Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಮ್ಯಾ 'ನೀರ್ ದೋಸೆ'ಯಲ್ಲಿ ಮತ್ತೆ ಬದಲಾವಣೆ
ಅದು ನೀರ್ ದೋಸೆ ಆದರೂ ಅಷ್ಟೇ ಮಸಾಲೆ, ಸೆಟ್ ದೋಸೆ ಆದರೂ ಅಷ್ಟೇ. ಎಲ್ಲರ ಮನೆ ದೋಸೆನೂ ತೂತು. ಅಂದಹಾಗೆ ನಾವು ಈಗ ದೋಸೆ ಸಮಾಚಾರ ಮಾತನಾಡುತ್ತಿಲ್ಲ. ಗೋಲ್ಡನ್ ಗರ್ಲ್ ರಮ್ಯಾ ಅಭಿನಯಿಸುತ್ತಿರುವ ನೀರ್ ದೋಸೆ ಚಿತ್ರದಲ್ಲಿ ಇನ್ನೊಂದು ಮಹತ್ತರ ಬೆಳವಣಿಗೆಯಾಗಿದೆ.
ಈ ಚಿತ್ರದಲ್ಲಿ ಮತ್ತೊಬ್ಬ ಬೆಡಗಿ ಭಾವನಾ (ಮಲ್ಲು ಬೆಡಗಿ ಭಾವನಾ ಅಲ್ಲ) ಅಭಿನಯಿಸಲು ಒಪ್ಪಿಕೊಂಡಿದ್ದರು. ಈಗ ನೀರ್ ದೋಸೆ ಚಿತ್ರದಿಂದ ಅವರು ಹೊರಬಿದ್ದಿದ್ದಾರೆ. ತಾವು ನಿರೀಕ್ಷಿಸಿದಷ್ಟು ಸಂಭಾವನೆ ಸಿಗಲಿಲ್ಲ ಎಂದು ಅವರು ಚಿತ್ರದಿಂದ ಹೊರಹೋಗಿದ್ದಾರೆ ಎನ್ನಲಾಗಿದೆ.
ಭಾವನಾ ಅವರ ಜಾಗಕ್ಕೆ ಈಗ ಮತ್ತೊಬ್ಬ ಬೆಡಗಿ ಸುಮನ್ ರಂಗನಾಥ್ ಆಗಮನವಾಗುತ್ತಿದೆ. ರಮ್ಯಾ ಅಭಿನಯದ 'ಸಿದ್ಲಿಂಗು' ಚಿತ್ರದಲ್ಲಿ ಆಂಡಳಮ್ಮ ಟೀಚರ್ ಪಾತ್ರವನ್ನು ಸುಮನ್ ರಂಗನಾಥ್ ಪೋಷಿಸಿದ್ದರು. ಈಗ ಮತ್ತೊಮ್ಮೆ ರಮ್ಯಾ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.
ಇಷ್ಟಕ್ಕೂ ಚಿತ್ರದಲ್ಲಿ ಸುಮನ್ ರಂಗನಾಥ್ ಅವರ ಪಾತ್ರ ಏನು ಎತ್ತ ಎಂಬ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಇನ್ನು ಭಾವನಾ ಅವರ ವಿಚಾರಕ್ಕೆ ಬರುವುದಾರೆ ಈ ಹಿಂದೆಯೂ ಅವರು ಹಲವಾರು ಚಿತ್ರಗಳನ್ನು ಒಲ್ಲೆ ಎಂದಿದ್ದರು. ಅವುಗಳಲ್ಲಿ ಮುಖ್ಯವಾಗಿ 'ಎದೆಗಾರಿಕೆ' ಚಿತ್ರವನ್ನು ಹೆಸರಿಸಬಹುದು.
ನವರಸ ನಾಯಕ ಜಗ್ಗೇಶ್ ಅವರು ಚಿತ್ರದ ನಾಯಕ ನಟ. ಬಿ.ಎಸ್.ಸುಧೀಂದ್ರ ಹಾಗೂ ವಿ ಬಾಬು ಚಿತ್ರದ ನಿರ್ಮಾಪಕರು. 'ಸಿದ್ಲಿಂಗು' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ವಿಜಯ್ ಪ್ರಕಾಶ್ ಈ ಚಿತ್ರದ ನಿರ್ದೇಶಕರು. (ಏಜೆನ್ಸೀಸ್)