Don't Miss!
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ಹಾಡುಗಳಲ್ಲಿ ನಿಮ್ಮ ಕನ್ನಡಾಭಿಮಾನವನ್ನು ಬಡಿದೆಬ್ಬಿಸುವ ಶಕ್ತಿ ಇದೆ.!
'ಕನ್ನಡ..' ನಮ್ಮ ಭಾಷೆ. ಈ ಭಾಷೆ ಅಂದರೆ ನಮಗೆ ಅದೇನೋ ಅಭಿಮಾನ.. ಪ್ರೀತಿ. ಅದೇ ರೀತಿ ಸಿನಿಮಾ ಮಂದಿಗೆ ಸಹ ಕನ್ನಡದ ಬಗ್ಗೆ ಅಪಾರ ಅಭಿಮಾನ. ಅದನ್ನು ಅವರು ತಮ್ಮ ಸಿನಿಮಾಗಳಲ್ಲಿ ಅನೇಕ ಬಾರಿ ತೋರಿಸಿದ್ದಾರೆ.
ಕನ್ನಡ ಸಿನಿಮಾದ ಹಾಡುಗಳಲ್ಲಿ ಕನ್ನಡ ಭಾಷೆ ರಾರಾಜಿಸಿದೆ. ಕನ್ನಡದ ಮೇಲೆ ಇರುವ ಕೆಲವು ಹಾಡುಗಳನ್ನು ಕೇಳುತ್ತಿದ್ದರೆ ಮೈ ರೋಮಾಂಚನವಾಗುತ್ತದೆ. ಈ ಹಾಡುಗಳಿಗೆ ನಮ್ಮ ಕನ್ನಡ ಅಭಿಮಾನವನ್ನು ಮತ್ತಷ್ಟು ಜಾಸ್ತಿ ಮಾಡುವ ಶಕ್ತಿ ಇದೆ.
ಅಂದಹಾಗೆ, ಕನ್ನಡ ರಾಜ್ಯೋತ್ಸವದ ವಿಶೇಷವಾಗಿ ಕನ್ನಡದ ಬಗ್ಗೆ ಇರುವ ಕೆಲವು ಹಾಡುಗಳು ಇಲ್ಲಿವೆ, ನೋಡಿ, ಕೇಳಿ...
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು..
'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಈ ಹಾಡು ಕನ್ನಡಿಗರ ಮನಸ್ಸಿನಲ್ಲಿ ಬೆರೆತು ಹೋಗಿದೆ. 'ಆಕಸ್ಮಿಕ' ಸಿನಿಮಾದ ಈ ಹಾಡಿಗೆ ಹಂಸಲೇಖ ಸಾಹಿತ್ಯ ಮತ್ತು ಸಂಗೀತ ನೀಡಿದ್ದಾರೆ. ಹಾಡಿನಲ್ಲಿ ಡಾ.ರಾಜ್ ಕನ್ನಡ ಬಾವುಟ ಹಿಡಿದು ಕುಣಿದಿದ್ದಾರೆ.
ಕನ್ನಡವೇ ನಮ್ಮಮ್ಮ..
'ಮೋಜುಗಾರ ಸೊಗಸುಗಾರ' ಚಿತ್ರದ ಈ ಹಾಡಿನಲ್ಲಿ ಕನ್ನಡವನ್ನು ತಾಯಿಗೆ ಹೋಲಿಸಲಾಗಿದೆ. ಹಾಡಿನಲ್ಲಿ ವಿಷ್ಣುವರ್ಧನ್ ಕನ್ನಡದ ಕಂದನಾಗಿ ಮಿಂಚಿದ್ದಾರೆ.
ಕನ್ನಡ ಮಣ್ಣನ್ನು ಮರಿಬೇಡ..
'ಸೋಲಿಲ್ಲದ ಸರದಾರ' ಚಿತ್ರದ ಈ ಹಾಡಿನಲ್ಲಿ 'ಕನ್ನಡ ಮಣ್ಣನ್ನು ಮರಿಬೇಡ.. ಈ ಮಣ್ಣಿನ ಹೆಣ್ಣನ್ನು ಜರಿಬೇಡ..' ಎಂಬ ಅದ್ಭುತ ಮಾತುಗಳನ್ನು ಹೇಳಲಾಗಿದೆ.
ಕನ್ನಡ ಹೊನ್ನುಡಿ ದೇವಿಯನ್ನು..
'ಒಂದು ಸಿನಿಮಾ ಕಥೆ' ಚಿತ್ರದ 'ಕನ್ನಡ ಹೊನ್ನುಡಿ ದೇವಿಯನ್ನು..' ಹಾಡಿನಲ್ಲಿ ಕನ್ನಡದ ಮಹಾನ್ ಕವಿಗಳನ್ನು ನೆನೆದಿದ್ದಾರೆ.
'ಸಿಪಾಯಿ' ಚಿತ್ರದ ಹಾಡು
'ಸಿಪಾಯಿ' ಸಿನಿಮಾದ 'ರುಕ್ಕಮ್ಮ..' ಹಾಡಿನಲ್ಲಿ ರವಿಚಂದ್ರನ್ ತಮ್ಮ ಕನ್ನಡಾಭಿಮಾನವನ್ನು ತೋರಿದ್ದಾರೆ.
ಬಾರಿಸು ಕನ್ನಡ ಡಿಂಡಿಮ..
ರಾಷ್ಟ್ರಕವಿ ಕುವೆಂಪು ಅವರ 'ಬಾರಿಸು ಕನ್ನಡ ಡಿಂಡಿಮ..' ಹಾಡು ಕೇಳಿದ ಎಲ್ಲರಿಗೂ ಕನ್ನಡ ನಾಡಿನಲ್ಲಿ ಹುಟ್ಟಿದ ನಾವೇ ಧನ್ಯ ಎಂಬ ಭಾವ ಮೂಡುತ್ತದೆ.