Don't Miss!
- News ಮಂಡ್ಯದಲ್ಲಿ ಕುಮಾರಸ್ವಾಮಿ ಸೋಲು ಗ್ಯಾರಂಟಿ: ಭವಿಷ್ಯ ನುಡಿದ ಸಿದ್ದರಾಮಯ್ಯ
- Finance ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್ ಶುಲ್ಕ ಹೆಚ್ಚಳ: ಕಾರುಗಳಿಗೆ 330 ರೂ. ತಾಕೀತು?
- Automobiles ಥಾರ್ 5 ಡೋರ್ ಬಿಡುಗಡೆಗೂ ಮುನ್ನವೇ ಎದುರಾಳಿ ರೆಡಿ: ಹೊಸ ಗೂರ್ಖಾಗೆ ನಲುಗುತ್ತಾ ಮಹೀಂದ್ರಾ!
- Sports Hardik Pandya: ಸ್ವತಃ ಮುಂಬೈ ಇಂಡಿಯನ್ಸ್ ಫ್ಯಾನ್ಸ್ನಿಂದಲೂ ಹಾರ್ದಿಕ್ ಪಾಂಡ್ಯ ಟ್ರೋಲ್!
- Technology ಅಗ್ಗದ ಬೆಲೆಯಲ್ಲಿ 5G ಫೋನ್ ಬೇಕೆ?..ಹಾಗಿದ್ರೆ ಈ ಆಫರ್ ನಿಮಗೆ ಸೂಪರ್!
- Lifestyle ಒಂದು ಸೌತೆಕಾಯಿ ಹಾಕಿ ಮಾಡಿ ಮೊಸರು ಹುಳಿ..! ಸಿಕ್ಕಾಪಟ್ಟೆ ರುಚಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Aryan Khan Case: ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ಪ್ರಮುಖ ಸಾಕ್ಷಿ ಪ್ರಭಾಕರ್ ನಿಧನ
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ ದೇಶದಾದ್ಯಂತ ಅತಿಯಾಗಿ ಚರ್ಚಿತವಾಗಿತ್ತು. ಆರಂಭದಲ್ಲಿ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ ಎಂದಾಗಿದ್ದ ಈ ಪ್ರಕರಣದಲ್ಲಿ ತನಿಖೆ ಚುರುಕುಗೊಂಡಂತೆ ಹಲವು ಆಯಾಮಗಳು ಹೊರಗೆ ಬಂದವು.
ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ ವಿಚಾರಣೆ ಹಂತದಲ್ಲಿದ್ದಾಗಲೇ ಪ್ರಮುಖ ತಿರುವು ತೆಗೆದುಕೊಂಡಿತ್ತು. ಈ ತಿರುವಿಗೆ ಕಾರಣವಾಗಿದ್ದು ಪ್ರಭಾಕರ್ ಸೈಲ್ ಎಂಬ ಸಾಕ್ಷಿ. ಆದರೆ ಈ ಪ್ರಮುಖ ಸಾಕ್ಷಿ ಪ್ರಭಾಕರ್ ಸೈಲ್ ನಿನ್ನೆ ರಾತ್ರಿ ಹಠಾತ್ತನೆ ನಿಧನವಾಗಿದ್ದಾರೆ. ಅವರಿಗೆ ಹೃದಯಾಘಾತವಾಗಿತ್ತು ಎಂದು ಹೇಳಲಾಗಿದೆ.
ಆರ್ಯನ್ ಖಾನ್ ವಿರುದ್ಧ ಸಾಕ್ಷ್ಯವೇ ಇಲ್ಲ! ಹಾಗಿದ್ದರೆ ಬಂಧಿಸಿದ್ದು ಏಕೆ?
Recommended Video
ಚೆಂಬೂರಿನ ಮಹಲ್ ಪ್ರದೇಶದಲ್ಲಿ ಪ್ರಭಾಕರ್ ಸೈಲ್ ವಾಸವಿದ್ದರು, ನಿನ್ನೆ ರಾತ್ರಿ ತಮ್ಮ ನಿವಾಸದಲ್ಲಿ ಅವರು ಹೃದಯಾಘಾತಕ್ಕೆ ಒಳಗಾದರು ಎನ್ನಲಾಗುತ್ತಿದೆ. ಅವರ ಮೃತದೇಹವನ್ನು ಇಂದೆ 11 ಗಂಟೆಗೆ ಅಂತಿಕ ಪ್ರಿಯೆಗೆ ಒಳಪಡಿಸಲಾಗುತ್ತದೆ.
