twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರನಟಿ ರಂಜಿತಾ ಆತ್ಮಹತ್ಯೆಗೆ ಯತ್ನ?

    By Rajendra
    |

    ಸ್ವಾಮಿ ನಿತ್ಯಾನಂದ ರಾಸಲೀಲೆ ಪ್ರಕರಣದಲ್ಲಿ ಕಾಣಿಸಿಕೊಂಡಿದ್ದ ನಟಿ ರಂಜಿತಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಮಾರ್ಚ್ 2ರಂದು ಆಧ್ಯಾತ್ಮಿಕ ಗುರು ಸ್ವಾಮಿ ನಿತ್ಯಾನಂದ ರಾಸಲೀಲೆಯ ವಿಡಿಯೋವನ್ನು ಸನ್ ನ್ಯೂಸ್ ನ ಪ್ರಸಾರ ಮಾಡಿತ್ತು. ನಿತ್ಯಾನಂತ ರಾಸಲೀಲೆ ಪ್ರಕರಣ ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಯಾಗಿರುವ ಹಿನ್ನೆಲೆಯಲ್ಲಿ ನಟಿ ರಂಜಿತಾ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ತಿಳಿದುಬಂದಿದೆ.ಈಗಾಗಲೇ ವಿಚ್ಛೇದಿತ ಸೈನಿಕಾಧಿಕಾರಿಯೊಬ್ಬರನ್ನು ನಟಿ ರಂಜಿತಾ ಮದುವೆಯಾಗಿದ್ದಾರೆ.

    ದಿನೇ ದಿನೇ ಸ್ವಾಮಿ ನಿತ್ಯಾನಂದ ರಾಸಲೀಲೆ ಪ್ರಕರಣ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸ್ವಾಮಿ ನಿತ್ಯಾನಂದನನ್ನು ಬೆದರಿಸಲು ಸ್ವತಃ ರಂಜಿತಾಳೇ ಈ ರಾಸಲೀಲೆ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.ಆದರೆ ದುರದೃಷ್ಟ ಸಂಗತಿಯೆಂದರೆ ರಾಸಲೀಲೆ ವಿಡಿಯೋ ಮಾಧ್ಯಮಗಳ ಕೈಗೆ ಸಿಕ್ಕಿ ರಂಜಿತಾ ಪ್ಲಾನ್ ಎಲ್ಲಾ ಉಲ್ಟಾ ಆಗಿದೆ ಎನ್ನಲಾಗಿದೆ.

    ಏತನ್ಮಧ್ಯೆ ಸ್ವಾಮಿ ನಿತ್ಯಾನಂದರ ವಕೀಲ ಎಂ ಶ್ರೀಧರ್ ಅವರು ಮಾತನಾಡುತ್ತಾ, ಸ್ವಾಮಿ ನಿತ್ಯಾನಂದರು ಎಲ್ಲೂ ತಲೆಮರೆಸಿಕೊಂಡು ಓಡಿಹೋಗಿಲ್ಲ. ಅವರು ಕುಂಭಮೇಳದಲ್ಲಿ ಭಾಗವಹಿಸುವ ಸಲುವಾಗಿ 4000 ಭಕ್ತಾದಿಗಳೊಂದಿಗೆ ವಾರಣಾಸಿಯಲ್ಲಿದ್ದಾರೆ. ಮಾರ್ಚ್ 18ರಂದು ಅವರು ಹಿಂತಿರುಗಲಿದ್ದಾರೆ ಎಂದು ತಿಳಿಸಿದ್ದಾರೆ.

    ಸ್ವಾಮಿ ನಿತ್ಯಾನಂದ ರಾಸಲೀಲೆ ಪ್ರರಣದ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಶ್ರೀಧರ್, ರಂಜಿತಾ ವೈವಾಹಿಕ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿದ್ದ ಕಾರಣ ಆಕೆ ಮಾನಸಿಕವಾಗಿ ಖಿನ್ನರಾಗಿ ಆಶ್ರಮಕ್ಕೆ ಬಂದಿದ್ದರು. ಬಳಿಕ ಅವರು ನಿತ್ಯಾನಂದ ಅವರ ಪರಭಕ್ತೆಯಾಗಿ ಬದಲಾದರು. ರಾಸಲೀಲೆ ವಿಡಿಯೋ ನಕಲಿಯಾಗಿದ್ದು, ವಿಡಿಯೋದಲ್ಲಿ ಕಾಣಿಸುವ ಮಹಿಳೆ ಕುತ್ತಿಗೆ ಭಾಗವನ್ನು ಸಂಪೂರ್ಣವಾಗಿ ಮುಚ್ಚಿಕೊಂಡೇ ಕಾಣಿಸುವುದರ ಹಿಂದಿನ ರಹಸ್ಯವೇನು ಎಂದು ಅವರು ಪ್ರಶ್ನಿಸಿದ್ದಾರೆ.

    Friday, September 24, 2010, 18:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X