X
ಹೋಮ್ ಚಲನಚಿತ್ರಗಳ ಒಳನೋಟ

2023ರ ಫಸ್ಟ್ ಹಾಫ್ ರಿಪೋರ್ಟ್: ಸ್ಯಾಂಡಲ್‌ವುಡ್‌ನ ಅತ್ಯುತ್ತಮ ಸಿನಿಮಾಗಳ ಪಟ್ಟಿ!

Author Sowmya Bairappa | Published: Thursday, June 22, 2023, 03:34 PM [IST]

2023ರ ಮೊದಲಾರ್ಧ ಮುಗಿದಿದೆ. ಕಳೆದ ವರ್ಷ ಕೆಜಿಎಫ್ ಚಾಪ್ಟರ್ 2, ಜೇಮ್ಸ್‌, ವಿಕ್ರಾಂತ್ ರೋಣ, 777 ಚಾರ್ಲಿ ಹಾಗೂ ಕಾಂತಾರ ಚಿತ್ರಗಳು ನೂರು ಕೋಟಿಗೂ ಅಧಿಕ ಗಳಿಸಿಸುವ ಮೂಲಕ ಭರ್ಜರಿ ಯಶಸ್ಸು ಸಾಧಿಸಿದ್ದವು. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಮೊದಲಾರ್ಧದಲ್ಲಿ ಬಿಡುಗಡೆಯಾದ ಯಾವ ಸಿನಿಮಾಗಳು ಅಷ್ಟಾಗಿ ಸದ್ದು ಮಾಡಲಿಲ್ಲ. ಇಲ್ಲಿ 2023ರ ಮೊದಲಾರ್ಧದಲ್ಲಿ ತೆರೆಕಂಡ ಅತ್ಯುತ್ತಮ ಚಿತ್ರಗಳ ಪಟ್ಟಿಯನ್ನು ನೀಡಲಾಗಿದೆ.


cover image
ಕಬ್ಜ

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಮಾರ್ಚ್ 17ರಂದು ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್ ಚಂದ್ರು ಕಾಂಬಿನೇಶನ್‌ನ ಕಬ್ಜ ಸಿನಿಮಾವನ್ನು ಬಿಡುಗಡೆ ಮಾಡಲಾಗಿತ್ತು. ಸಿನಿಮಾದಲ್ಲಿ ನಿರ್ದೇಶಕ ಆರ್.ಚಂದ್ರು ಅವರ ವಿಷನ್, ಮೇಕಿಂಗ್, ದೊಡ್ಡ ಸೆಟ್, ರವಿ ಬಸ್ರೂರು ಅವರ ಹಂಟಿಂಗ್ ಬಿಜಿಎಂ, ಉಪ್ಪಿ, ಶಿವಣ್ಣ ಹಾಗೂ ಕಿಚ್ಚನ ಆರ್ಭಟ ಸಿನಿರಸಿಕರಿಗೆ ಸಖತ್ ಕಿಕ್ ಕೊಟ್ಟಿತ್ತು. ಕಬ್ಜ ಸಿನಿಮಾ 4 ಸಾವಿರ ಸ್ಕ್ರೀನ್ ಗಳಲ್ಲಿ ರಿಲೀಸ್ ಆಗಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಉಪೇಂದ್ರ, ಸುದೀಪ್ ಮತ್ತು ಶಿವರಾಜ್‌ಕುಮಾರ್ ಒಟ್ಟಿಗೆ ಕಾಣಿಸಿಕೊಂಡಿದ್ದ ಕಬ್ಜ ಸಿನಿಮಾದಲ್ಲಿ 1945ರ ಸ್ವಾತಂತ್ರ್ಯ ಪೂರ್ವಕ್ಕೂ ಮುನ್ನ ಅರ್ಕೇಶ್ವರನ ಚರಿತ್ರೆಗೆ ನಾಂದಿ ಹಾಡಲಾಗಿತ್ತು. ಅರ್ಕೇಶ್ವರನ ಪಾತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ  ಮಿಂಚಿದ್ದು, ಮೊದಲ ಬಾರಿಗೆ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು.  ಪೊಲೀಸ್ ಅಧಿಕಾರಿಯಾಗಿ ಸುದೀಪ್  ಸ್ಟೈಲಿಶ್ ಎಂಟ್ರಿ, ಬೇಸ್ ವಾಯ್ಸ್‌ನಲ್ಲಿ ಕಿಚ್ಚನ ನಿರೂಪಣೆ ಸೂಪರ್ ಆಗಿತ್ತು.  ಸಿನಿಮಾ ಕ್ಲೈಮ್ಯಾಕ್ಸ್‌ನಲ್ಲಿ ಶಿವಣ್ಣನ ಎಂಟ್ರಿ ಚಿಂದಿಯಾಗಿತ್ತು. ಕಬ್ಜ ಸಿನಿಮಾವನ್ನು 120 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಚಿತ್ರದ ಯಶಸ್ಸಿನ ಬೆನ್ನಲೆ  ನಿರ್ದೇಶಕ ಆರ್.ಚಂದ್ರು ಕಬ್ಜ ೨ ಅನೌನ್ಸ್ ಮಾಡಿದ್ದು, ಮುಂದಿನ ವರ್ಷ ತೆರೆಕಾಣುವ ನಿರೀಕ್ಷೆಯಿದೆ. 

