Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಅಮರ್' ಅಂತ್ಯಕ್ರಿಯೆಯಲ್ಲಿ ಕಣ್ಣೀರು ಹಾಕಿದ 'ಅಕ್ಬರ್', 'ಅಂತೋನಿ'!
ದೀರ್ಘಕಾಲದಿಂದಲೂ ಬ್ಲಾಡರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ವಿನೋದ್ ಖನ್ನಾ, ಗುರುವಾರ ಬೆಳಗ್ಗೆ ಸುಮಾರು 11:30ರ ಸುಮಾರಿಗೆ ನಿಧನರಾದರು. ಅಂದೇ ಸಂಜೆ ಅವರ ಅಂತ್ಯಕ್ರಿಯೆ ನಡೆಯಿತು.
ಮುಂಬೈ, ಏಪ್ರಿಲ್ 28: ಗುರುವಾರ ನಿಧನರಾದ ಬಾಲಿವುಡ್ ನ ಹಿರಿಯ ನಟ ವಿನೋದ್ ಖನ್ನಾ ಅವರ ಅಂತ್ಯಕ್ರಿಯೆಯು ಅಂದೇ ಸಂಜೆ ಮುಂಬೈನಲ್ಲಿ ನೆರವೇರಿತು.
ಈ ಅಂತ್ಯಕ್ರಿಯೆಗೆ ಜನಪ್ರಿಯ ಹಿರಿಯ ನಟರ ಪೈಕಿ ಅಮಿತಾಭ್ ಬಚ್ಚನ್ ಹಾಗೂ ರಿಷಿ ಕಪೂರ್ ಬಿಟ್ಟರೆ ಮಿಕ್ಕವರಾರೂ ಅಲ್ಲಿ ಕಾಣಲಿಲ್ಲ. ಇನ್ನು ಅವರ ನಂತರದ ತಲೆಮಾರಿನ ನಾಯಕ ನಟರಲ್ಲಿ ಜಾಕಿಶ್ರಾಫ್, ಚುಂಕಿ ಪಾಂಡೆ ಬಂದಿದ್ದರು. ಇನ್ನು, ಇತ್ತೀಚೆಗಿನ ನಟರಲ್ಲಿ ಅಭಿಷೇಕ್ ಬಚ್ಚನ್, ರಣದೀಪ್ ಹೂಡಾ ಬಂದಿದ್ದರು.
ಇವರಲ್ಲಿ ಗಮನ ಸೆಳೆದಿದ್ದು ರಿಷಿ ಕಪೂರ್ ಹಾಗೂ ಅಮಿತಾಭ್ ಬಚ್ಚನ್. ಈ ಮೂವರು ಒಟ್ಟಿಗೇ ಅಭಿನಯಿಸಿದ್ದ ಅಮರ್ ಅಕ್ಬರ್ ಅಂತೋನಿ ಚಿತ್ರವನ್ನು ಯಾರು ಮರೆಯಲು ಸಾಧ್ಯ?[ವಿನೋದ್ ಖನ್ನಾ ಅಗಲಿಕೆಗೆ ಕಂಬಿನಿ ಮಿಡಿದ ಬಾಲಿವುಡ್ ಮತ್ತು ಕ್ರಿಕೆಟಿಗರು]
ಆ ಸೂಪರ್ ಹಿಟ್ ಚಿತ್ರದ ಒಂದು ನೆನಪು ಈ ಹೊತ್ತಿನಲ್ಲಿ...
ನೆನಪಿನಂಗಳದಲ್ಲಿ ಹಿರಿಯರು
ನೋದ್ ಖನ್ನಾ, ರಿಷಿ ಕಪೂರ್ ಹಾಗೂ ಅಮಿತಾಭ್ ಬಚ್ಚನ್ - ಈ ಮೂವರೂ 1977ರಲ್ಲಿ ತೆರೆಕಂಡಿದ್ದ ಸೂಪರ್ ಹಿಟ್ ಚಲನಚಿತ್ರ 'ಅಮರ್, ಅಕ್ಬರ್, ಅಂತೋನಿ' ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಿದ್ದರು. ಮನಮೋಹನ್ ದೇಸಾಯಿ ಈ ಚಿತ್ರದ ನಿರ್ದೇಶಕರು.[ಬಾಲಿವುಡ್ ಮೇರು ನಟ ವಿನೋದ್ ಖನ್ನಾ ಹೆಜ್ಜೆ ಗುರುತು]
ಮರೆಯಲಾಗದ ಹಾಡುಗಳು
ಈ ಚಿತ್ರದಲ್ಲಿ ವಿನೋದ್ ಖನ್ನಾ 'ಅಮರ್' ಪಾತ್ರ ಮಾಡಿದ್ದರೆ, ರಿಷಿ ಕಪೂರ್ 'ಅಕ್ಬರ್' ಹಾಗೂ ಅಮಿತಾಭ್ 'ಅಂತೋನಿ' ಪಾತ್ರ ನಿರ್ವಹಿಸಿದ್ದರು.
