ಲೋಕನಾಥ್
ಲೋಕನಾಥ್ ಜೀವನಚರಿತ್ರೆ
ಲೋಕನಾಥ್ ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಮತ್ತು ರಂಗಕರ್ಮಿ. ಸುಮಾರು ಸಾವಿರಕ್ಕೂ ಹೆಚ್ಚು ನಾಟಕಗಳಲ್ಲಿ ಮತ್ತು 650 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. `ಮಿಂಚಿನ ಓಟ' ಚಿತ್ರದಲ್ಲಿ ಶಂಕರನಾಗ್-ಅನಂತ್ ಜೋತೆ ಇವರ ಅಭಿನಯ ತುಂಬಾ ಪ್ರಶಂಸೆ ಪಡೆದಿತ್ತು. ಶಂಕರನಾಗ್ರ `ಮಾಲ್ಗುಡಿ ಡೇಸ್'ದಲ್ಲಿನ ಮತ್ತು `ನಾಗರಹಾವು' ಚಿತ್ರದಲ್ಲಿನ ಅಭಿನಯದಿಂದ ಹೆಸರುವಾಸಿಯಾಗಿದ್ದಾರೆ. `ಭೂತಯ್ಯನ ಮಗ ಅಯ್ಯ', ಸಿಂಗಾಪೂರಿನಲ್ಲಿ ರಾಜಾ ಕುಳ್ಳ'`ಸಂಸ್ಕಾರ',`ಗೆಜ್ಜೆ ಪೂಜೆ',`ಬಂಗಾರದ ಮನುಷ್ಯ' ಹೀಗೆ ಹಲವಾರು ಪ್ರಸಿದ್ಧ ಚಿತ್ರಗಳಲ್ಲಿ ನಟಿಸಿದ್ದಾರೆ.
ಹನುಮಂತಪ್ಪ ಮತ್ತು ಗೌರಮ್ಮ ದಂಪತಿ ಪುತ್ರನಾಗಿ 1927 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಜವಳಿ ವಾಣಿಜ್ಯ ವ್ಯಾಪಾರ ಕುಟುಂಬದ ಮೂಲ ವೃತ್ತಿಯಾಗಿತ್ತು. ಮನೆಗೆ ನೆರವಾಗಲು ತಮ್ಮ ಇಂಜಿನಿಯರಿಂಗ್ ವಿಧ್ಯಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದರು.
ಕೈಲಾಸಂರವರ ಸಹಾಯದಿಂದಾಗಿ ನಾಟಕರಂಗಕ್ಕೆ ಪಾದಾರ್ಪಣೆ ಮಾಡಿದರು. `ಚಂದ್ರಹಾಸ',`ಗೆಲಿಲಿಯೋ'`ಬಿಡುಗಡೆ' ಮುಂತಾದವು ಇವರ ಪ್ರಸಿದ್ಧ ನಾಟಕಗಳು. ಯು.ಆರ್.ಅನಂತಮೂರ್ತಿ ಕೃತಿ ಆಧಾರಿತ `ಸಂಸ್ಕಾರ' ಇವರು ನಟಿಸಿದ ಮೊದಲ ಚಿತ್ರ.
ವಯೋಸಹಜ ಖಾಯಿಲೆಯಿಂದ ಬಳುಲುತ್ತಿದ್ದ ಇವರು 2018 ಡಿಸೆಂಬರ್ 31 ರ ಬೆಳಿಗ್ಗೆ ನಿಧನರಾದರು.ಇವರ ಪಾರ್ಥಿವ ಶರಿರದ ಅಂತಿಮ ದರ್ಶನವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿತ್ತು.