ಆರ್ಯನ್ ಖಾನ್ ಪ್ರಕರಣದಲ್ಲಿ ಪ್ರಭಾಕರ್ ಸೈಲ್ ಪ್ರಮುಖ ಸಾಕ್ಷಿಯಾಗಿದ್ದರು. ಆರ್ಯನ್ ಖಾನ್ ಬಂಧನ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ 'ಖಾಸಗಿ ಡಿಟೆಕ್ಟಿವ್' ಎಂದು ಹೇಳಿಕೊಂಡಿದ್ದ ಕಿರಣ್ ಗೋಸಾವಿಯ ಡ್ರೈವರ್ ಆಗಿದ್ದ ಪ್ರಭಾಕರ್ ಸೈಲ್, ಆರ್ಯನ್ ಖಾನ್ ಅನ್ನು ಅಕ್ಟೋಬರ್ 02 ರಂದು ವಶಪಡಿಸಿಕೊಂಡ ಬಳಿಕ ಕಿರಣ್ ಗೋಸಾವಿ, ಶಾರುಖ್ ಖಾನ್ರ ಮ್ಯಾನೇಜರ್ ಬಳಿ ಕೋಟ್ಯಂತರ ರುಪಾಯಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಗಿ ಹಾಗೂ ಶಾರುಖ್ ಖಾನ್ರ ಮ್ಯಾನೇಜರ್ನಿಂದ ಹಣ ಪಡೆದಿದ್ದಾಗಿ ಸಹ ಹೇಳಿದ್ದರು. ಹಣ ತುಂಬಿದ್ದ ಬ್ಯಾಗನ್ನು ತಾವೇ ಕೊಂಡು ಬಂದು ಮತ್ತೊಬ್ಬ ವ್ಯಕ್ತಿಗೆ ನೀಡಿದ್ದಾಗಿ ಹೇಳಿದ್ದರು.
Aryan Khan drugs case : ಆರ್ಯನ್ ಖಾನ್ ಪ್ರಕರಣ: ಕಾಲಾವಕಾಶ ಕೇಳಿದ ಎನ್ಸಿಬಿ
ಅಲ್ಲದೆ ಆರ್ಯನ್ ಖಾನ್ ಅನ್ನು ವಶಕ್ಕೆ ಪಡೆದ ದಿನ (ಅಕ್ಟೋಬರ್ 02) ರಂದು ಸಾಕ್ಷಿಯಾಗಿ ಪ್ರಭಾಖರ್ ಸೈಲ್ ಸಹಿ ಮಾಡಿದ್ದರು. ಆದರೆ ಅಂದು ತಾನು ಸ್ಥಳದಲ್ಲಿ ಹಾಜರಿರಲಿಲ್ಲವೆಂದು ಅದರ ಮಾರನೇಯ ದಿನ ಕಿರಣ್ ಗೋಸಾವಿ ಕರೆ ಮಾಡಿದ ಬಳಿಕ ಮುಂಬೈಗೆ ಬಂದೆನೆಂದು ಹೇಳಿದ್ದರು. ಪ್ರಭಾಕರ್ ಸೈಲ್ ಹೇಳಿಕೆಯಿಂದ, ಆರ್ಯನ್ ಖಾನ್ ಅನ್ನು ಬಂಧಿಸಿದ್ದ ಎನ್ಸಿಬಿ ಮೇಲೆ ಅನುಮಾನ ಬರುವಂತೆ ಮಾಡಿದ್ದವು.
ಪ್ರಭಾಕರ್ ಸೈಲ್ ಹೇಳಿಕೆಯಿಂದ ಎನ್ಸಿಬಿ ವಿರುದ್ಧ ಅನುಮಾನ ಎದ್ದ ಕಾರಣ ಎನ್ಸಿಬಿಯ ಸಮೀರ್ ವಾಂಖೆಡೆಯನ್ನು ವರ್ಗಾವಣೆ ಮಾಡಿ ಪ್ರಕರಣವನ್ನು ಎನ್ಸಿಬಿಯ ವಿಶೇಷ ತನಿಖಾ ದಳಕ್ಕೆ ವಹಿಸಲಾಯಿತು. ಇದೀಗ ನ್ಯಾಯಾಲಯದ ವಿಚಾರಣೆಯಲ್ಲಿ ಆರ್ಯನ್ ಖಾನ್ ಡ್ರಗ್ಸ್ ಸೇವಿಸಿರಲಿಲ್ಲವೆಂದು, ಆರ್ಯನ್ ಬಳಿ ಡ್ರಗ್ಸ್ ದೊರೆತಿಲ್ಲವೆಂದು ಸಾಬೀತಾಗಿದೆ.