Don't Miss!
- News ಹುಬ್ಬಳ್ಳಿ ನೇಹಾ ಕೊಲೆ ಪ್ರಕರಣ: ಸಿದ್ದರಾಮಯ್ಯ ಸರ್ಕಾರವೇ ನೇರ ಹೊಣೆ ಎಂದ ಬಿಜೆಪಿ ಶಾಸಕ
- Lifestyle ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
- Sports LSG vs CSK IPL 2024: ಮತ್ತೊಮ್ಮೆ ಧೋನಿ, ಜಡೇಜಾ ಅಬ್ಬರ; ಲಕ್ನೋ ತಂಡಕ್ಕೆ ಸವಾಲಿನ ಗುರಿ ನೀಡಿದ ಸಿಎಸ್ಕೆ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿಂಗಲ್ ಆಗಿದ್ರೆ ಎಷ್ಟೊಂದು ಅನುಕೂಲ ಇದೆ ಗೊತ್ತಾ ಬೇಕಾದ್ರೆ ಧನಂಜಯ್ ಕೇಳಿ
Recommended Video
ಸಿಂಗಲ್ ಆಗಿರುವ ಹುಡುಗರಿಗೆ ಒಂದು ಚಿಂತೆ ಇದ್ದರೆ, ಮದುವೆ ಆದವರಿಗೆ ನೂರು ಚಿಂತೆ ಇರುತ್ತದೆ. ಅದಕ್ಕೆ ಏನೋ ಮದುವೆ ಅಂದರೆ ಹುಡುಗರು ಸ್ವಲ್ಪ ದೂರ ಇರುತ್ತಾರೆ. ಇನ್ನು ಹುಡುಗರು ಸಿಂಗಲ್ ಆಗಿದ್ದರೆ ಎಷ್ಟು ಅನುಕೂಲ ಇದೆ ಎನ್ನುವುದನ್ನು ಈಗ ನಟ ಧನಂಜಯ್ ಹೇಳಿದ್ದಾರೆ.
ಕಳೆದ ವಾರ ಧನಂಜಯ್ ಸ್ಟಾರ್ ಸುವರ್ಣ ವಾಹಿನಿಯ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಶಿವರಾಜ್ ಕುಮಾರ್ ''ಸಿಂಗಲ್ ಆಗಿ ಇದ್ದರೆ ಇರುವ ಮೂರು ಅನುಕೂಲಗಳನ್ನು ಹೇಳಿ ?'' ಎಂದರು.
ಕನ್ನಡದ ಈ ಹೀರೋಯಿನ್ ಮೇಲೆ ಧನಂಜಯ್ ಗೆ ಕ್ರಶ್ ಆಗಿತ್ತು
ಆಗ ಧನಂಜಯ್ ಮೊದಲನೆಯದು ''ಆರಾಮಾಗಿ ಇರಬಹುದು. ಎಲ್ಲಿ ಇದ್ದೀನಿ ಏನ್ ಮಾಡುತ್ತಾ ಇದ್ದೀನಿ, ಅಂತ ಯಾವಾಗಲೂ ರಿಪೋರ್ಟ್ ಒಪ್ಪಿಸುವ ಅವಶ್ಯಕತೆ ಇರೋದಿಲ್ಲ. ಎರಡನೆಯದು ಆರಾಮಾಗಿ ಫ್ರೆಂಡ್ಸ್ ಜೊತೆಗೆ ಜಾಸ್ತಿ ಟೈಂ ಕಳೆಯಬಹುದು. ಮೂರನೇಯದು ಯಾರಿಗೆ ಬೇಕಾದರು ಲೈನ್ ಹಾಕಬಹುದು.'' ಎಂದು ಸಿಂಗಲ್ ಆಗಿದ್ದರೆ ಇಷ್ಟೊಂದು ಅನುಕೂಲ ಇದೆ ಎಂದು ಉತ್ತರಿಸಿದರು.
ಆಗ ಶಿವಣ್ಣ '' ಹೋ, ಹಾಗಾದರೆ ನಾನು ಆರಾಮಾಗಿ ಇಲ್ಲ. ಯಾರಿಗೂ ಲೈನ್ ಹಾಕಲ್ಲ. ನನ್ನ ಜೊತೆಗೆ ಯಾರು ಫ್ರೆಂಡ್ಸ್ ಬರಲ್ಲ ಅಲ್ವಾ. ನೀವೆಲ್ಲ ನಮ್ಮ ಮನೆಗೆ ಬರಲ್ವಾ. ರಾತ್ರಿ ಒಂದು, ಎರಡು ಗಂಟೆ ವರೆಗೆ ನಾವೆಲ್ಲ ಮಾತಾಡುತ್ತೇವೆ ತಾನೇ'' ಎಂದು ನಗುತ್ತಾ ಸಣ್ಣ ಟಾಂಗ್ ಕೊಟ್ಟರು. ಆಗ ಧನಂಜಯ್ ''ಅದು ನಾವು ಯಾರನ್ನು ಮದುವೆ ಆಗುತ್ತೀವಿ ಎನ್ನುವುದರ ಮೇಲೆ ಡಿಪೇಂಡ್ ಆಗುತ್ತೆ ಅಣ್ಣ'' ಎಂದರು. ಕೊನೆಗೆ ಶಿವಣ್ಣ ''ನಿನಗೆ ಸಹ ಅದೇ ರೀತಿಯ ಹೆಂಡತಿ ಸಿಗಲಿ.'' ಎಂದು ಆಶೀರ್ವಾದ ಮಾಡಿದರು.