Don't Miss!
- News Hevay Rain: ಬಿರುಗಾಳಿ ಮಳೆಗೆ ನೆಲ ಕಚ್ಚಿದ ಬಾಳೆ, ಟೊಮೆಟೊ
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Sports PBKS vs MI IPL 2024: ಪಂಜಾಬ್ ರಾಜರಿಗೆ ಮುಂಬೈ ಇಂಡಿಯನ್ಸ್ ಸವಾಲು; ಟಾಸ್ ವರದಿ, ಆಡುವ 11ರ ಬಳಗ
- Lifestyle ಊಟದ ರುಚಿ ಹೆಚ್ಚಿಸುತ್ತೆ ಚೌಳಿಕಾಯಿ ಪಲ್ಯ..! ಹೀಗೆ ಮಾಡಿ
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗುರುಪ್ರಸಾದ್ ಹೊಸ ಚಿತ್ರದಲ್ಲಿ ನವೀನ್ ಕೃಷ್ಣ
ನವೀನ್ಕೃಷ್ಣ ಅಗಲದ ಕಪ್ಪು ಕನ್ನಡಕ ಹಾಕಿದ್ದರು. ಕುರುಚಲು ಗಡ್ಡ ನೀವಿಕೊಳ್ಳುತ್ತ ಧಿಮಾಕು' ತಂದೊಡ್ಡಿದ ನಷ್ಟವನ್ನು ಮೆಲುಕು ಹಾಕುತ್ತಾ ಒಂದು ಸಲ ಲೊಚಗುಟ್ಟಿದರು. ಸ್ಯಾಟಲೈಟ್ ಹಕ್ಕು ತಂದುಕೊಟ್ಟ ನಲವತ್ತು ಲಕ್ಷ ಬಿಟ್ಟರೆ ಧಿಮಾಕು' ಚಿಕ್ಕಾಸನ್ನೂ ತರಲಿಲ್ಲ ಎಂಬುದು ಅವರ ಬೇಸರಕ್ಕೆ ಕಾರಣ. ಒಳ್ಳೆ ವಿಮರ್ಶೆ ಬಂತು. ನೋಡಿದ ಜನರ ಪ್ರತಿಕ್ರಿಯೆಯೂ ಚೆನ್ನಾಗಿತ್ತು. ಆದರೂ ಸಿನಿಮಾ ಓಡಲಿಲ್ಲ. ಕಾರಣ ಹುಡುಕುವುದೇ ಕಷ್ಟ' ಎನ್ನುತ್ತಾ ಮತ್ತೊಮ್ಮೆ ಲೊಚ್ ಎಂದರು.
ಚಿನ್ನೇಗೌಡ, ಎನ್.ಕುಮಾರ್ (ಅವರೀಗ ನಾಮಬಲ ಹೆಚ್ಚಲೆಂದು ಇನಿಶಿಯಲ್ಲನ್ನು ಎಂ.ಎನ್. ಎಂದು ಬದಲಿಸಿಕೊಂಡಿದ್ದಾರೆ) ನಿರ್ಮಿಸುತ್ತಿರುವ ಶ್ರೀಹರಿ' ಚಿತ್ರದಲ್ಲಿ ನವೀನ್ ಕೃಷ್ಣ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ. ಸೆಕೆಂಡ್ ಹಾಫ್ನಲ್ಲಿ ಪ್ರಾಮುಖ್ಯ ಇರುವ ಪಾತ್ರ ಅದು.
ಅವರಿಗೆ ಸದ್ಯಕ್ಕೆ ಸ್ವಂತ ನಿರ್ಮಾಣದ ಯೋಚನೆಯೇನೂ ಇಲ್ಲ. ಹಾಗಂತ ಸುಮ್ಮನೆ ಕೂರುವ ಪ್ರಮೇಯವೂ ಅವರಿಗಿಲ್ಲವಂತೆ. ಎದ್ದೇಳು ಮಂಜುನಾಥ' ಖ್ಯಾತಿಯ ಗುರುಪ್ರಸಾದ್ ತಮ್ಮ ಮುಂದಿನ ಚಿತ್ರದ ಕುರಿತು ನವೀನ್ ಕೃಷ್ಣ ಜೊತೆ ಚರ್ಚೆ ನಡೆಸಿದ್ದಾರೆ. ಆ ಚಿತ್ರಕ್ಕೆ ನಿರ್ಮಾಪಕರೂ ಸಿಕ್ಕ್ದಿದಾರಂತೆ. ಎಲ್ಲಾ ಅಂದುಕೊಂಡಂತೆ ನಡೆದರೆ, ಅದರಲ್ಲಿ ನವೀನ್ ಕೃಷ್ಣ ಅಭಿನಯಿಸುವುದು ಖರೆ.