Don't Miss!
- News Karnataka LS Election 2024 LIVE: ಇಂದು ಮೊದಲ ಹಂತದ ಮತದಾನಕ್ಕೆ ಸಿದ್ಧವಾದ ರಾಜ್ಯದ 14 ಕ್ಷೇತ್ರಗಳು
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಚ್ಚಮ್ಮಂದಿರಿಗೆ ಇರೋ ಮನ್ನಣೆ ಕನ್ನಡಾಂಬೆಗೆ ಸಿಕ್ಕಿಲ್ಲ.!
''ನಾನು ಕನ್ನಡದ ಕಟ್ಟಾಳು. ಕನ್ನಡಕ್ಕೆ ಕಿಂಚಿತ್ತು ಅವಮಾನವಾದ್ರೆ ನಾಗರಹಾವಿನಂತೆ ಕೆರಳೋನು ನಾನು. ಹೀಗಾಗಿ ನಾನು ಈಗಲೂ ಅಚ್ಚ ಕನ್ನಡದಲ್ಲೇ ಟ್ವೀಟ್ ಮಾಡ್ತೀನಿ. ಇದು ಕನ್ನಡಮ್ಮನಿಗೆ ನನ್ನ ಕಡೆಯಿಂದ ಸಲ್ಲಿಸುತ್ತಿರುವ ಕಿರುಸೇವೆ.''
''ದುರಂತ ಅಂದ್ರೆ ನಾನು ಸೇರಿದಂತೆ ಕನ್ನಡವನ್ನು ಬಳಸೋರಿಗೆ ಟ್ವೀಟ್ ಫಾಲೋವರ್ಸ್ ಇರೋದೇ ಕಡಿಮೆ. ಜೊತೆಗೆ ಕನ್ನಡದ ವಿಚಾರವನ್ನ ಕಂಡ್ರೆ ಕಣ್ಣು ಮಿಟುಕಿಸಿ, ಹಲ್ಲು ಕಿರಿಯೋರ ಸಂಖ್ಯೆ ಜಾಸ್ತಿ.''
''ಆದ್ರೆ, ಕನ್ನಡದ ಗಂಧವೂ ಗಾಳಿಯೂ ಇಲ್ಲದೆ, ಬಿಂದಾಸ್ ಫೋಟೋ ಹಾಕೋ ಬಿಚ್ಚಮ್ಮಂದಿರಿಗೆ ನಮಗಿಂತ ಫಾಲೋವರ್ಸ್ ಸಂಖ್ಯೆ ದುಪ್ಪಟ್ಟು. ಅದೂ ನಮ್ಮೂರಲ್ಲೇ. ಹಿಂಗಾದ್ರೆ ಕರುನಾಡಲ್ಲಿ ಕನ್ನಡ ಪ್ರೇಮ ಮೆರೆಯೋರ ಸ್ಥಿತಿಗತಿ ಹೆಂಗೆ''
ಹೀಗಂತ ಬೇಸರಗೊಂಡು ಮಾತನಾಡಿದವರು ನಟ ಮತ್ತು ರಾಜಕಾರಣಿ ಜಗ್ಗೇಶ್. ನವರಸ ನಾಯಕ ಜಗ್ಗೇಶ್ ಹೇಳಿದರಲ್ಲೂ ಅರ್ಥ ಇದೆ. ಮೂರು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಜಗ್ಗೇಶ್ ಕನ್ನಡ ಪರ ಹೋರಾಟಗಾರ ಕೂಡ ಹೌದು. [ನಟ ಜಗ್ಗೇಶ್ ಬೇಸರ ಯಾರ ಮೇಲೆ?]
ಹಸಿದ
ಮನುಷ್ಯನಿಗೆ
ಅನ್ನದ
ಬೆಲೆಗೊತ್ತು.ಹೊಟ್ಟೆತುಂಬಿದ
ಮಂದಿಗೆ
ಅನ್ನದ
ಬಗ್ಗೆ
ಅಸಡ್ಡೆ.ಕನ್ನಡಿಗರಿಗೆ
ಹಸಿವೆಯಾಗಲಿ
ಕನ್ನಡದ
ಊಟ
ಮಾಡುತ್ತಾರೆ:)
pic.twitter.com/ltOYjAVeKr
—
Jaggesh
(@jaggesh2)
July
17,
2015
ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಕನ್ನಡದಲ್ಲೇ ಟ್ವೀಟ್ ಮಾಡುವ ಜಗ್ಗೇಶ್ ಇದ್ದದ್ದನ್ನ ಇದ್ದ ಹಾಗೇ ಫಿಲ್ಟರ್ ಇಲ್ಲದೆ ಹೇಳ್ತಾರೆ. ಆದರೂ, ಜಗ್ಗೇಶ್ ಪರ ನಿಲ್ಲೋರ ಸಂಖ್ಯೆ ಕಡಿಮೆ. ಅದೇ, ಬೋಲ್ಡ್ ಹೀರೋಯಿನ್ ಗಳು ಒಂದು ಫೋಟೋ ಹಾಕಿದರೆ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗುತ್ತದೆ. [ಅಧಿಕಪ್ರಸಂಗ ಚಿತ್ರರಂಗವನ್ನ ದಾರಿತಪ್ಪಿಸುತ್ತಿದೆ - ಜಗ್ಗೇಶ್]
ನನ್ನ
ಬಗ್ಗೆ
ಕುತೂಹಲದಿಂದ
ಹಿಂಬಾಲಿಸುವ
ಮಂದಿಗಿಂತ
ಆತ್ಮೀಯವಾಗಿ
ಹಿಂಬಾಲಿಸುವರನ್ನು
ತುಂಬಾ
ಇಷ್ಟಪಡುತ್ತೇನೆ:)ಕುತೂಹಲ
ಅನುಮಾನದ
ಸಂಕೇತ.!ಅನುಮಾನಮ್
ಪೆದ್ದ
ರೋಗಂ.GEvng
—
Jaggesh
(@jaggesh2)
July
16,
2015
ಜನರಿಗೆ ಕನ್ನಡ ಪರ ಕಾಳಜಿ ಇಲ್ಲ. ಇದರಿಂದ ಕನ್ನಡ ನಶಿಸುತ್ತಿದೆ ಅಂತ ಕಳವಳ ವ್ಯಕ್ತಪಡಿಸಿದ್ದಾರೆ ಜಗ್ಗೇಶ್.