ಸ್ಕಂದ ಅಶೋಕ ಕನ್ನಡ ,ಮಲಯಾಳಂ,ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟ. ಕನ್ನಡ ಕಿರುತೆರೆಯಲ್ಲಿ ಕೂಡ ರಾಧಾರಮಣ ಸೀರಿಯಲ್ ನಿಂದ ಪ್ರಸಿದ್ಧರಾಗಿದ್ದಾರೆ.
1986 ಎಪ್ರಿಲ್ 26 ರಂದು ಚಿಕ್ಕಮಗಳೂರಿನಲ್ಲಿ ಜನಿಸಿದ ಸ್ಕಂದ 2006 ರಲ್ಲಿ ತೆರೆಕಂಡ ಮಲಯಾಳಂ ಚಿತ್ರ `ನೋಟಬುಕ್' ಚಿತ್ರದಿಂದ ಸಿನಿಪಯಣ ಆರಂಭಿಸಿದರು. ಇದಕ್ಕೂ ಮೊದಲು ಕೆಲ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು. ನಂತರ ಮತ್ತೊಂದು ಮಲಯಾಳಂ ಚಿತ್ರದ ಜೊತೆಗೆ ಒಂದು ತೆಲುಗು ಚಿತ್ರ ಮತ್ತು ಎರಡು ತಮಿಳು ಚಿತ್ರಗಳಲ್ಲಿ ನಟಿಸಿದರು.
ಕನ್ನಡದಲ್ಲಿ 2012 ರಲ್ಲಿ ತೆರೆಕಂಡ `ಚಾರುಲತಾ' ಚಿತ್ರದಿಂದ ಸಿನಿಪಯಣ ಆರಂಭಿಸಿದ ಸ್ಕಂದ,ನಂತರ ಯು ಟರ್ನ್, ಕಾನೂರಾಯಣ, ದೇವಯಾನಿ, ಭೈರಾದೇವಿ ಚಿತ್ರಗಳಲ್ಲಿ ನಟಿಸಿದ್ದಾರೆ. 2017 ರಲ್ಲಿ ಕಿರುತೆರೆಯಲ್ಲೂ ಕೂಡ ನಟಿಸಲು ಆರಂಭಿಸಿದ ಸ್ಕಂದ ಕಲರ್ಸ್ ವಾಹಿನಿಯ `ರಾಧಾರಮಣ' ಧಾರಾವಾಹಿಯ ಮೂಲಕ ಪ್ರಸಿದ್ಧರಾದರು.2018 ಮೇ 31 ರಂದು ಶಿಖಾ ಪ್ರಸಾದ್ ಎಂಬುವರನ್ನು ವಿವಾಹವಾದರು.