ಗುರುದೇವ್ ಹೊಯ್ಸಳ

ಡಾಲಿ ಧನಂಜಯ್ ಅಭಿನಯದ 125ನೇ ಸಿನಿಮಾ 'ಗುರುದೇವ್ ಹೊಯ್ಸಳ' ಸಿನಿಮಾಗೆ ಪ್ರೇಕ್ಷಕರು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದರು. 'ಗುರುದೇವ್ ಹೊಯ್ಸಳ' ಸಿನಿಮಾದಲ್ಲಿ ನಟರಾಕ್ಷಸ ಡಾಲಿ ಧನಂಜಯ್ ರಫ್ ಅಂಡ್ ಟಫ್ ಆಗಿ ಕಾಣಿಸಿಕೊಂಡಿದ್ದು, ಇಂತಹ ಒಬ್ಬ ಪೊಲೀಸ್‌ ಅಧಿಕಾರಿ ಇರಬೇಕು ಅಂತ ಅನಿಸುವಷ್ಟು ಸಹಜವಾಗಿ ನಟಿಸಿದ್ದರು. 'ಗುಳ್ಟು' ಸಿನಿಮಾ ಖ್ಯಾತಿಯ ನಟ ನವೀನ್ ಶಂಕರ್ 'ಗುರುದೇವ್ ಹೊಯ್ಸಳ'ದಲ್ಲಿ ಖಳನಾಯಕನಾಗಿ ನಟಿಸುವ ಅದ್ಭುತ ನಟನೆ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಸಿನಿಮಾದಲ್ಲಿ ನವೀನ್ ಬಾಲಿ ಎಂಬ ಪಾತ್ರ ನಿರ್ವಹಿಸಿದ್ದು, ಸಖತ್ ರಗಡ್ ಆಗಿದೆ. ಹೀರೋಗೆ ಇಲ್ಲದ ಎಂಟ್ರಿ, ಆಕ್ಷನ್ ಚಿತ್ರದಲ್ಲಿ ಇವರಿಗಿದೆ.  ಈ ಸಿನಿಮಾದ ಮೂಲ ಮರ್ಯಾದಾ ಹತ್ಯೆ. ಬೆಳಗಾವಿಯಲ್ಲಿ ಪೊಲೀಸ್ ಅಧಿಕಾರಿ ಭಾರ್ಗವ್ ಕಾಣೆಯಾಗಿರುತ್ತಾರೆ. ಭಾರ್ಗವನನ್ನು ಹುಡುಕೋಕೆ ಹೋದ ಗುರುದೇವ್ ಹೊಯ್ಸಳ ಮರ್ಯಾದಾ ಹತ್ಯೆ ಕೇಸ್‌ನಲ್ಲಿ ಸಿಕ್ಕಿಕೊಳ್ಳುತ್ತಾನೆ. ಕೊನೆಗೆ ಅದನ್ನು ಧೈರ್ಯದಿಂದ ಚಾಣಾಕ್ಷ್ಯ ತನದಿಂದ ಹೇಗೆ ಮೆಟ್ಟಿ ನಿಲ್ಲುತ್ತಾನೆ ಅನ್ನೋದು ಚಿತ್ರದ ಕಥೆ.  ಸಿನಿಮಾದಲ್ಲಿ  ವಿಜಯ್ ಎನ್ ಡೈರೆಕ್ಷನ್ ಸೂಪರ್ ಆಗಿದ್ದು, ಪ್ರೇಕ್ಷಕರಲ್ಲಿ ಮಾಸ್ ಫೀಲ್ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ.

