X
ಹೋಮ್ ಚಲನಚಿತ್ರಗಳ ಒಳನೋಟ

ದೀಪಿಕಾ ದಾಸ್ ಟು ನಿರಂಜನ್ ದೇಶಪಾಂಡೆ: ಸ್ವಂತ ಉದ್ಯಮ ನಡೆಸುತ್ತಿರುವ 13 ಬಿಗ್‌ ಬಾಸ್ ಸ್ಪರ್ಧಿಗಳ ಪಟ್ಟಿ ಇಲ್ಲಿದೆ.

Author Sowmya Bairappa | Published: Monday, August 28, 2023, 01:33 PM [IST]

ಬಿಗ್‌ ಬಾಸ್ ಕನ್ನಡ ಸೀಸನ್ 10 ಸೆಪ್ಟಂಬರ್ ತಿಂಗಳಲ್ಲಿ ಆರಂಭವಾಗಲಿದ್ದು, ಈವರೆಗೆ ೯ ಸೀಸನ್‌ಗಳು ಪ್ರಸಾರವಾಗಿವೆ. ಈ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಮಾಜಿ ಸ್ಪರ್ಧಿಗಳ ಪೈಕಿ ಕೆಲವರು ನಟನೆ ಜೊತೆಗೆ ಜೀವನೋಪಾಯಕ್ಕಾಗಿ ಸ್ವಂತ ಉದ್ಯೋಗ ನಡೆಸುತ್ತಿದ್ದಾರೆ. ಇನ್ನೂ ಕೆಲವರು ನಟನೆಗಿಂತ ಉದ್ಯೋಗಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಹಾಗಾದರೆ, ಯಾವ್ಯಾವ ಬಿಗ್ ಬಾಸ್ ಸ್ಪರ್ಧಿಗಳು ಯಾವ ಬಿಸಿನೆಸ್ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.


cover image
ದೀಪಿಕಾ ದಾಸ್

ನಟಿ ದೀಪಿಕಾ ದಾಸ್ ನಾಗಿಣಿ 2 ಸೀರಿಯಲ್ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಬಿಗ್‌ ಬಾಸ್ ಕನ್ನಡ ಸೀಸನ್ 7 ಹಾಗೂ 9ರಲ್ಲಿ ಭಾಗವಹಿಸಿದ್ದ ದೀಪಿಕಾ, ಬಟ್ಟೆ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಆನ್‌ಲೈನ್ ಮೂಲಕ ಬ್ರ್ಯಾಂಡ್‌ನ ಬಟ್ಟೆಗಳನ್ನು ಖರೀದಿಸಬಹುದಾಗಿದೆ. ಅಂದಹಾಗೆ ದೀಪಿಕಾ ಸದ್ಯ ಯಾವುದೇ ಸಿನಿಮಾ ಹಾಗೂ ಧಾರವಾಹಿಗಳಲ್ಲಿಯೂ ನಟಿಸುತ್ತಿಲ್ಲ. ಆಗಾಗ ಟ್ರಾವೆಲ್ ಫೋಟೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ.   

ದರ್ಶ್ ಚಂದ್ರಪ್ಪ

ದರ್ಶ್ ಚಂದ್ರಪ್ಪ ಬಿಗ್‌ ಬಾಸ್ ಕನ್ನಡ ಸೀಸನ್ 8ರಲ್ಲಿ ಭಾಗವಹಿಸಿದ್ದರು. ಇವರು ನಟ, ಮಾಡೆಲ್ ಹಾಗೂ ಉದ್ಯಮಿಯಾಗಿದ್ದಾರೆ. ಎಂಸಿಎ ಪದವೀಧರನಾದ ದರ್ಶ್ ಕೂಡ ಬಟ್ಟೆ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಉದ್ಯಮದಲ್ಲೇ ಸಾಕಷ್ಟು ಆಸಕ್ತಿ ಹೊಂದಿರುವ ಇವರು, ಹಲವು ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ತ್ರಿ ರೋಸಸ್ ಎಂಬ ಸಿನಿಮಾದಲ್ಲೂ ನಾಯಕನಾಗಿ ಬಣ್ಣ ಹಚ್ಚಿದ್ದಾರೆ. 

