Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇನ್ನೊಂದು ಕ್ರೌಡ್ ಫಂಡಿಂಗ್ ಚಿತ್ರ 'ಮರೆಯಲಾರೆ'
ಮೊದಲ ಸಿನಿಮಾ 'ಸ್ಯಾಂಡಲ್ ವುಡ್ ಸರಿಗಮ' ಚಿತ್ರದಿಂದ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಎರಡು ಪ್ರಶಸ್ತಿಗಳನ್ನು (ಅತ್ಯುತ್ತಮ ಕಥೆ ಹಾಗೂ ಚಿತ್ರಕಥೆ (ನೋಯ್ಡಾ ಅಂತರರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್) ಪಡೆದ ನಂತರ ಶರತ್ ಖಾದ್ರಿ ಅವರು ಈ ಹಿಂದೆ ಪ್ರಾರಂಭ ಮಾಡಿ ಸ್ಥಗಿತ ಗೊಳಿಸಿದ್ದ 'ಮರೆಯಲಾರೆ' ಚಿತ್ರವನ್ನು ಮತ್ತೆ ಪ್ರಾರಂಭಿಸಿದ್ದಾರೆ.
ಸುರಭಿ ಟಾಕಿಸ್ ಅಡಿಯಲ್ಲಿ ಪ್ರಾರಂಭ ಆಗುತ್ತಿರುವ 'ಮರೆಯಾಲಾರೆ' ಸಮೂಹದಿಂದ ಹಣ ಸಹಾಯ (ಕ್ರೌಡ್ ಫಂಡಿಂಗ್) ಪಡೆದು ತಯಾರು ಮಾಡಲಿರುವ ಚಿತ್ರ ಇದು. ಈ ಹಿಂದೆ ಇದೇ ರೀತಿ 'ಲೂಸಿಯಾ' ಚಿತ್ರ ನಿರ್ಮಾಣವಾಗಿತ್ತು. ಪ್ರೀತಿ, ಸಂಬಂಧ, ಕನಸುಗಳ ವಿಷಯಗಳ ಹೊಸ ವಿಚಾರವನ್ನು ಹೊತ್ತ ಚಿತ್ರ ಇದು ಎಂದು ಶರತ್ ಖಾದ್ರಿ ಅವರು ಹೇಳಿದ್ದಾರೆ. [ಲೂಸಿಯಾ : ಇದು ಹೊಸ ಬದಲಾವಣೆಗೆ ಮುನ್ನುಡಿಯಾಗಲಿ]
ಅರ್ಜುನ್ ಜನ್ಯ ಅವರು 'ಮರೆಯಲಾರೆ' ಚಿತ್ರಕ್ಕೆ ಸಂಗೀತ ಒದಗಿಸಲಿದ್ದಾರೆ. ತಾಂಡವ್ ಚಿತ್ರದ ನಾಯಕ, ಪವಿತ್ರ ಬೆಳ್ಳಿಯಪ್ಪ ಈ ಚಿತ್ರದ ನಾಯಕಿ. ಒಂದು ತಿಂಗಳ ಅವಧಿಯಲ್ಲಿ ಶರತ್ ಖಾದ್ರಿ ಅವರು ಚಿತ್ರಕ್ಕೆ ಹಲವಾರು ಹೊಸ ಮುಖಗಳನ್ನು ಪರಿಚಯಿಸಲಿದ್ದಾರೆ. ಚಿತ್ರದ ಕಥೆ ಬಹಳ ಹೊಸದಾದ್ದರಿಂದ ಅದಕ್ಕೆ ಹೊಸ ಮುಖಗಳ ಪರಿಚಯ ಆಗಬೇಕು ಎಂದು ಶರತ್ ಖಾದ್ರಿ ತಿಳಿಸಿದ್ದಾರೆ. (ಫಿಲ್ಮಿಬೀಟ್ ಕನ್ನಡ)