ಹೊಂದಿಸಿ ಬರೆಯಿರಿ

ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ 'ಹೊಂದಿಸಿ ಬರೆಯಿರಿ' ಸಿನಿಮಾದಲ್ಲಿ ಪ್ರವೀಣ್ ತೇಜ್, ಐಶಾನಿ ಶೆಟ್ಟಿ, ಸಂಯುಕ್ತ ಹೊರನಾಡು, ಶ್ರೀ ಮಹದೇವ್, ಭಾವನಾ ರಾವ್, ನವೀನ್ ಶಂಕರ್, ಅರ್ಚನಾ ಜೋಯಿಸ್ ಮುಖ್ಯಪಾತ್ರದಲ್ಲಿ ನಟಿಸಿದ್ದರು.  ಪರಿಸ್ಥಿತಿಗಳೊಂದಿಗೆ ಹೊಂದಿಕೊಂಡು ಸಾಗುವ ಬದುಕಿನ ಪಯಣವೇ ಜೀವನ ಎನ್ನುವ ಎಳೆಯನ್ನು ಮೂಲವಾಗಿಟ್ಟುಕೊಂಡು ಅದರ ಸುತ್ತ 'ಹೊಂದಿಸಿ ಬರೆಯಿರಿ' ಕಥೆಯನ್ನು ಹೆಣೆಯಲಾಗಿದೆ. ಪ್ರತಿಯೊಬ್ಬರ ಬದುಕಿನಲ್ಲೂ ಕಾಲೇಜು ಹಂತ ಒಂದು ಬಹುಮುಖ್ಯವಾದ ಭಾಗವಾಗಿರುತ್ತದೆ. ಕಾಲೇಜಿನಲ್ಲಿ ಒಂದಷ್ಟು ಹೊಸ ವ್ಯಕ್ತಿಗಳು, ಹೊಸ ಗುರಿ, ಉದ್ದೇಶ, ಕನಸು ಎಲ್ಲವೂ ಇರುತ್ತದೆ. ಈ ಸಂದರ್ಭ ಒಂದಷ್ಟು ಕಳೆದುಕೊಳ್ಳುವುದು, ಪಡೆದುಕೊಳ್ಳುವುದು ಎಲ್ಲವೂ ಇರುತ್ತದೆ. ಕಾಲೇಜು ಮತ್ತು ಅದರ ನಂತರದ ಬದುಕಿನ ಕಥೆಯೇ ಈ ಸಿನಿಮಾ ಪ್ರಮುಖ ತಿರುಳು. ಚಿತ್ರದಲ್ಲಿ ಐದು ಜನ ಸ್ನೇಹಿತರ ಬದುಕಿನ ಒಂದೊಂದು ಕಥೆಯಿದ್ದು, ಭಾವನಾತ್ಮಕ ಜರ್ನಿಯೂ ಇದೆ.  ದಾವಣಗೆರೆಯ ಇಂಜಿನಿಯರಿಂಗ್ ಕಾಲೇಜೊಂದರ 2008ರ ಬ್ಯಾಚ್ ವಿದ್ಯಾರ್ಥಿಗಳ ಕಥೆಯನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಈ ಸಿನಿಮಾ ಏಪ್ರಿಲ್ 1ರಿಂದ  ಒಟಿಟಿಯಲ್ಲಿ ಪ್ರಸಾರವಾಗುತ್ತಿದ್ದು, ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ನೀವು ವೀಕ್ಷಿಸಬಹುದು. 