ಶೈನ್ ಶೆಟ್ಟಿ

ನಟ ಹಾಗೂ ಬಿಗ್ ಬಾಸ್ ಸೀಸನ್ 7ರ ವಿಜೇತ ಶೈನ್ ಶೆಟ್ಟಿ ಸ್ವಂತ ರೆಸ್ಟೋರೆಂಟ್ ಹೊಂದಿದ್ದಾರೆ. ಇವರು 2019ರಲ್ಲಿ ಬನಶಂಕರಿ 2ನೇ ಹಂತದಲ್ಲಿ ಸಣ್ಣದೊಂದು ಗಾಡಿಯಲ್ಲಿ 'ಗಲ್ಲಿ ಕಿಚನ್' ತೆರೆದಿದ್ದರು. ಇಲ್ಲಿನ ಆಹಾರಕ್ಕೆ ಜನರು ಫಿದಾ ಆಗಿದ್ದು, ಸಿಕ್ಕಾಪಟ್ಟೆ ಫೇಮಸ್ ಆಯಿತು. ಸದ್ಯ  ಶೈನ್ ಶೆಟ್ಟಿ ಮೂರು 'ಗಲ್ಲಿ ಕಿಚನ್' ಹೆಸರಿನ ರೆಸ್ಟೋರೆಂಟ್‌ಗಳನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. 

 

ಮಯೂರಿ ಕ್ಯಾತರಿ

ನಟಿ ಮಯೂರಿ ಕೂಡ ಕಾಸ್ಮೆಟಿಕ್, ಸ್ಕಿನ್ ಹಾಗೂ ಹೇರ್‌ಗೆ ಸಂಬಂಧಪಟ್ಟ ಕ್ಲಿನಿಕ್ ಆರಂಭಸಿದ್ದಾರೆ. ಅಶ್ವಿನಿ ನಕ್ಷತ್ರ ಸೀರಿಯಲ್ ಮೂಲಕ ಖ್ಯಾತಿ ಗಳಿಸಿದ್ದ ಇವರು, ಇಷ್ಟಕಾಮ್ಯ, ಕೃಷ್ಣಲೀಲಾ, ನಟರಾಜ ಸರ್ವೀಸ್, ನನ್ನ ಪ್ರಕಾರ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಮಗುವಾದ ಬಳಿಕ ನಟನೆಯಿಂದ ಕೊಂಚ ಬ್ರೇಕ್ ಪಡೆದಿದ್ದ ಅವರು, ನಂತರ ಬಿಗ್‌ ಬಾಸ್ ಸೀಸನ್ 9ಕ್ಕೆ ಎಂಟ್ರಿಕೊಟ್ಟಿದ್ದಾರೆ. ಸದ್ಯ ನಟನೆ ಹಾಗೂ ಉದ್ಯಮ ಎರಡನ್ನೂ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. 

 

ಚೈತ್ರಾ ವಾಸುದೇವನ್

ನಟಿ-ನಿರೂಪಕಿಯಾಗಿರುವ ಚೈತ್ರಾ ವಾಸುದೇವನ್ ತಮ್ಮದೇಯಾದ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯನ್ನು ಹೊಂದಿದ್ದಾರೆ. ಬಿಗ್‌ ಬಾಸ್‌ ಸೀಸನ್ 7ಕ್ಕೆ ಎಂಟ್ರಿಕೊಟ್ಟಿದ್ದ ಈ ಚೆಲುವೆ ರೆಸ್ಟೋರೆಂಟ್ ಕೂಡ ಹೊಂದಿದ್ದಾರೆ. ಚೈತ್ರಾ ವಾಸುದೇವನ್ ಅವರ ತಂದೆ ಹೋಟೆಲ್ ಉದ್ಯಮಿಯಾಗಿದ್ದು, ಇವರು ಕೂಡ ವೆಜ್‌ ರೆಸ್ಟೋರೆಂಟ್ ನಟಡೆಸಿಕೊಂಡು ಹೋಗುತ್ತಿದ್ದಾರೆ. 

ಶ್ವೇತಾ ಚೆಂಗಪ್ಪ

ಶ್ಬೇತಾ ಚಂಗಪ್ಪ ಬಿಗ್‌ ಬಾಸ್ ಕನ್ನಡ ಸೀಸನ್ 2ರಲ್ಲಿ ಭಾಗವಹಿಸಿದ್ದರು. ನಟಿ ಮತ್ತು ನಿರೂಪಕಿಯಾಗಿರುವ ಇವರು ಅನೇಕ ಧಾರವಾಹಿ ಮತ್ತು ಸಿನಿಮಾದಲ್ಲಿ ನಟಿಸಿದ್ದಾರೆ. ಜೊತೆಗೆ ಮಜಾ ಟಾಕೀಸ್ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಇವರು ಸೃಜನ್ ಲೋಕೇಶ್ ಪತ್ನಿ ಗ್ರೀಷ್ಮಾ ಜೊತೆಗೂಡಿ ಸಲೂನ್ ಆರಂಭಿಸಿದ್ದಾರೆ. ಜೊತೆಗೆ ಜೀ ಕನ್ನಡದ ಚೋಟಾ ಚಾಂಪಿಯನ್ ರಿಯಾಲಿಟಿ ಶೋನ ನಿರೂಪಕಿಯಾಗಿದ್ದಾರೆ.  

