ಠಾಕೂರ್ ಅನೂಪ್ ಸಿಂಗ್
ಠಾಕೂರ್ ಅನೂಪ್ ಸಿಂಗ್ ಜೀವನಚರಿತ್ರೆ
ಅನೂಪ್ ಸಿಂಗ್ ಕನ್ನಡ,ತಮಿಳು ,ಹಿಂದಿ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಉದಯೋನ್ಮುಖ ನಟ. ಇವರು 2013 ರಲ್ಲಿ ಸ್ಟಾರ್ ಪ್ಲಸ್ ಚಾನೆಲ್ನಲ್ಲಿ ಪ್ರಸಾರವಾದ `ಮಹಾಭಾರತ' ಸೀರಿಯಲ್ ನಲ್ಲಿ `ಧೃತರಾಷ್ಟ್ರನ ಪಾತ್ರದ ಮೂಲಕ ಮನೆಮಾತಾದರು.
ಬಾಡಿ ಬಿಲ್ಡರ್ ಆಗಿರುವ ಅನೂಪ್ 2015 ರಲ್ಲಿ ಬ್ಯಾಂಕಾಕ್ ನಲ್ಲಿ ನೆಡೆದ `ಬಾಡಿ ಬಿಲ್ಡಿಂಗ್' ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಬಾಡಿಬಿಲ್ಟರ್ ಮಾತ್ರವಲ್ಲದೇ ಒಬ್ಬ ವಿಮಾನ ಪೈಲಟ್ ಮತ್ತು ಹಿನ್ನಲೆ ಗಾಯಕರಾಗಿಯೂ ಪ್ರಸ್ತುತರು.
`ರೋಗ್' ಚಿತ್ರದ ಮೂಲಕ ಕನ್ನಡ ಚತ್ರರಂಗ ಪ್ರವೇಶಿಸಿದ ಇವರು ಚಾಲೆಂಜಿಂಗ್ ಸ್ಡಾರ್ ದರ್ಶನ್ ಅಭಿನಯದ `ಯಜಮಾನ' ಚಿತ್ರದಲ್ಲಿ ಖಳನಾಯಕನ ಪಾತ್ರ ಮಾಡಿದ್ದಾರೆ. ಹಾಗೆಯೇ ಸುನೀಲ್ ಕುಮಾರ ದೇಸಾಯಿ ನಿರ್ದೇಶಿಸುತ್ತಿರುವ `ಉದ್ಘರ್ಷ' ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಈ ಮೊದಲು ತಮಿಳಿನಲ್ಲಿ ಸೂರ್ಯ ಅಭಿನಯದ `ಸಿಂಗಂ 3' ಮತ್ತು ತೆಲುಗುವಿನಲ್ಲಿ ಅಲ್ಲು ಅರ್ಜುನ್ ಅಭಿನಯದ `ನಾ ಪೇರು ಸೂರ್ಯ ನಾ ಇಲ್ಲು ಇಂಡಿಯಾ' ಚಿತ್ರಗಳಲ್ಲಿ ಖಡಕ್ ವಿಲನ್ ಆಗಿ ಮಿಂಚಿದ್ದರು.