twitter
    Celebs»Shivaram»Biography

    ಶಿವರಾಮ್ ಜೀವನಚರಿತ್ರೆ

    ಶಿವರಾಮ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಪೋಷಕ ನಟ, ನಿರ್ದೇಶಕ ಮತ್ತು ನಿರ್ಮಾಪಕ. ಇವರು 1938 ಜನೇವರಿ 28 ರಂದು ಮದ್ರಾಸ್ ಪ್ರೆಸಿಡೆನ್ಸಿಯ ಚೂಡಸಂದ್ರ ದಲ್ಲಿ ಜನಿಸಿದರು. ನಾಯಕನಾಗಿ, ಪೋಷಕ ನಟ ಮತ್ತು ಹಾಸ್ಯ ನಟನಾಗಿ ಶಿವರಾಮ್ ಕನ್ನಡದಲ್ಲಿ ಅಭೂತಪೂರ್ವ ಯಶಸ್ಸು ಪಡೆದಿದ್ದಾರೆ. ಸಹೋದರ್ ಎಸ್ ರಾಮನಾಥನ್ ಜೊತೆ ಸೇರಿ `ರಾಶಿ ಬ್ರದರ್ಸ್' ಬ್ಯಾನರ್ ಅಡಿಯಲ್ಲಿ ಚಿತ್ರಗಳನ್ನು ನಿರ್ಮಾಣ ಮಾಡಿದರು. ಇದರ ಜೊತೆಗೆ ಡಾ. ರಾಜಕುಮಾರ್ ಮತ್ತು ಶಂಕರನಾಗ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದ `ಹೃದಯ ಸಂಗಮ' ಚಿತ್ರವನ್ನು ನಿರ್ದೇಶಿಸಿದರು. ರಾಶಿ ಸಹೋದರರು ಗೆಜ್ಜೆ ಪೂಜೆ, ಉಪಾಸನೆ, ನಾನೊಬ್ಬ ಕಳ್ಳ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದಾರೆ.


    ಗುಬ್ಬಿ ವೀರಣ್ಣ ನಾಟಕ ಕಂಪನಿಯಿಂದ ನಟನೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಶಿವರಾಮ್, ಕೆ.ಆರ್.ಸೀತಾರಾಮ್ ಶಾಸ್ತ್ರೀರವರ ಬಳಿಯಲ್ಲಿ ಸಹಾಯಕ ನಿರ್ದೇಶಕರಾಗಿ ಸೇರಿಕೊಂಡರು. 1965 ರಲ್ಲಿ ತೆರೆಕಂಡ `ಬೆರತ ಜೀವ' ಚಿತ್ರದಿಂದ ಸಿನಿ ಜೀವನ ಆರಂಭಿಸಿದ ನಂತರ ಸುಮಾರು ಆರು ದಶಕಗಳ ಕಾಲ ಕನ್ನಡದಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ.


    2021 ಡಿಸೆಂಬರ್ 4 ರಂದು ಮನೆಯಲ್ಲಿ ಜಾರಬಿದ್ದು, ಮೆದುಳಿನ ರಕ್ತಸ್ರಾವದಿಂದ ನಿಧನರಾದರು.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X