 

ಸೃಜನ್ ಲೋಕೇಶ್

ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಸದ್ಯ ರಿಯಾಲಿಟಿ ಶೋಗಳು ಹಾಗೂ ಪ್ರೊಡಕ್ಷನ್ ಹೌಸ್‌ನಲ್ಲಿ ಸಕ್ರಿಯರಾಗಿದ್ದಾರೆ. ಸೃಜನ್ ಅವರಿಗೆ ಹೋಟೆಲ್ ಬ್ಯುಸಿನೆಸ್‌ನಲ್ಲಿ ಸಾಕಷ್ಟು ಆಸಕ್ತಿಯಿತ್ತು. ಹೀಗಾಗಿ, ಬೆಂಗಳೂರಿನಲ್ಲಿ ಎರಡು ರೆಸ್ಟೋರೆಂಟ್‌ಗಳನ್ನು ತೆರೆದಿದ್ದಾರೆ. ಬೆಳ್ಳಂದೂರಿನಲ್ಲಿ ಸೃಜನ್ ಒಡೆತನದ ಸೋಚಿ ಎಂಬ ರೆಸ್ಟೋರೆಂಟ್ ಇದೆ. ಇದಲ್ಲದೇ ಇತ್ತೀಚೆಗಷ್ಟೇ ಬನಶಂಕರಿಯಲ್ಲಿ 'ಕೋಕು ಕಿಚನ್' ಎಂಬ ಮತ್ತೊಂದು ರೆಸ್ಟೋರೆಂಟ್ ಅನ್ನು ತೆರೆದಿದ್ದಾರೆ. ಜೊತೆಗೆ ಇದೀಗ ಸಿನಿಮಾ ನಿರ್ದೇಶನ ಕೂಡ ಮಾಡುತ್ತಿದ್ದು, ಸೃಜನ್ ಬಿಗ್‌ ಬಾಸ್ ಸೀಸನ್ 2ರಲ್ಲಿ ಭಾಗವಹಿಸಿದ್ದರು.  

 

ಚಂದನ್

ಬಿಗ್‌ ಬಾಸ್ ಸೀಸನ್ 3ರ ಸ್ಪರ್ಧಿ ಚಂದನ್ ಕೂಡ ಹೋಟೆಲ್ ಬ್ಯುಸಿನೆಸ್‌ನಲ್ಲಿ ತೊಡಗಿಕೊಂಡಿದ್ದಾರೆ. ಕೆಲ ವರ್ಷಗಳ ಹಿಂದಷ್ಟೇ ಬೆಂಗಳೂರಿನ ಸಹಕಾರ ನಗರದಲ್ಲಿ ಬಿರಿಯಾನಿ ಹೋಟೆಲ್ ತೆರೆದಿದ್ದರು. ಮದುವೆಯಾದ ಬಳಿಕ ಕವಿತಾ ಹಾಗೂ ಚಂದನ್ ಸೇರಿ ಮೈಸೂರು ಹಾಗೂ ಬೆಂಗಳೂರು ರಸ್ತೆಯಲ್ಲಿ 'ಮಂಡಿಪೇಟೆ ಪಲಾವ್' ಎಂಬ ರೆಸ್ಟೋರೆಂಟ್ ಅನ್ನು ಆರಂಭಿಸಿದ್ದಾರೆ. ಜೊತೆಗೆ ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ ರೆಸಾರ್ಟ್ ಕೂಡ ಆರಂಭಿಸಿದ್ದಾರೆ.

 

ಶಶಿಕುಮಾರ್

ಬಿಗ್‌ ಬಾಸ್ ಕನ್ನಡ ಸೀಸನ್ 6ರ ವಿನ್ನರ್ ಶಶಿಕುಮಾರ್ ರೈತರಿಗೆ ಅನುಕೂಲವಾಗುವಂತಹ ಉತ್ಪನ್ನಗಳು, ತರಕಾರಿ ಹಾಗೂ ಧಾನ್ಯಗಳ ಬೀಜಗಳು ಸೇರಿದಂತೆ ಒಂದಷ್ಟು ಆರ್ಗಾನಿಕ್ ಪ್ರೊಡಕ್ಟನ ಅಂಗಡಿ ನಡೆಸುತ್ತಿದ್ದಾರೆ. ಇವರನ್ನು ಮಾಡರ್ನ್ ರೈತ ಅಂತಲೇ ಕರೆಯಲಾಗುತ್ತೆ. 

