'ಕಳ್ಳರ ಸಂತೆ'ಯಲ್ಲಿ ವಿ ಮನೋಹರ್ ರ ವಿಡಂಬನೆ

ನೋಡಿ ಬನ್ನಿ ನಮ್ಮ ಕಳ್ಳರ ಸಂತೆ...ಶೀರ್ಷಿಕೆ ಗೀತೆ ಸೇರಿದಂತೆ ಕಾಪಾಡಿ...ಕಾಪಾಡಿ... ಎಂಬ ಮತ್ತೊಂದು ಹಾಡು ಮನೋಹರ್ ಅವರ ಲೇಖನಿಯಿಂದ ಹೊರಹೊಮ್ಮಿದೆ. ಈ ಕುರಿತು ಮಾತನಾಡಿದ ಮನೋಹರ್, ನನ್ನ ಜೀವನದಲ್ಲಿ ಬಹಳಷ್ಟು ಭ್ರಷ್ಟರನ್ನು ನೋಡಿದ್ದೇನೆ. ಹಾಗಾಗಿ ಈ ಎರಡು ಹಾಡುಗಳ ಸಾಹಿತ್ಯ ರಚಿಸಲು ನನಗೆ ಅಷ್ಟು ಕಷ್ಟವಾಗಲಿಲ್ಲ ಎನ್ನ್ನುತ್ತಾರೆ.
ಕಳ್ಳರ ಸಂತೆ ಚಿತ್ರದಲ್ಲಿ ಯಶ್, ಹರಿಪ್ರಿಯಾ ಮತ್ತು ಕಿಶೋರ್ ಸೇರಿದಂತೆ ಹಲವರು ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಕತೆ ಮತ್ತು ಸಂಭಾಷಣೆ ಅಗ್ನಿ ಶ್ರೀಧರ್ ಅವರದು. ಮಾಸ್ಟರ್ ಹಿರಣ್ಣಯ್ಯ ಮತ್ತು ಚೋ ರಾಮಸ್ವಾಮಿ ಅವರ ರಾಜಕೀಯ ವಿಡಂಬನೆಯನ್ನು ಇಂದಿನ ಸನ್ನಿವೇಶಕ್ಕೆ ತಕ್ಕಂತೆ ಬದಲಾಯಿಸಿಕೊಂಡಿದ್ದೇವೆ. ಸಮಾಜದ ಎಲ್ಲ ಪಾತ್ರಗಳನ್ನು ಚಿತ್ರದಲ್ಲಿ ಕಾಣಬಹುದು. ವಾರಪತ್ರಿಕೆಯೊಂದರ ಸಂಪಾದಕರು ಸಹ ಚಿತ್ರದ ಭಾಗವಾಗಿರುತ್ತಾರೆ ಎನ್ನುತ್ತಾರೆ ಅಗಿ ಶ್ರೀಧರ್.
(ದಟ್ಸ್ ಕನ್ನಡ ಚಿತ್ರವಾರ್ತೆ)
More from Filmibeat
ಕನ್ನಡ ಸಿನಿಮಾ kannada movies ವಿ ಮನೋಹರ್ ಹರಿಪ್ರಿಯಾ haripriya v manohar ಅಗ್ನಿ ಶ್ರೀಧರ್ agni sridhar ಯಶ್ sumana kittur ಕಳ್ಳರ ಸಂತೆ ಸುಮನಾ ಕಿತ್ತೂರು kallara santhe


Click it and Unblock the Notifications











