Just In
- 34 min ago
ಸುದೀಪ್ ಗೆ ಸಿನಿಮಾ ನಿರ್ದೇಶನ ಮಾಡುವ ಬಗ್ಗೆ ರಕ್ಷಿತ್ ಶೆಟ್ಟಿ ಹೇಳಿದ್ದೇನು? ಇಲ್ಲಿದೆ ಮಾಹಿತಿ
- 1 hr ago
ಕಂಗನಾ ಮೇಲೆ ಕಥೆ ಕದ್ದ ಆರೋಪ; 72 ಗಂಟೆಯೊಳಗೆ ಉತ್ತರ ನೀಡಬೇಕೆಂದ ಲೇಖಕ
- 2 hrs ago
ಸೋನು ಸೂದ್ ಟೈಲರ್ ಶಾಪ್: ರಸ್ತೆ ಬದಿ ಕುಳಿತು ಬಟ್ಟೆ ಹೊಲಿಯುತ್ತಿರುವ ರಿಯಲ್ ಹೀರೋ
- 4 hrs ago
ಪುನೀತ್ ಸರಳತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪಂಚಮಸಾಲಿ ಸ್ವಾಮೀಜಿ
Don't Miss!
- News
ಪುದುಚೇರಿ ಬಿಜೆಪಿ ಶಾಸಕ, ಖಜಾಂಚಿ ಶಂಕರ್ ನಿಧನ
- Finance
ಜನವರಿ ತಿಂಗಳ ಮೊದಲ 15 ದಿನಗಳಲ್ಲಿ FPI 14,866 ಕೋಟಿ ರು. ಹೂಡಿಕೆ
- Automobiles
ಬೈಕ್ ಸವಾರರೇ ಎಚ್ಚರ: ರೇರ್ ವೀವ್ ಮಿರರ್ ಬಳಸದಿದ್ದರೂ ಬೀಳಲಿದೆ ದಂಡ
- Sports
ಪೂಜಾರ ವಿರುದ್ಧ ಆಸ್ಟ್ರೇಲಿಯಾ ತನ್ನ ಯೋಜನೆಯನ್ನು ಉತ್ತಮವಾಗಿ ಕಾರ್ಯಗತಗೊಳಿಸಿದೆ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬೇವು ಬೆಲ್ಲದ ಜೊತೆಗೆ ಕಿರುತೆರೆಯಲಿ ಹಿಟ್ ಚಿತ್ರಗಳ ಸಂಭ್ರಮ
ಈ ಬಾರಿಯ ಯುಗಾದಿ ಹಬ್ಬಕ್ಕೆ ಬೇವು ಬೆಲ್ಲದ ಜೊತೆಗೆ ಕನ್ನಡದ ಹಿಟ್ ಚಿತ್ರಗಳನ್ನು ಕಿರುತೆರೆಯಲ್ಲಿ ಸವಿಯಬಹುದು. ಏಪ್ರಿಲ್ 4ರಂದು ಯಾವಾವ ಚಾನಲ್ನಲ್ಲಿ ಯಾವ ಸಿನಿಮಾ ಪ್ರಸಾರವಾಗಲಿದೆ ಎಂಬ ಕಿರು ಮಾಹಿತಿ ಇಲ್ಲಿದೆ. ಮೂರು ಹಿಟ್ ಚಿತ್ರಗಳು ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರ ಭಾಗ್ಯ ಕಾಣುತ್ತಿವೆ. ಗಜ, ಕಿಚ್ಚಹುಚ್ಚ ಮತ್ತು ಮಳೆಯಲಿ ಜೊತೆಯಲಿ ಚಿತ್ರಗಳು ಹಬ್ಬದ ಸಂಭ್ರಮವನ್ನು ಇಮ್ಮಡಿಸಲಿವೆ.
