Don't Miss!
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Lifestyle ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- News ಮೈಸೂರು: ಪ್ರಧಾನಿ ಮೋದಿ ಕುರಿತಾದ ಹಾಡು ಶೇರ್ ಮಾಡಿ ಎಂದಿದ್ದಕ್ಕೆ ಯುವಕನ ಮೇಲೆ ಹಲ್ಲೆ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೇಳ್ರಪ್ಪೋ ಕೇಳಿ.. 'ಬಾಹುಬಲಿ-2' ಚಿತ್ರದ ಕರ್ನಾಟಕ ವಿತರಣಾ ಹಕ್ಕು ಬಿಕರಿ ಆಗಿಲ್ಲ.!
ಅಚ್ಚರಿ ಪಡುವ ಸುದ್ದಿ ಅಂದ್ರೆ ಇದೇ ನೋಡಿ... ರಾಷ್ಟ್ರ ಮಟ್ಟದಲ್ಲಿ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರುವ 'ಬಾಹುಬಲಿ-2' ಚಿತ್ರ ಬಿಡುಗಡೆ ಆಗಲು ಕೆಲವೇ ದಿನಗಳು ಬಾಕಿ ಉಳಿದಿದ್ದರೂ, ಕರ್ನಾಟಕದಲ್ಲಿ 'ಬಾಹುಬಲಿ-2' ಸಿನಿಮಾದ ವಿತರಣೆ ಹಕ್ಕು ಇನ್ನೂ ಬಿಕರಿ ಆಗಿಲ್ಲ.!
ಕಾವೇರಿ ಹೋರಾಟದ ಸಂದರ್ಭದಲ್ಲಿ ಕನ್ನಡಿಗರ ಬಗ್ಗೆ ಕೇವಲವಾಗಿ ಮಾತನಾಡಿರುವ 'ಬಾಹುಬಲಿ' ಚಿತ್ರದ ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್ ಬಹಿರಂಗವಾಗಿ ಕ್ಷಮೆ ಕೇಳುವವರೆಗೂ, 'ಬಾಹುಬಲಿ-2' ಚಿತ್ರಕ್ಕೆ ಕರ್ನಾಟಕದಲ್ಲಿ ಬಿಡುಗಡೆ ಭಾಗ್ಯ ಇಲ್ಲ ಎಂದು ಕನ್ನಡ ಪರ ಸಂಘಟನೆಗಳು ಘೋಷಿಸಿವೆ.[ಕಟ್ಟಪ್ಪನ ಮೇಲೆ ಕೋಪ: ಕನ್ನಡಿಗರಿಂದ 'ಬಾಹುಬಲಿ-1' ಮರುಪ್ರದರ್ಶನ ರದ್ದು]
ಇದರ ಮಧ್ಯೆ 'ಬಾಹುಬಲಿ-2' ಚಿತ್ರದ ಕರ್ನಾಟಕ ವಿತರಣೆಗೆ ನಿರ್ಮಾಪಕರು ದೊಡ್ಡ ಮೊತ್ತ ಕೇಳಿರುವುದರಿಂದ, ಕರುನಾಡಲ್ಲಿ 'ಬಾಹುಬಲಿ-2' ಸಿನಿಮಾದ ವಿತರಣೆ ಹಕ್ಕು ಇನ್ನೂ ಸೇಲ್ ಆಗಿಲ್ಲ. ಮುಂದೆ ಓದಿ....
ಪೈಪೋಟಿಯಲ್ಲಿ ಇರುವುದು ಬೆರಳೆಣಿಕೆಯ ಮಂದಿ
ಕರ್ನಾಟಕದಲ್ಲಿ 'ಬಾಹುಬಲಿ-2' ಚಿತ್ರವನ್ನ ವಿತರಣೆ ಮಾಡಲು ಲಹರಿ ಸಂಸ್ಥೆ ಸೇರಿದಂತೆ ಬೆರಳೆಣಿಕೆಯಷ್ಟು ಮಂದಿ ಮಾತ್ರ ಪೈಪೋಟಿಯಲ್ಲಿ ಇದ್ದಾರೆ.[ಸುದೀಪ್ ಚಿತ್ರಗಳನ್ನ ಬ್ಯಾನ್ ಮಾಡಿ: ಕನ್ನಡಿಗರಿಗೆ 'ಟ್ರೋಲ್ ಟಾಲಿವುಡ್' ಲೇವಡಿ.!]
