ಹುಣಸೂರು ಕೃಷ್ಣಮೂರ್ತಿ
ಹುಣಸೂರು ಕೃಷ್ಣಮೂರ್ತಿ ಜೀವನಚರಿತ್ರೆ
ಹುಣಸೂರು ಕೃಷ್ಣಮೂರ್ತಿ ಕನ್ನಡ ಚಿತ್ರರಂಗದ ದಿಗ್ಗಜ ಚಿತ್ರಸಾಹಿತಿ, ನಿರ್ಮಾಪಕ ಮತ್ತು ನಿರ್ದೇಶಕ. ಬಾಲ್ಯದಲ್ಲಿಯೇ ಸಾಹಿತ್ಯ ಮತ್ತು ನಾಟಕಗಳ ಆಸಕ್ತರಾಗಿದ್ದ ಇವರು ಹತ್ತು ವರ್ಷದವರಿದ್ದಾಗಲೆ ನಾಟಕದಲ್ಲಿ ಅಭಿನಯಿಸತೊಡಗಿದರು. ಒಮ್ಮೆ ಇವರ ಅಭಿನಯ ನೋಡಿ ಮೆಚ್ಚಿದ ಕಪಾಡಿಯವರು ಇವರನ್ನು ಮುಂಬೈಗೆ ಕರೆದೊಯ್ದು `ಸಿಂಹಳ ಸುಂದರಿ' ಮೂಕಿ ಚಿತ್ರದಲ್ಲಿ ನಟಿಸುವ ಅವಕಾಶ ನೀಡಿದರು. ನಂತರ ಮರಳಿದ ಇವರು ಕೆಲಕಾಲದ ನಂತರ ಮತ್ತೇ ಮುಂಬೈಗೆ ಮರಳಿದ ಇವರು `ಮುಂಬೈಗೆ ಟಾಕೀಸ್' ಸೇರಿದರು. ನಂತರ ಕರ್ನಾಟಕಕ್ಕೆ ಮರಳಿದ ಇವರು ಗುಬ್ಬಿ ವೀರಣ್ಣ ಕಂಪನಿಯಲ್ಲಿ ಸೇರಿ ಹಲವಾರು ನಾಟಕಗಳನ್ನು ರಚಿಸಿದರು. `ಹೇಮರೆಡ್ಡಿ ಮಲ್ಲಮ್ಮ' ಚಿತ್ರ ಇವರು ಸಂಭಾಷಣೆ ಬರೆದ ಮೊದಲ ಚಿತ್ರ. ನಂತರ ಸಾಕಷ್ಟು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ. 1958 ರಲ್ಲಿ ತೆರೆಕಂಡ `ಶ್ರೀ ಕೃಷ್ಣ ಗಾರುಡಿ' ಚಿತ್ರದ ಮೂಲಕ ನಿರ್ದೇಶಕರಾದರು. ನಂತರ `ಭಕ್ತ ಸಿರಿಯಾಳ',`ಬಬ್ರುವಾಹನ',`ಭಕ್ತ ಕುಂಬಾರ' ಮುಂತಾದ ಅದ್ಭುತ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.