 

ಅಕ್ಷತಾ ಪಾಂಡವಪುರ

ಬಿಗ್‌ ಬಾಸ್ ಕನ್ನಡ ಸೀಸನ್ 6ರ ಖ್ಯಾತಿಯ ಅಕ್ಷತಾ ಪಾಂಡವಪುರ ದೇಸಿ ಅಂಗಡಿ ಆರಂಭಿಸಿದ್ದಾರೆ. ಇವರ ಅಂಗಡಿಯಲ್ಲಿ ದೇಸಿ ಬಟ್ಟೆ ಹಾಗೂ ಆಭರಣ ಸಿಗುತ್ತವೆ. ರಂಗಭೂಮಿ ಕಲಾವಿದೆಯಾಗಿರುವ ಇವರು, ಹಲವು ನಾಟಕ ಹಾಗೂ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. `ಪಲ್ಲಟ' ಚಿತ್ರದಲ್ಲಿನ ನಟನೆಗೆ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ದೇಶ-ವಿದೇಶಗಳಲ್ಲೂ ನಾಟಕ ಮಾಡುವ ಬಯಕೆಯ ಹೊಂದಿರುವ ಅಕ್ಷತಾ, `ದಿ ಚಾನಲ್ ಥೇಟರ್ಸ್ 'ಎನ್ನುವ ರಂಗ ತಂಡವನ್ನು ಕಟ್ಟಿದ್ದಾರೆ. 

ಅಕುಲ್ ಬಾಲಾಜಿ

ಕನ್ನಡ ಕಿರುತೆರೆಯ ಖ್ಯಾತ ನಿರೂಪಕ ಮತ್ತು ಚಿತ್ರನಟ ಅಕುಲ್ ಬಾಲಾಜಿ , ದೊಡ್ಡಬಳ್ಳಾಪುರ ಬಳಿಯ ಲಘುಮೇನಹಳ್ಳಿಯಲ್ಲಿ ರೆಸಾರ್ಟ್‌ವೊಂದನ್ನು ಹೊಂದಿದ್ದಾರೆ. ಬಿಗ್‌ಬಾಸ್ ಕನ್ನಡ ಸೀಸನ್ 2ರಲ್ಲಿ ಭಾಗವಹಿಸಿದ್ದ ಇವರು ವಿಜೇತರಾಗಿದ್ದರು. ಅಕುಲ್ ಸುಮಾರು 30 ಯಶಸ್ವಿ ಕಾರ್ಯಕ್ರಮಗಳ ನಿರೂಪಕರಾಗಿ ಕಾರ್ಯನಿರ್ವಹಿಸಿದ್ದಾರೆ. 

ನಿರಂಜನ್ ದೇಶಪಾಂಡೆ

ಬಿಗ್‌ ಬಾಸ್ ಕನ್ನಡ ಸೀಸನ್ 4 ಸ್ಪರ್ಧಿ ನಿರಂಜನ್ ದೇಶಪಾಂಡೆ ಅವರು ಕೂಡ ಉದ್ಯಮ ನಡೆಸುತ್ತಿದ್ದಾರೆ. ಇವರು, ಚಿಕ್ಕಮಗಳೂರಿನಲ್ಲಿ ಬೆಟ್ಟ ಗುಡ್ಡ ಎಂಬ ರೆಸಾರ್ಟ್ ಹೊಂದಿದ್ದಾರೆ. ಸದ್ಯ ನಿರೂಪಣೆಯಲ್ಲಿ ಸಕ್ರಿಯರಾಗಿರುವ ಇವರು, ಬಾಂಬೆ ಮಿಠಾಯಿ, ಪಾದರಸ ಮುಂತಾದ ಸಿನಿಮಾಗಲ್ಲಿಯೂ ಅಭಿನಯಿಸಿದ್ದಾರೆ.

ಕಿರಣ್ ರಾಜ್

ಕನ್ನಡ ಕಿರುತೆರೆ ಲೋಕದ ಯಶಸ್ವಿ ನಟ ಕಿರಣ್ ರಾಜ್ ಬಿಗ್‌ ಬಾಸ್ ಒಟಿಟಿ ಸೀಸನ್‌ನಲ್ಲಿ ಭಾಗವಹಿಸಿದ್ದರು. ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಇವರು, ನಟನೆ ಜೊತೆಗೆ ಒಂದು ಮಲ್ಟಿ ಕುಸಿನ್ ರೆಸ್ಟೋರೆಂಟ್ ಹಾಗೂ ತಮ್ಮದೇಯಾದ ಬಟ್ಟೆ ಬ್ರಾಂಡ್ ಅನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಇದರ ಜೊತೆಗೆ ಸದ್ಯ ಸಿನಿಮಾ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+