ಚಂದನ್ ಶೆಟ್ಟಿ
ಚಂದನ್ ಶೆಟ್ಟಿ ಜೀವನಚರಿತ್ರೆ
ಚಂದನ್ ಶೆಟ್ಟಿ ಕನ್ನಡ ಚಿತ್ರರಂಗದ ಪ್ರಸಿದ್ಧ ಗಾಯಕ ,ಸಂಗೀತ ನಿರ್ದೇಶಕ ಮತ್ತು ಗೀತರಚನಾಕಾರ. ಗೀತರಚನಾಕಾರವಾಗಿ ಸಿನಿಪಯಣ ಆರಂಭಿಸಿದ ಇವರು ಅರ್ಜುನ ಜನ್ಯ ಕೈಕೆಳಗೆ ಸಹಾಯಕ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ವೈಯಕ್ತಿಕ ಜೀವನ
ಹಾಸನದ ಶಾಂತಿನಗರದಲ್ಲಿ ಜನಿಸಿದ ಚಂದನ್ ಶೆಟ್ಟಿಯವರ ತಂದೆ ಪರಮೇಶ ಒಬ್ಬ ವ್ಯಾಪಾರಿ ಮತ್ತು ತಾಯಿ ಪ್ರೇಮಾ ಗೃಹಿಣಿ. ಸಕಲೇಶಪುರದ ರೋಟರಿ ಶಾಲೆಯಲ್ಲಿ ಪ್ರಾಥಮಿಕ ಶಾಲೆ ಮುಗಿಸಿದ ಇವರು ಪಿಯುಸಿಯನ್ನು ಪುತ್ತೂರಿನಲ್ಲಿ ಪೂರ್ಣಗೊಳಿಸಿದರು. ಮೈಸೂರಿನಲ್ಲಿ BBM ಪದವಿ ಪಡೆದ ಇವರು ಒಂದು ವರ್ಷ ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡಿದ್ದರು.
ಚಿತ್ರಜಗತ್ತಿನ ಪಯಣ
2012 ರಲ್ಲಿ `ಅಲೆಮಾರಿ' ಚಿತ್ರದಲ್ಲಿ ಚಿತ್ರಸಾಹಿತಿಯಾಗಿ ಮತ್ತು ಸಹಾಯಕ ಸಂಗೀತ ನಿರ್ದೇಶಕರಾಗಿ ಅರ್ಜುನ ಜನ್ಯ ಕೈಕೆಳಗೆ ಕೆಲಸ ಮಾಡಿದರು. ಅರ್ಜುನ ಜನ್ಯರನ್ನು ಗುರುವೆಂದು ಭಾವಿಸುವ ಚಂದನರನ್ನು `ಅರ್ಜುನ ಜನ್ಯ'ರಿಗೆ ಪರಿಚಯಿಸಿದ್ದು ನಟ `ಚೀರಂಜೀವಿ ಸರ್ಜಾ'. ನಂತರ ವರದನಾಯಕ, ಪವರ್,ಚಕ್ರವ್ಯೂಹ, ಭಜರಂಗಿ ಮುಂತಾದ ಚಿತ್ರಗಳ ಹಾಡುಗಳಿಗೆ ಧ್ವನಿ ನೀಡಿದ್ದಾರೆ.
ನಂತರ ತಮ್ಮ ರಾಪ್ ಮ್ಯುಸಿಕ್ ಅಲ್ಬಮ್ ಗಳಿಂದ ಮನೆಮಾತಾದ ಚಂದನ್ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಗುರ್ತಿಸಿಕೊಂಡಿರು. `ಸೀಜರ್',`ಕಿರಿಕ್ ಕೀರ್ತೀ',`ಸಂಜೀವ' ಚಿತ್ರಗಳಿಗೆ ಸಂಗೀತ ನೀಡಿದ್ದಾರೆ.
ಬಿಗಬಾಸ್ ಸೀಜನ್ 5 ರ ವಿಜೇತ
ಇವರು ಕನ್ನಡ ಬಿಗಬಾಸ್ ಸೀಜನ್ 5 ರ ಸ್ಪರ್ಧಿಯಾಗಿದ್ದರು . ತುಂಬಾ ಹುಮ್ಮಸ್ಸಿನಿಂದ ಎಲ್ಲಾ ಚಟಿವಟಿಕೆಗಳಲ್ಲೂ ಭಾಗವಹಿಸಿದ ಇವರು ಸ್ಪರ್ಧೆಯ ವಿಜೇತರಾದರು.