1. ಗಜ: ದರ್ಶನ್ ತೂಗುದೀಪ್, ನವ್ಯಾ ನಾಯರ್ ಮತ್ತು ದೇವರಾಜ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರ ಕಸ್ತೂರಿ ವಾಹಿನಿಯಲ್ಲಿ ಮಧ್ಯಾಹ್ನ 2.30 ಕ್ಕೆ ಪ್ರಸಾರವಾಗಲಿದೆ. ಜನವರಿ 2008 ರಲ್ಲಿ ಬಿಡುಗಡೆಗೊಂಡಿದ್ದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗಳಿಕೆ ಕಂಡಿತ್ತು. ಚಿತ್ರವನ್ನು ಕೆ ಮಾದೇಶ್ ನಿರ್ದೇಶಿಸಿದ್ದರು. ಹರಿಕೃಷ್ಣ ಸಂಗೀತ ನೀಡಿದ್ದ ಚಿತ್ರ ಹಾಡುಗಳು ಕೂಡ ಜನಪ್ರಿಯಗೊಂಡಿತ್ತು. ಶಂಕರ್ ಮಹಾದೇವನ್ ಹಾಡಿದ್ದ 'ಐತಲಕಡಿ' ಹಾಡು ಈ ಚಿತ್ರದ್ದೆ.
2 . ಕಿಚ್ಚಹುಚ್ಚ : ಅಕ್ಟೋಬರ್ 2010 ರಲ್ಲಿ ಬಿಡುಗಡೆಗೊಂಡಿದ್ದ ಈ ಚಿತ್ರದಲ್ಲಿ ಸುದೀಪ್, ರಮ್ಯಾ ಮತ್ತು ಶ್ರೀನಾಥ್ ಮುಖ್ಯ ಭೂಮಿಕೆಯಲ್ಲಿದ್ದರು. ಗುರುದತ್ ನಿರ್ದೇಶನದ ಈ ಚಿತ್ರಕ್ಕೆ ಹರಿಕೃಷ್ಣ ಸಂಗೀತ ನೀಡಿದ್ದರು. ಮೂಲ ತಮಿಳು ಚಿತ್ರದ ರಿಮೇಕ್ ಆಗಿದ್ದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸಾಧಾರಣ ಯಶಸ್ಸು ಕಂಡಿತ್ತು. ಸುವರ್ಣ ವಾಹಿನಿಯಲ್ಲಿ ಚಿತ್ರ ಮಧ್ಯಾಹ್ನ 2.30ಕ್ಕೆ ಪ್ರಸಾರವಾಗಲಿದೆ.
3. ಮಳೆಯಲಿ ಜೊತೆಯಲಿ : ಡಿಸೆಂಬರ್ 2009ರಲ್ಲಿ ಗಣೇಶ್ ಸ್ವಂತ ಬ್ಯಾನರ್ ನಲ್ಲಿ ಮೂಡಿ ಬಂದ ಚಿತ್ರ. ಪ್ರೀತಂ ಗುಬ್ಬಿ ನಿರ್ದೇಶನದ ಈ ಚಿತ್ರದಲ್ಲಿ ಗಣೇಶ್, ಅಂಜನಾ ಸುಖಾನಿ, ಯುವಿಕಾ ಚೌಧರಿ, ದತ್ತಣ್ಣ, ರಂಗಾಯಣ ರಘು, ಶರಣ್ ಪ್ರಮುಖ ಕಲಾವಿದರು. ಹರಿಕೃಷ್ಣ ಸಂಗೀತ ನೀಡಿದ್ದ ಚಿತ್ರದ ಎರಡು ಹಾಡುಗಳು ಜನಪ್ರಿಯವಾಗಿದ್ದವು. 2009ರ ಹಿಟ್ ಚಿತ್ರದ ಪಟ್ಟಿಗೆ ಸೇರಿದ್ದ ಚಿತ್ರಗಳಲ್ಲಿ ಇದೂ ಒಂದು. ಉದಯ ವಾಹಿನಿಯಲ್ಲಿ ಸಂಜೆ 6ಗಂಟೆ ಚಿತ್ರ ಪ್ರಸಾರ ವಾಗಲಿದೆ.