ರಾಘವೇಂದ್ರ ಸ್ಟೋರ್ಸ್

ಸಂತೋಷ್ ಆನಂದ್ ರಾಮ್ ನಿರ್ದೇಶನದ 'ರಾಘವೇಂದ್ರ ಸ್ಟೋರ್ಸ್' ಸಿನಿಮಾದಲ್ಲಿ ನವರಸನಾಯಕ ಜಗ್ಗೇಶ್ ನಾಯಕನಾಗಿ ಹಾಗೂ  ಶ್ವೇತಾ ಶ್ರೀವಾಸ್ತವ್ ನಾಯಕಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಇದು ಹೊಂಬಾಳೆ ಪ್ರೊಡಕ್ಷನ್ಸ್‌ನ 12ನೇ ಸಿನಿಮಾ. ಏಪ್ರಿಲ್ ೨೮ರಂದು ಬಿಡುಗಡೆಯಾಗಿದ್ದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಜಗ್ಗೇಶ್ ಸಿನಿಮಾ ಅಂದ್ಮೇಲೆ ಬೋರ್ ಹೊಡೆಸೋ ಮಾತಿಲ್ಲ. ಈ ಚಿತ್ರದಲ್ಲಿ ನವರಸ ನಾಯಕನ ಡೈಲಾಗ್‌ ಪಂಚಿಂಗ್ ಡೈಲಾಗ್‌ಗಳು ಪ್ರೇಕ್ಷಕರಿಗೆ ಇಷ್ಟವಾಗಿದ್ದವು. ರಾಘವೇಂದ್ರ ಸ್ಟೋರ್ಸ್ ಸಿನಿಮಾದಲ್ಲಿ ಲೇಟ್‌ ಆಗಿ ಮದುವೆ ಆದವರ ಸಮಸ್ಯೆಯೇನು? ಅನ್ನೋದನ್ನು ಹಾಸ್ಯದ ರೂಪದಲ್ಲಿ ತೋರಿಸಲಾಗಿತ್ತು. ಚಿತ್ರದಲ್ಲಿ ಊಟವನ್ನು ಹಾಳು ಮಾಡಬಾರದು. ಕಷ್ಟದಲ್ಲಿ ಇರುವವರಿಗೆ ಹೇಗೆ ಸಹಾಯ ಮಾಡಬೇಕು ಅನ್ನೋ ಸಂದೇಶವಿತ್ತು. 

ಡೇರ್ ಡೆವಿಲ್ ಮುಸ್ತಾಫಾ

ಡೇರ್ ಡೆವಿಲ್ ಮುಸ್ತಾಫಾ ಸಿನಿಮಾವನ್ನು ಶಶಾಂಕ್ ಸೊಘಲ್ ನಿರ್ದೇಶನ ಮಾಡಿದ್ದರು. ಇದೊಂದು ಕಾಮಿಡಿ ಎಂಟರ್ಟೈನರ್ ಚಿತ್ರವಾಗಿದ್ದು, ಆದಿತ್ಯ ಅಶ್ರೀ,  ಅಭಯ್, ಸುಪ್ರೀತಾ ಭಾರಧ್ವಾಜ್, ಆಶಿತ್, ಶ್ರೀವತ್ಸ, ಪ್ರೇರಣಾ, ಎಂ.ಎಸ್.ಉಮೇಶ್, ಮದ್ಯ ರಮೇಶ್, ಮೈಸೂರು ಆನಂದ್, ಸುಂದರ್ ವೀಣಾ, ಹರಿಣಿ ನಾಗಭೂಷಣ, ಪೂರ್ಣಚಂದ್ರ ಮೈಸೂರು, ವಿಜಯ್ ಶೋಭರಾಜ್, ಚೈತ್ರ ಶೆಟ್ಟಿ, ಕಾರ್ತಿಕ್ ಪತ್ತರ್  ಮುಂತಾದ ಕಲಾವಿದರು ನಟಿಸಿದ್ದರು. ಕುವೆಂಪು ಮತ್ತು ಅವರ ಮಗ ಪೂರ್ಣಚಂದ್ರ ತೇಜಸ್ವಿ ಅವರಿಗೆ ಇರುವ ಅಭಿಮಾನಿಗಳು ಯಾವ ಸಿನಿಮಾ ಸ್ಟಾರ್ ಗಿಂತ ಕಡಿಮೆ ಏನು ಇಲ್ಲ. ಪುಸ್ತಕ ಓದುವ ಹವ್ಯಾಸ ಇದ್ದವರಿಗೂ ಪೂರ್ಣಚಂದ್ರ ತೇಜಸ್ವಿ ಅವರ ಪುಸ್ತಕದ ಪರಿಚಯವಿದ್ದೆ ಇರುತ್ತದೆ. ಅವರಿಗೆ ಅಷ್ಟು ಅಭಿಮಾನಿಗಳಿದ್ದಾರೆ. ತೇಜಸ್ವಿ ಅವರು ಬರೆದ ಪುಸ್ತಕದಲ್ಲಿ ಡೇರ್ ಡೆವಿಲ್ ಮುಸ್ತಫಾ ಕೂಡ ಒಂದು. ಈ ಪುಸ್ತಕವೇ ಈಗ ಸಿನಿಮಾವಾಗಿ ಹೊರಬಂದಿದ್ದು, ಪ್ರೇಕ್ಷಕರು ಸಿನಿಮಾ ಮೆಚ್ಚಿಕೊಂಡಿದ್ದರು.  