ಹೆಚ್ಚು ಮೊತ್ತ ಡಿಮ್ಯಾಂಡ್
ಬಹುನಿರೀಕ್ಷೆ ಮೂಡಿಸಿರುವ 'ಬಾಹುಬಲಿ-2' ಚಿತ್ರವನ್ನ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಬರೋಬ್ಬರಿ 40 ಕೋಟಿ ರೂಪಾಯಿ ಕೇಳುತ್ತಿದ್ದಾರಂತೆ. ಅಷ್ಟು ದೊಡ್ಡ ಮೊತ್ತವನ್ನು ಕೊಟ್ಟು 'ಬಾಹುಬಲಿ-2' ಚಿತ್ರವನ್ನ ಕರ್ನಾಟಕಕ್ಕೆ ತರಲು ಇಲ್ಲಿನ ವಿತರಕರು ರೆಡಿ ಇಲ್ಲ.['ಬಾಹುಬಲಿ-2' ಚಿತ್ರಕ್ಕೆ ಕರ್ನಾಟಕ ಮಾತ್ರವಲ್ಲ, ತಮಿಳುನಾಡಿನಲ್ಲೂ ಕಂಟಕ!]
ವಿತರಕರು ಕೊಂಡುಕೊಳ್ಳಲಿಲ್ಲ ಅಂದ್ರೆ.?
ನಿರ್ಮಾಪಕರು-ವಿತರಕರ ಮಧ್ಯೆ ವ್ಯಾಪಾರ ಕುದುರಲಿಲ್ಲ ಅಂದ್ರೆ, ಸ್ವತಃ ನಿರ್ಮಾಪಕರೇ (ಶೋಭು ಯರ್ಲಾಗಡ್ಡ, ಪ್ರಸಾದ್ ದೇವಿನೇನಿ) 'ಬಾಹುಬಲಿ-2' ಚಿತ್ರವನ್ನ ಕರ್ನಾಟಕದಲ್ಲಿ ಬಿಡುಗಡೆ ಮಾಡುತ್ತಾರಂತೆ.
ರಾಜಮೌಳಿಗೆ ಬೇಸರ
ಒಂದ್ಕಡೆ ಕರ್ನಾಟಕದಲ್ಲಿ ನಟ ಸತ್ಯರಾಜ್ ವಿರುದ್ಧ ಆಕ್ರೋಶ. ಇನ್ನೊಂದ್ಕಡೆ ಕರ್ನಾಟಕದಲ್ಲಿ ಸೇಲ್ ಆಗದ ವಿತರಣೆ ಹಕ್ಕು. ಈ ಎರಡು ಕಾರಣಗಳಿಂದ ನಿರ್ದೇಶಕ ಎಸ್.ಎಸ್.ರಾಜಮೌಳಿ ಬೇಸರಗೊಂಡಿದ್ದಾರಂತೆ.['ಕಟ್ಟಪ್ಪನ ವಿವಾದ'ದ ಬಗ್ಗೆ ರಾಜಮೌಳಿ ಹೇಳಿದ್ದೇನು?]
ಕ್ಷಮೆ ಕೇಳದ ಹೊರತು ಬಿಡುಗಡೆ ಮಾಡಲು ಬಿಡುವುದಿಲ್ಲ.!
ನಟ ಸತ್ಯರಾಜ್ ಕ್ಷಮೆ ಕೇಳುವವರೆಗೂ 'ಬಾಹುಬಲಿ-2' ಚಿತ್ರವನ್ನ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ ಅಂತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಹೇಳುತ್ತಾರೆ.
ಮುಂದೆ ಏನಾಗುತ್ತೋ.?
ಈ ಮಧ್ಯೆ 'ಬಾಹುಬಲಿ-2' ಚಿತ್ರವನ್ನ ಕನ್ನಡಕ್ಕೆ ಡಬ್ ಮಾಡಲು ಕೆಲವರು ಮುಂದೆ ಬಂದಿದ್ದಾರಂತೆ. 'ಬಾಹುಬಲಿ-2' ಕನ್ನಡಕ್ಕೆ ಡಬ್ ಆಗುತ್ತಾ.? ಸತ್ಯರಾಜ್ ಕ್ಷಮೆ ಕೇಳುತ್ತಾರಾ.? 'ಬಾಹುಬಲಿ-2' ಕರ್ನಾಟಕದಲ್ಲಿ ರಿಲೀಸ್ ಆಗುತ್ತಾ.? ಈ ಎಲ್ಲ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರ ಇಲ್ಲ.