ಮಿಮಿಕ್ರಿ ದಯಾನಂದ್
ಮಿಮಿಕ್ರಿ ದಯಾನಂದ್ ಜೀವನಚರಿತ್ರೆ
ಮಿಮಿಕ್ರಿ ದಯಾನಂದ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಬಹುಮುಖ ಪ್ರತಿಭೆ. ಸ್ಟಾಂಡ್ -ಅಪ್ ಕಾಮಿಡಿ ಮತ್ತು ತಮ್ಮ ವಿಶಿಷ್ಟ ಶೈಲಿಯ ಮಿಮಿಕ್ರಿಯಿಂದ ಪ್ರಸಿದ್ಧರಾಗಿದ್ದಾರೆ. ಸಾಕಷ್ಟು ಕಾಮಿಡಿ ಅಲ್ಬಮ್ ಗಳಲ್ಲಿ ಹೊರತಂದಿರುವ ಇವರು ಕಿರುತೆರೆಯಲ್ಲಿ ನಿರೂಪಕರಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ. ಇವರು ಜನಿಸಿದ್ದು ಮೈಸೂರಿನಲ್ಲಿ.
2008 ರಲ್ಲಿ ಈ ಟಿವಿ ಕನ್ನಡದ `ಕಚಗುಳಿ' ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು. ನಂತರ ಕಸ್ತೂರಿ ವಾಹಿನಿಯ `ಹಾಸ್ಯದ ರಸ' ಎಂಬ ಕಾರ್ಯಕ್ರಮದ ತೀರ್ಪುಗಾರರಾಗಿ ಕೂಡ ಕಾರ್ಯನಿರ್ವಹಿಸದ್ದರು. ಸೃಜನ್ ಲೋಕೇಶ್ ಸಾರಥ್ಯದಲ್ಲಿ ಮೂಡಿಬಂದ `ಮಜ ವಿಥ್ ಸೃಜಾ' ಕಾರ್ಯಕ್ರಮದಲ್ಲಿ ಕೂಡ ಸಕ್ರಿಯವಾಗಿದ್ದರು.