 

ಗೌಳಿ

ಸೂರ ನಿರ್ದೇಶನದ 'ಗೌಳಿ' ಸಿನಿಮಾದ ಮೂಲಕ ನಟ ಶ್ರೀನಗರ ಕಿಟ್ಟಿ ಆರು ವರ್ಷಗಳ ಬಳಿಕ ತೆರೆಮೇಲೆ ಕಾಣಿಸಿಕೊಂಡಿದ್ದರು. ಗೌಳಿ ಸಿನಿಮಾಗಾಗಿ ಕಿಟ್ಟಿ ಉದ್ದನೆಯ ಗಡ್ಡ ಹಾಗೂ ಕೂದಲುಬಿಟ್ಟು ಹಿಂದೆಂದೂ ಕಾಣಿಸಿಕೊಳ್ಳದ ಪಾತ್ರದಲ್ಲಿ ಅಭಿನಯಿಸಿದ್ದರು. ಚಿತ್ರದಲ್ಲಿ  ಪಾವನಾ ಗೌಡ ನಾಯಕಿಯಾಗಿ ನಟಿಸಿದ್ದು, ರಂಗಾಯಣ ರಘು, ಶರತ್ ಲೋಹಿತಾಶ್ವ, ಕಾಕ್ರೋಚ್ ಸುಧಿ, ಯಶ್ ಶೆಟ್ಟಿ, ಗೋಪಾಲ ದೇಶಪಾಂಡೆ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದರು. ಗೌಳಿ ಜನನಾಂಗದ ಕಷ್ಟ, ಆ ಜನಾಂಗಕ್ಕೆ ಕಂಟಕವಾಗುವ ಮಾಫಿಯಾ ಎಲ್ಲವನ್ನು ಈ ಚಿತ್ರದಲ್ಲಿ ಹೇಳಲಾಗಿದ್ದು, ನಾಯಕನಷ್ಟೇ ಎದುರಾಳಿ ಪಾತ್ರಗಳನ್ನು ಕಟ್ಟಿಕೊಡಲಾಗಿದೆ. ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಶರತ್‌ ಲೋಹಿತಾಶ್ವ, ಕಾಕ್ರೋಚ್ ಸುಧಿ ಸಖತ್ ಆಗಿ ಅಭಿನಯಿಸಿದ್ದಾರೆ.  ಕಾಡಿನ ಮಧ್ಯೆ ಇರುವ ಹಳ್ಳಿಯೊಂದರಲ್ಲಿ ವಾಸಿಸುವ ಜನರ ಮೇಲೆ ಹಾಗೂ ಅವರ ಸ್ಥಳದ ಮೇಲೆ ಖಳನಾಯಕರ ಕಣ್ಣು ಬೀಳುವುದು ಹಾಗೂ ಆ ಖಳನಾಯಕರಿಗೆ ಅಲ್ಲಿನ ಪೊಲೀಸರೇ ಬೆಂಬಲ ನೀಡುವುದು, ಇದರ ವಿರುದ್ಧ ಆ ಹಳ್ಳಿಯವರು ಹೋರಾಡುವ ಕಥೆ ಇರುವ ಹಲವು ಚಿತ್ರಗಳು ಈಗಾಗಲೇ ಕನ್ನಡದಲ್ಲಿ ಬಂದಿವೆ. ತುಸು ಇದೇ ಮಾದರಿಯ ಕಥೆಯನ್ನು ಹೊಂದಿರುವ ಗೌಳಿ ವೈಯಕ್ತಿಕ ಕಾರಣದಿಂದ ನಾಯಕನ ಕುಟುಂಬವನ್ನು ಟಾರ್ಗೆಟ್ ಮಾಡ್ತಾರೆ ಎಂಬ ಅಂಶದಿಂದ ವಿಭಿನ್ನ ಎನಿಸಲಿದೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಶ್ರೀನಗರ ಕಿಟ್ಟಿಗೆ 'ಗೌಳಿ' ಸಿನಿಮಾ ತಕ್ಕಮಟ್ಟಿಗೆ ಯಶಸ್ಸು ನೀಡಿದೆ. 

