Don't Miss!
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Sports ಟಿ20 ವಿಶ್ವಕಪ್ಗೆ 15 ಸದಸ್ಯರ ಭಾರತ ತಂಡದ ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ಸಂಜು, ರಾಹುಲ್ಗೆ ಸ್ಥಾನವಿಲ್ಲ!
- Automobiles ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
- News SSLC Result 2024: ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ ಯಾವಾಗ? ಪರಿಶೀಲಿಸುವುದೇಗೆ?-ಮಾಹಿತಿ, ವಿವರ
- Lifestyle 3ನೇ ಬಾರಿ ಬಾಹ್ಯಾಕಾಶಕ್ಕೆ ಹಾರಲು ಮುಂದಾದ ಸುನೀತಾ ವಿಲಿಯಮ್ಸ್..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲಂಕೇಶ್ 'ದೇವೀರಿ' ಕ್ಯಾತನಿಗೆ ಜರ್ಮನಿ ಫೆಲೋಶಿಪ್
ಈ ಫೋಟೋ ನೋಡಿದರೆ ಈ ಹುಡುಗನನ್ನು ಎಲ್ಲೋ ನೋಡದ ನೆನಪಾಗಬಹುದು ಅಥವಾ ಆಗದೇನೂ ಇರಬಹುದು. ಕವಿತಾ ಲಂಕೇಶ್ ಅವರ ಚೊಚ್ಚಲ ನಿರ್ದೇಶನದ ಚಿತ್ರ 'ದೇವೀರಿ' ಚಿತ್ರ ನೋಡಿದ್ದರೆ ಖಂಡಿತ ಈ ಹುಡುಗ ನೆನಪಾಗೇ ಆಗುತ್ತಾನೆ. "ನನ್ನ ಹೆಸರು ಕ್ಯಾತ ಅಂಥ" ಎಂದು ಚಿತ್ರದಲ್ಲಿ ಪರಿಚಯ ಮಾಡಿಕೊಳ್ಳುವ ಮಂಜನಿಗೆ ಜರ್ಮನಿಗೆ ಹೋಗುವ ಅಪೂರ್ವ ಅವಕಾಶ ಸಿಕ್ಕಿದೆ.
ಈ ಹುಡುಗನ ನಿಜವಾದ ಹೆಸರು ಮಂಜ. ಕವಿತಾ ಲಂಕೇಶ್ ಅವರ 'ದೇವೀರಿ' ಚಿತ್ರದಲ್ಲಿ ಅಭಿನಯಿಸಬೇಕಾದರೆ ಈತನಿಗೆ ಕೇವಲ 12 ವರ್ಷ ವಯಸ್ಸು. ಓದಿನಲ್ಲಿ ಆಸಕ್ತಿ ಕಳೆದುಕೊಂಡಿದ್ದ ಮಂಜ ಬಾಸ್ಕೋ ಸಂಸ್ಥೆಯ ಅನಾಥಶ್ರಾಮದಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದ.
'ದೇವೀರಿ' ಚಿತ್ರೀಕರಣದಲ್ಲಿ ಎಲ್ಲರೂ ಈತನನ್ನು ಏನು ಓದಿಕೊಂಡಿದ್ದೀಯಾ ಎಂದು ಕೇಳುತ್ತಿದ್ದರು. ಅರ್ಧಕ್ಕೆ ಶಾಲೆ ಬಿಟ್ಟಿದ್ದ ಮಂಜನಿಗೆ ಈ ಪ್ರಶ್ನೆಗಳು ಈಟಿಯಂತೆ ಚುಚ್ಚುತ್ತಿದ್ದವು. 'ದೇವೀರಿ' ಚಿತ್ರೀಕರಣ ಮುಗಿದ ಮೇಲೆ ಮಂಜ ಮತ್ತೆ ಶಾಲೆಗೆ ಸೇರ್ಪಡೆಯಾಗಿದ್ದ. ಈಗ ಸಂಜೆ ಕಾಲೇಜಿನಲ್ಲಿ ಮಂಜ ಬಿ.ಕಾಂ ಮಾಡುತ್ತಿದ್ದಾನೆ.
ಸದ್ಯಕ್ಕೆ ಡ್ರೀಮ್ ಎ ಡ್ರೀಮ್ ಎಂಬ ಸಂಸ್ಥೆಯಲ್ಲಿ ಮಂಜ ಕೆಲಸ ಮಾಡುತ್ತಾ ತನ್ನಂತಹ ಅನಾಥರಿಗೆ ಸಹಾಯ ಮಾಡುತ್ತಿದ್ದಾನೆ. ತೀರಾ ಇತ್ತೀಚೆಗೆ ಮಂಜನಿಗೆ ಜರ್ಮನಿಗೆ ಹೋಗುವ ಅವಕಾಶ ಸಿಕ್ಕಿದೆ. ಈ ವಿಷಯವನ್ನು ಸ್ವತಃ ಕವಿತಾ ಲಂಕೇಶ್ಗೆ ಮಂಜ ತಿಳಿಸಿದ್ದಾನೆ. ಕ್ರೀಡಾ ತರಬೇತಿ ಯೋಜನೆಯ ಭಾಗವಾಗಿ Dekeyser & Friends ಫೆಲೋಶಿಪ್ಗೆ ಆಯ್ಕೆಯಾಗಿರುವುದಾಗಿ ಹೇಳಿದ್ದಾನೆ. ಒನ್ಇಂಡಿಯಾ ಕನ್ನಡ ಅಂತರ್ಜಾಲ ಪತ್ರಿಕೆಗೆ ಕವಿತಾ ಲಂಕೇಶ್ ವಿವರ ನೀಡಿದರು. (ಒನ್ಇಂಡಿಯಾ ಕನ್ನಡ)