ಗುರುದತ್ತ್ ಜೀವನಚರಿತ್ರೆ
ಚಿಟ್ನಹಳ್ಳಿ ಗುರುದತ್ತ್ (ಚಿ.ಗುರುದತ್ತ್) ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟ ಮತ್ತು ನಿರ್ದೇಶಕ. ಇವರು ಖ್ಯಾತ ಗೀತಸಾಹಿತಿ ಮತ್ತು ಸಂಭಾಷಣಾಕಾರ ಚಿ.ಉದಯಶಂಕರ್ರವರ ಪುತ್ರ.
ಇವರು 1986 ರಲ್ಲಿ ತೆರೆಕಂಡ ಶಿವರಾಜಕುಮಾರ್ ಅಭಿನಯದ `ಆನಂದ್' ಚಿತ್ರದಿಂದ ಸಿನಿಪಯಣ ಆರಂಭಿಸಿದರು.1989 ರಲ್ಲಿ ಕೆ.ಬಾಲಚಂದರ್ ರವರ ಚಿತ್ರದ ಮೂಲಕ ತಮಿಳು ಸಿನಿರಂಗದಲ್ಲಿ ಪಯಣ ಆರಂಭಿಸಿದರು.
ಸುಮಾರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಗುರುದತ್ತ್, ಡಿ.ರಾಜೇಂದ್ರ ಬಾಬು ಮಡಿದ ನಂತರ ಅರ್ಧ ಚಿತ್ರೀಕರಣಗೊಂಡಿದ್ದ ಶಿವರಾಜಕುಮಾರ್ರವರ `ಆರ್ಯನ್' ಚಿತ್ರವನ್ನು ಪೂರ್ಣಗೊಳಿಸಿದರು.
ಗುರುದತ್ತ್ ಸಮರ,ದತ್ತ,ಕಾಮಣ್ಣನ ಮಕ್ಕಳು, ಕಿಚ್ಚ-ಹುಚ್ಚ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.