twitter
    For Quick Alerts
    ALLOW NOTIFICATIONS  
    For Daily Alerts

    ಉದ್ಘಾಟನೆಗೆ ಸಿದ್ಧವಾಗಿದೆ ವರನಟ ರಾಜ್ ಸ್ಮಾರಕ

    By Rajendra
    |

    ಅಂತೂ ಇಂತೂ ಕಂಠೀರವ ಸ್ಟುಡಿಯೋ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ವರನಟ ಡಾ.ರಾಜ್ ಕುಮಾರ್ ಅವರ ಸ್ಮಾರಕದ ಕಾಮಗಾರಿಯ ಮೊದಲ ಹಂತ ಉದ್ಘಾಟನೆಗೆ ಸಿದ್ಧವಾಗೊಂಡಿದೆ. ಈ ವಿಷಯವನ್ನು ಗುರುವಾರ (ಜ.6) ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ತಿಳಿಸಿದರು.

    ಜಂಟಿ ಅಧಿವೇಷನವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ನೆನಪಿನ ಸ್ಮಾರಕ ನಿರ್ಮಾನಕ್ಕೆ ಭೂಮಿ ಖರೀದಿಸಲಾಗಿದೆ. ಶೀಘ್ರದಲ್ಲೇ ನಿರ್ಮಾಣ ಕಾರ್ಯ ನಡೆಯಲಿದೆ ಎಂದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಡಾ.ರಾಜ್ ಸ್ಮಾರಕ 2010ರ ನವೆಂಬರ್1ಕ್ಕೆ ಉದ್ಘಾಟನೆಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಕಾಮಗಾರಿ ವಿಳಂಬವಾಗಿತ್ತು.

    ಕನ್ನಡ ಚಿತ್ರರಂಗಕ್ಕೆ ಅಣ್ಣಾವ್ರು ಸಲ್ಲಿಸಿದ ಸೇವೆ, ಅವರು ಅಭಿನಯಿಸಿದ ಚಿತ್ರಗಳು, ಹಾಡಿದ ಹಾಡುಗಳು, ಅಣ್ಣಾವ್ರ ಸಂಭಾಷಣೆ ಸ್ಮಾರಕದಲ್ಲಿ ಸ್ಥಾನಪಡೆಯಲಿವೆ. ಒಟ್ಟು 2.5 ಎಕರೆ ಪ್ರದೇಶದಲ್ಲಿ ವಸ್ತು ಸಂಗ್ರಹಾಲಯ, ಧ್ಯಾನ ಮಂದಿರ, ಬಯಲು ರಂಗಮಂದಿರ, ಉದ್ಯಾನವನ ಹಾಗೂ ಗ್ರಂಥಾಲಯ ನಿರ್ಮಾಣವಾಗಲಿದೆ. ಅಂದಾಜು ರು.10 ಕೋಟಿ ವೆಚ್ಚದಲ್ಲಿಡಾ.ರಾಜ್ ಸ್ಮಾರಕ ನಿರ್ಮಿಸಲಾಗುತ್ತಿದೆ. [ವಿಷ್ಣುವರ್ಧನ್]

    English summary
    Kannada matinee idol late Dr.Rajkumar memorial's first stage at Kanteerava studio ready for inauguration. Karnataka governor Hamsaraj Bharadwaj said in a joint session of legislature. At the same time he inform that land for Dr.Vishnuvardhan memorial has been purchased.
    Thursday, January 6, 2011, 18:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X