಾವಿಕ ಚಿತ್ರವನ್ನು ಹತ್ತರ ಜೊತೆ ಹನ್ನೊಂದು ಎಂಬಂತೆ ಒಮ್ಮೆ ನೋಡಿ ಆನಂದಿಸಬಹುದು.