ಶಿವಾಜಿ ಸುರತ್ಕಲ್ 2

2020ರಲ್ಲಿ ಬಿಡುಗಡೆಯಾಗಿದ್ದ ರಮೇಶ್ ಅರವಿಂದ್ ನಟನೆಯ ಶಿವಾಜಿ ಸೂರತ್ಕಲ್ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅದರ ಸೀಕ್ವೆಲ್ ಶಿವಾಜಿ ಸುರತ್ಕಲ್ ೨. ಶಿವಾಜಿ ಸುರತ್ಕಲ್ ಭಾಗ ಎರಡರಲ್ಲಿ ರಮೇಶ್ ಅರವಿಂದ್ ಮತ್ತು ರಾಧಿಕಾ ಚೇತನ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಉಡುಪಿಯಲ್ಲಿ ನಡೆಯುವ ಒಂದು ಹತ್ಯೆಯಿಂದ ಶಿವಾಜಿ ಮಾಯಾವಿ ಕೇಸ್‌ನ ಹಿಂದೆ ಬೀಳ್ತಾನೆ. ಅಲ್ಲಿಂದ ಮುಂದೆ ಮತ್ತೆ 3 ಕೊಲೆಗಳು ನಡೆಯುತ್ತವೆ. ಪ್ರತಿ ಕೊಲೆಯನ್ನು ಹಂತಕ ಸುಳಿವು ಕೊಡುತ್ತಾ ಹೋಗುತ್ತಾನೆ, ಜೊತೆಗೆ ಶಿವಾಜಿ ಸುರತ್ಕಲ್‌ಗೆ ಸವಾಲಾಗುತ್ತಾ ಸಾಗುತ್ತಾನೆ. ಶಿವಾಜಿ ಕೊಲೆಗಾರನ ಸಮೀಪಕ್ಕೆ ಹೋಗುತ್ತಿದ್ದಂತೆ ಆತ ಚಾಣಾಕ್ಷತನದಿಂದ ತಪ್ಪಿಸಿಕೊಳ್ಳುತ್ತಾನೆ. ಆದರೆ ಈ ಕಳ್ಳ ಪೊಲೀಸ್ ಆಟದಲ್ಲಿ 5ನೇ ಕೊಲೆ ಆಗುವುದಕ್ಕು ಮುನ್ನ ಶಿವಾಜಿ ಹಂತಕನ ಮುಂದೆ ನಿಂತಿರುತ್ತಾನೆ. ಇದು ಸಿನಿಮಾದ ಖತೆ. ಈ ಚಿತ್ರ ಬಾಕ್ಸಾಪೀಸ್‌ನಲ್ಲಿ ಅಷ್ಟು ಸದ್ದು ಮಾಡದಿದ್ದರೂ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತ್ತು. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+