Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿ ರಾಖಿ ಸಾವಂತ್ ಕೈಗೆ ಹಸಿಮೆಣಸಿನಕಾಯೇ ಗತಿ
ಬಾಲಿವುಡ್ ನ ಡ್ರಾಮ ಕ್ವೀನ್ ರಾಖಿ ಸಾವಂತ್ ಅವರಿಗೆ ಈ ರಾಜಕೀಯ ಶೋಕಿ ಯಾಕೆ ಬೇಕಿತ್ತೋ ಏನೋ? ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಖಿ ಸಾವಂತ್ ಅವರನ್ನು ಮತದಾರ ಪ್ರಭುಗಳು ಸಾರಸಗಟಾಗಿ ತಿರಸ್ಕರಿಸಿ ಕೈಗೆ ಹಸಿ ಮೆಣಸಿನಕಾಯಿ ಕೊಟ್ಟಿದ್ದಾರೆ.
ಸ್ವತಃ
ತಾನೇ
ಪಕ್ಷ
ಕಟ್ಟಿ
ಈ
ಬಾರಿಯ
ಲೋಕಸಭೆ
ಚುನಾವಣೆಗೆ
ಸ್ಪರ್ಧಿಸಿದ್ದರು.
ಹಸಿ
ಮೆಣಸಿನಕಾಯಿ
(Greeen
Chilli)
ಚಿನ್ಹೆಯೊಂದಿಗೆ
ಬಿಸಿಬಿಸಿ
ಪ್ರಚಾರವನ್ನೂ
ಮಾಡಿದ್ದರು.
ಆದರೆ
ಕಡೆಗೆ
ರಾಖಿ
ಪಾಲಿಗೆ
ಮೆಣಸಿನಕಾಯಿ
ಸಖತ್
ಹಾಟ್
ಆಗಿ
ಪರಿಣಮಿಸಿದೆ.
[ಚುನಾವಣೆಯಲ್ಲಿ
ಗೆದ್ದ
ಮತ್ತು
ಬಿದ್ದ
ಸೆಲೆಬ್ರಿಟಿಗಳು
]
ಮೆಟ್ರೋ ನಗರಗಳಲ್ಲಿ ಮಹಿಳೆಯರಿಗೆ ರಕ್ಷಣೆ...ಭದ್ರತೆ ಕಲ್ಪಿಸುತ್ತೇನೆ ಎಂಬ ಧ್ಯೇಯವಾಕ್ಯದೊಂದಿಗೆ ಕಣಕ್ಕಿಳಿದ ರಾಖಿಗೆ ಕಡೆಗೆ ಮತದಾರರು ಕೈಹಿಡಿಯಲಿಲ್ಲ. ಇದರಿಂದ ತೀವ್ರ ಬೇಸರಗೊಂಡ ರಾಖಿ ಸಾವಂತ್ ತಾನೇ ಕಟ್ಟಿದ ರಾಷ್ಟ್ರೀಯ ಆಮ್ ಪಕ್ಷಕ್ಕೆ (RAP) ರಾಜೀನಾಮೆ ಬಿಸಾಕಿದ್ದಾರೆ.
ಮುಂಬೈನ ವಾಯುವ್ಯ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಖಿಗೆ ಬಿದ್ದ ಒಟ್ಟು ಮತಗಳು ಕೇವಲ 1,995. ಚುನಾವಣೆಯಲ್ಲಿ ತನ್ನ ಬಳಿ ಮತದಾರರಿಗೆ ಹಂಚುವಷ್ಟು ಹಣ ಇಲ್ಲದೆ ಇದ್ದದ್ದೇ ಸೋಲಿಗೆ ಕಾರಣ ಎಂದಿದ್ದಾರೆ ರಾಖಿ.
ಅದೇನೋ ಹೇಳ್ತಾರಲ್ಲಾ ಕುಣಿಯಲಾರದವಳು... ಎಂಬಂತಾಗಿದೆ ರಾಖಿ ಸಾವಂತ್ ಪರಿಸ್ಥಿತಿ. ಹೋಗ್ಲಿ ಬಿಡಿ ರಾಜಕೀಯದಲ್ಲಿ ಇರದಿದ್ದರೇನಂತೆ ಬಾಲಿವುಡ್ ಐಟಂ ಡಾನ್ಸ್ ಗಳಲ್ಲಿ ರಾಖಿ ಇದ್ದೇ ಇರುತ್ತಾರಲ್ಲಾ ಎಂದು ಆಕೆಯ ಅಭಿಮಾನಿಗಳು ಖುಷಿಪಟ್ಟಿದ್ದಾರೆ.