ಈ ಚಿತ್ರದ 'ಅಮರ್... ಅಕ್ಬರ್... ಆಂತೋನಿ...' ಹಾಗೂ 'ಮೈ ನೇಮ್ ಈಸ್ ಅಂತೋನಿ ಗುನ್ಸಾಲ್ವೆಸ್' ಹಾಡುಗಳು ಇಂದಿಗೂ ಹಿಂದಿ ಚಿತ್ರಗೀತೆ ಪ್ರೇಮಿಗಳಿಗೆ ಅಚ್ಚುಮೆಚ್ಚು.ತಮಿಳು, ತೆಲುಗು, ಮಲಯಾಳಂನಲ್ಲೂ ಚಿತ್ರ
ಧಾರ್ಮಿಕ ಸಹಿಷ್ಣುತೆಯ ಪ್ರತೀಕವಾಗಿದ್ದ ಈ ಚಿತ್ರ ಅಂದಿನ ಮಟ್ಟಿಗೆ ಬಾಲಿವುಡ್ ನಲ್ಲಿ ಬ್ಲಾಕ್ ಬಸ್ಟರ್ ಚಿತ್ರವಾಗಿ ಹೊರಹೊಮ್ಮಿತಲ್ಲದೆ, ಬಾಲಿವುಡ್ ಮಾದರಿಯ ಹೊಸ ರೀತಿಯ ಮಸಾಲೆ ಚಿತ್ರಗಳಿಗೆ ನಾಂದಿ ಹಾಡಿತು. ಅಲ್ಲದೆ, ಅನೇಕ ಭಾಷೆಗಳಿಗೆ ರೀಮೇಕ್ ಆಯಿತು. ತಮಿಳಿನಲ್ಲಿ 'ಶಂಕರ್ ಸಲೀಂ ಸೈಮನ್' (1978), ತೆಲುಗಿನಲ್ಲಿ 'ರಾಮ್ ರಾಬರ್ಟ್ ರಹೀಂ' (1980) ಹಾಗೂ ಮಲಯಾಳಂನಲ್ಲಿ 'ಜಾನ್ ಜಾಫರ್ ಜನಾರ್ಧನ್' (1982)
ಕಥೆ ಮಾತ್ರ ಬೇರೆ ಬೇರೆ
ಅಷ್ಟೇ ಅಲ್ಲ, ದಶಕಗಳೇ ಉರುಳಿದರೂ, ಆ ಚಿತ್ರದ ಟೈಟಲ್ ಇಟ್ಟುಕೊಂಡು ಕೆಲವು ಚಿತ್ರಗಳು ಬಂದವು. 1998ರಲ್ಲಿ ಕನ್ನಡದಲ್ಲಿ ಥ್ರಿಲ್ಲರ್ ಮಂಜು ಅವರ ಅಭಿನಯದಲ್ಲಿ , 2015ರಲ್ಲಿ ಮಲಯಾಳಂನಲ್ಲಿ ಇದೇ ಹೆಸರಿನ ಚಿತ್ರಗಳು ಬಂದವು. ಆದರೆ, ಇವುಗಳ ಕಥೆ ಬೇರೆಯದ್ದೇ ಆಗಿದ್ದವು.
ನೆನಪುಗಳು ಕಣ್ಣೀರಾದಾಗ
ಆ ಚಿತ್ರವೂ ಈ ಮೂವರ ವೃತ್ತಿಜೀವನದಲ್ಲಿ ಒಂದು ಮರೆಯಲಾಗದ ಚಿತ್ರವಾಗಿ ನಿಂತಿದೆ. ಬಹುಶಃ ಅದನ್ನು ನೆನೆಯುತ್ತಲೋ ಏನೋ, ಅಮಿತಾಭ್ ಹಾಗೂ ರಿಷಿ ಕಪೂರ್ ಕಣ್ಣಾಲಿಗಳು ತೇವವಾಗಿದ್ದವು.