Don't Miss!
- Lifestyle 3ನೇ ಬಾರಿ ಬಾಹ್ಯಾಕಾಶಕ್ಕೆ ಹಾರಲು ಮುಂದಾದ ಸುನೀತಾ ವಿಲಿಯಮ್ಸ್..!
- News ಡಾ.ಮಂಜುನಾಥ್ ಅವರಿಗೆ ಕೇಂದ್ರ ಸಚಿವ ಸ್ಥಾನ: ಸುಳಿವು ಕೊಟ್ಟ ಹೆಚ್ ಡಿ ದೇವೇಗೌಡ
- Automobiles Maruti Suzuki: 1 ವರ್ಷದಲ್ಲಿಯೇ ಹೊಸ ದಾಖಲೆ.. 134,735 ಫ್ರಾಂಕ್ಸ್ ಕಾರುಗಳು ಮಾರಾಟ, ಬೆಲೆ ರೂ.7.51 ಲಕ್ಷ
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರಾಣಾಪಾಯದಿಂದ ಪಾರಾದ 'ಆಪ್ತರಕ್ಷಕ'
'ಆಪ್ತರಕ್ಷಕ' ಚಿತ್ರೀಕರಣದ ವೇಳೆ ಅಪಘಾತ ಸಂಭವಿದ್ದನ್ನು ಡಾ.ವಿಷ್ಣು ನೆನಪಿಸಿಕೊಂಡಿದ್ದಾರೆ. ಅವರು ಕುದುರೆ ಸವಾರಿ ಸನ್ನಿವೇಶದಲ್ಲಿ ನಟಿಸುತ್ತಿರಬೇಕಾದರೆ ಆಯ ತಪ್ಪಿ ಕೆಳಗೆ ಬಿದ್ದು ಗಾಯಗೊಂಡಿರುವುದಾಗಿ ತಿಳಿಸಿದ್ದಾರೆ. ಈ ಘಟನೆಯಲ್ಲಿ ತಮ್ಮ ಬೆನ್ನುಮೂಳೆ ಮುರಿಯಬೇಕಾಗಿತ್ತು, ಅದೃಷ್ಟವಶಾತ್ ಗಂಡಾಂತರದಿಂದ ಪಾರಾದೆ ಎನ್ನುತ್ತಾರೆ ವಿಷ್ಣು.
ಘಟನೆಯನ್ನು ವಿಷ್ಣು ವಿವರಿಸಿದ್ದು ಹೀಗೆ, ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಪ್ತರಕ್ಷಕ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಅದೊಂದು ಕುದುರೆ ಸವಾರಿಯ ಸಾಹಸ ಸನ್ನಿವೇಶ. ಸಾಹಸ ನಿರ್ದೇಶಕ ರಾಮ್ ಶೆಟ್ಟಿ ನಿರ್ದೇಶನಲ್ಲಿ ಚಿತ್ರೀಕರಿಸಿಕೊಳ್ಳಲಾಗುತ್ತಿತ್ತು. ಈ ಒಂದು ಸಾಹಸ ಸನ್ನಿವೇಶಕ್ಕಾಗಿ ನೂರಕ್ಕೂ ಹೆಚ್ಚು ಕುದುರೆಗಳನ್ನು ಬಳಸಿಕೊಳ್ಳಲಾಗಿದೆ ಎಂದರು.
ಕುದುರೆಯೊಂದನ್ನು ನನಗೆ ನೀಡಲಾಯಿತು. ಕುದುರೆಯನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿದೆ. ಎಲ್ಲಾ ಓಕೆ ಎನ್ನಿಸಿತು.ಆದರೂ ನನ್ನ ಆರನೆ ಇಂದ್ರಿಯ ಮಾತ್ರ ಎಚ್ಚರಿಸುತ್ತಲೇ ಇತ್ತು. ಕುದುರೆ ಮೇಲೆ ಕುಳಿತು ಲಗಾಮನ್ನು ಎಳೆದೆ. ಆರಂಭದಲ್ಲಿ ಸಲೀಸಾಗಿ ಸಾಗಿದ ಕುದುರೆ ಸ್ವಲ್ಪ ದೂರ ಕ್ರಮಿಸಿದ ನಂತರ ಇದ್ದಕ್ಕಿದ್ದಂತೆ ವೇಗವನ್ನು ಹೆಚ್ಚಿಸಿತು. ವೇಗ ನನ್ನ ಕೈಮೀರಿತ್ತು. ಇದ್ದಕ್ಕಿದ್ದಂತೆ ಮುಂದಿನ ಎರಡೂ ಕಾಲುಗಳನ್ನು ಮೇಲಕ್ಕೆತ್ತಿ ನನ್ನನ್ನು ಕೆಳಕ್ಕೆ ಕೆಡವಿತು ಎಂದು ವಿಷ್ಣು ತಮಗಾದ ಅಪಘಾತವನ್ನು ವಿವರಿಸಿದರು.
ದೇವರ ದಯೆಯಿಂದ ನನ್ನ ಬೆನ್ನುಮೂಳೆ ಮುರಿಯಲಿಲ್ಲ. ಆದರೂ ಗಂಭೀರವಾಗಿ ಗಾಯಗೊಂಡೆ. ಸ್ಕಾನಿಂಗ್ ರಿಫೋರ್ಟ್ ನಿಂದ ಬಲವಾದ ಮೂಗೇಟುಗಳಾಗಿರುವುದು ಗೊತ್ತಾಗಿದೆ. ಚೇತರಿಸಿಕೊಳ್ಳಲು ಕೆಲ ವಾರಗಳ ಸಮಯ ಬೇಕಾಯಿತು ಎನ್ನುತ್ತಾರೆ ವಿಷ್ಣು. ಹಾಗಾಗಿ 'ಆಪ್ತರಕ್ಷಕ' ಸ್ವಲ್ಪ ತಡವಾಯಿತು ಎನ್ನುತ್ತ್ತಾರೆ ಅವರು.
(ದಟ್ಸ್ ಕನ್ನಡ ಚಿತ್ರವಾರ್ತೆ)