ರಂಗನಾಯಕ (2024)(U/A)
ರಂಗನಾಯಕ ಕಥೆ
ಸ್ಯಾಂಡಲ್ವುಡ್ ನಿರ್ದೇಶಕ ಗುರುಪ್ರಸಾದ್ ಸಿನಿಮಾ ಮೇಕಿಂಗ್ ಹಾದಿಯೇ ಡಿಫರೆಂಟ್. ಮಠ, ಎದ್ದೇಳು ಮಂಜುನಾಥದಂತಹ ಸಿನಿಮಾ ನೋಡಿದವರಿಗೆ ಗೊತ್ತಿರುತ್ತೆ. ಈಗ ಅದೇ ಕಾಂಬಿನೇಷನ್ನಲ್ಲಿ 'ರಂಗನಾಯಕ' ಎಂಬ ಸಿನಿಮಾ ತೆರೆಗೆ ಬರುತ್ತಿದೆ. ಸಿನಿಮಾದಲ್ಲಿ ನವರಸ ನಾಯಕ ಜಗ್ಗೇಶ್ ಹಾಗೂ ರಚಿತಾ ಮಹಾಲಕ್ಷ್ಮೀ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಯೋಗರಾಜ್ ಭಟ್, ಗುರುಪ್ರಸಾದ್, ಎಂ.ಕೆ ಮಠ್, ಚೈತ್ರಾ ಕೋಟೂರು ಮುಂತಾದವರು ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಎ.ಆರ್.ವಿಖ್ಯಾತ್ ಬಂಡವಾಳ ಹೂಡಿದ್ದರೆ, ರಾಗನಿಧಿ ಅನೂಪ್ ಸೀಳೀನ್ ಸಂಗೀತ ನೀಡಿದ್ದಾರೆ. ಇಮ್ರಾನ್ ಸಾರ್ದಾರಿಯಾ ಛಾಯಾಗ್ರಹಣ ಹಾಗೂ ಉಮೇಶ್ ಆರ್ ಬಿ ಸಂಕಲನವಿದೆ.
ಕಥೆ: ಖಾಸಗಿ ವಾಹಿನಿಯೊಂದರಲ್ಲಿ ಭೂತಕನ್ನಡಿ ಎನ್ನುವ ಸಮ್ಮೋಹಿನಿ ಕಾರ್ಯಕ್ರಮ ನಡೆಯುತ್ತಿರುತ್ತದೆ. ಸಿನಿಮಾ ನಿರ್ದೇಶಕ ಗುರುಪ್ರಸಾದ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಅವರ ಹಿಂದಿನ ಜನ್ಮದ ಬಗ್ಗೆ ತಿಳಿಯುವುದರ ಮೂಲಕ ಸಿನಿಮಾ ಕಥೆ ಆರಂಭವಾಗುತ್ತದೆ. ಹಿಂದಿನ ಜನ್ಮದಲ್ಲಿ ಪದ್ಮನಾಭ ಶರ್ಮ ಆಗಿದ್ದ ಗುರುಪ್ರಸಾದ್ ಭಾರತದಲ್ಲೇ ಮೊದಲು ಸಿನಿಮಾ ನಿರ್ದೇಶನ ಮಾಡಬೇಕು, ಅದು ಕನ್ನಡಿಗರ ಸಿನಿಮಾ, ಕನ್ನಡ ಸಿನಿಮಾವೇ ಆಗಿರಬೇಕು ಎಂದುಕೊಳ್ಳುತ್ತಾನೆ.
ಬಿಡುಗಡೆ: ರಂಗನಾಯಕ ಸಿನಿಮಾ ಮಾರ್ಚ್ 8ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.