Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಶಾರುಖ್ ಖಾನ್ಗೆ ಬೆಂಕಿ ಇಟ್ಟು ಕೊಲ್ಲುವೆ: ಪರಮಹಂಸ ಆಚಾರ್ಯ ಸ್ವಾಮೀಜಿ
ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾದ ವಿವಾದ ದಿನೇ-ದಿನೇ ಹೆಚ್ಚು ಮಾಡಲಾಗುತ್ತಿದೆ. ತೀರ ಕ್ಷುಲ್ಲಕ ವಿಷಯಕ್ಕೆ ಪ್ರಾರಂಭವಾದ ವಿವಾದಕ್ಕೆ ಈಗ ಪ್ರತಿಭಟನೆ, ಕೊಲೆ ಬೆದರಿಕೆಗಳು ಸೇರಿಕೊಂಡಿವೆ.
'ಪಠಾಣ್' ಸಿನಿಮಾದ 'ಬೇಷರಮ್' ಹಾಡು ಕೆಲವು ದಿನಗಳ ಹಿಂದೆ ಬಿಡುಗಡೆ ಆಗಿದ್ದು ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಧರಿಸಿರುವುದು ಆಕ್ಷೇಪಕ್ಕೆ ಕಾರಣವಾಗಿದೆ. ಈ ಹಿಂದೆಯೂ ಹಲವು ಸಿನಿಮಾಗಳಲ್ಲಿ ನಟಿಯರು ಕೇಸರಿ ಬಣ್ಣದ ತುಂಡುಡುಗೆಗಳನ್ನು ತೊಟ್ಟು ಗ್ಲಾಮರಸ್ ಆಗಿ ನರ್ತಿಸಿದ್ದಿದೆ. ಆದರೆ ಶಾರುಖ್ ಖಾನ್ ಸಿನಿಮಾ ಎಂಬ ಕಾರಣಕ್ಕೆ ವಿವಾದಕ್ಕೆ ಆಯ್ದುಕೊಳ್ಳಲಾಗಿದೆ ಎಂಬ ವಾದವೂ ಇದೆ.
ಈ ಕುರಿತು ಈಗಾಗಲೇ ಕೆಲವು ಕಡೆ ಪ್ರತಿಭಟನೆಗಳು ನಡೆದು, ಶಾರುಖ್ ಖಾನ್ರ ಪೋಸ್ಟರ್ಗಳನ್ನು, ಪ್ರತಿಕೃತಿಗಳನ್ನು ದಹಿಸಲಾಗಿದೆ. ಇದೀಗ ಸ್ವಾಮೀಜಿಯೊಬ್ಬರು ಶಾರುಖ್ ಖಾನ್ ರನ್ನು ಜೀವಂತ ಸುಡುವುದಾಗಿ ಬೆದರಿಕೆ ಹಾಕಿದ್ದಾರೆ.
ಅಯೋಧ್ಯೆಯ ತಾಪಸಿ ಜಿ ಟಿ ಚವನ್ನಿ ದೇವಾಲಯದ ಪ್ರಧಾನ ಪೂಜಾರಿಯಾಗಿರುವ ಪರಮಹಂಸ ಆಚಾರ್ಯ ಎಂಬಾತ ಶಾರುಖ್ ಖಾನ್ಗೆ ನೇರ ಬೆದರಿಕೆ ಹಾಕಿದ್ದು, ಶಾರುಖ್ ಖಾನ್ ಸಿಕ್ಕರೆ ಅವನನ್ನು ಜೀವಂತವಾಗಿ ಸುಡುತ್ತೇನೆ ಎಂದಿದ್ದಾರೆ.
'ಆ ಸಿನಿಮಾದ ಹಾಡಿನಲ್ಲಿ ಕೇಸರಿ ಬಣ್ಣಕ್ಕೆ ಅಪಮಾನ ಮಾಡಲಾಗಿದೆ. ಸನಾತನ ಧರ್ಮೀಯರು ಸತತವಾಗಿ ಇದರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಇಂದು ಶಾರುಖ್ ಖಾನ್ನ ಪೋಸ್ಟರ್ಗಳನ್ನು ಸುಟ್ಟಿದ್ದೇವೆ, ನಾನೆಂದಾದರೂ ಈ 'ಫಿಲಂ ಜಿಹಾದಿ' ಶಾರುಖ್ ಖಾನ್ ಅನ್ನು ಭೇಟಿಯಾದರೆ ಆತನನ್ನು ಜೀವಂತ ಸುಡುತ್ತೇನೆ'' ಎಂದಿದ್ದಾರೆ.
ಅಷ್ಟಕ್ಕೆ ನಿಲ್ಲದ ಸ್ವಾಮೀಜಿ, ''ಪಠಾಣ್' ಸಿನಿಮಾವನ್ನು ಎಲ್ಲರೂ ಬಾಯ್ಕಾಟ್ ಮಾಡಬೇಕು, 'ಪಠಾಣ್' ಸಿನಿಮಾ ಬಿಡುಗಡೆ ಆದ ಚಿತ್ರಮಂದಿರಗಳಿಗೆ ಬೆಂಕಿ ಇಡುತ್ತೇನೆ'' ಎಂದಿದ್ದಾರೆ.
'ಪಠಾಣ್' ಸಿನಿಮಾದ ವಿರುದ್ಧ, ಶಾರುಖ್ ಖಾನ್ ವಿರುದ್ಧ ಮುಂಬೈನಲ್ಲಿ ವಿಎಚ್ಪಿ ದೂರು ನೀಡಿದೆ. ಸಿನಿಮಾವನ್ನು ಹಿಂದು ವಿರೋಧಿ ಎಂದು ಕರೆಯಲಾಗಿದೆ.