Don't Miss!
- News ರಾಜ್ಯದ ವಿವಿಧೆಡೆ ಮಳೆರಾಯನ ಆರ್ಭಟ; ಕರ್ನಾಟಕದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟು ? ಇಲ್ಲಿದೆ ಸಂಪೂರ್ಣ ವಿವರ
- Sports 'ಟಿ20 ವಿಶ್ವಕಪ್ಗೆ ಈತನನ್ನು ಆಯ್ಕೆ ಮಾಡಿ'; ಅಜಿತ್ ಅಗರ್ಕರ್ಗೆ ಬಂತು ದೊಡ್ಡ ಮನವಿ!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೋಡಿ-ದಿಗಂತ್ ಜೋಡಿಗೆ ರಮ್ಯಾ ಗ್ರೀನ್ ಸಿಗ್ನಲ್
ತೆಲುಗು ಸೂಪರ್ ಹಿಟ್ ಚಿತ್ರ 'ಅರುಂಧತಿ' ನಿರ್ದೇಶಕ ಕೋಡಿ ರಾಮಕೃಷ್ಣ ನಿರ್ದೇಶಿಸಲಿರುವ ಕನ್ನಡ ಚಿತ್ರದಲ್ಲಿ ತಾವು ನಟಿಸಲಿರುವುದು ಪಕ್ಕಾ ಎಂಬುದನ್ನು ರಮ್ಯಾ ಸಾಕಷ್ಟು ಬಾರಿ ಹೇಳಿದ್ದಾರೆ. ಆದರೆ ಅದ್ಯಾಕೋ ರಮ್ಯಾ ಮಾತನ್ನು ಹೆಚ್ಚಿನ ಜನ ನಂಬುತ್ತಿಲ್ಲ. ಚಂದ್ರ ಚಿತ್ರಕ್ಕೆ ಕೈಕೊಟ್ಟಿದ್ದರಿಂದ ರಮ್ಯಾ ಮಾತನ್ನು ನಂಬುತ್ತಿಲ್ಲವೋ ಅಥವಾ ಚಿತ್ರತಂಡಕ್ಕೇ ರಮ್ಯಾ ಬಗ್ಗೆ ಇನ್ನೂ ನಂಬಿಕೆ ಬಂದಿಲ್ಲವೋ, ಒಟ್ಟಿನಲ್ಲಿ ರಮ್ಯಾ-ದಿಗಂತ್ ಜೋಡಿ ಹೆಚ್ಚು ಸುದ್ದಿಯಾಗಿಲ್ಲ.
ರಮ್ಯಾ 'ನೋ ಸಿಗ್ನಲ್' ನೀಡಿದ ನಂತರ ಚಂದ್ರಕ್ಕೆ ರಾಷ್ಟ್ರೀಯ ಖ್ಯಾತಿಯ ಶ್ರೀಯಾ ಸರನ್ ಆಗಮನವಾಗಿದೆ. ಆದರೆ ರಮ್ಯಾ ಮಾತ್ರ ಅದೇನೋ ಕಳೆದುಕೊಂಡಂತೆ ಚಡಪಡಿಸುತ್ತಿಲ್ಲ. ಬದಲಿಗೆ ಬರುತ್ತಿರುವ ಅವಕಾಶವನ್ನೂ ಅಳೆದು, ತೂಗಿ ಒಪ್ಪಿಕೊಳ್ಳುತ್ತಿದ್ದಾರೆ. ಜಾನಿ ಮೇರಾ ನಾಮ್-2 ಬಗ್ಗೆ ಆಫರ್ ಬಂದರೂ ಇನ್ನೂ ಒಪ್ಪಿಲ್ಲ ರಮ್ಯಾ. ಕಥೆ ಕೇಳಿದ ಮೇಲೆಯೇ ನಿರ್ಧಾರ ಎಂದಿದ್ದಾರೆ. ಆದರೆ ಕೋಡಿ ರಾಮಕೃಷ್ಣ ಚಿತ್ರಕ್ಕೆ ರಮ್ಯಾ ಡೇಟ್ಸ್ ಕೊಟ್ಟಿದ್ದಾರೆ.
ಜೂನ್ ತಿಂಗಳಲ್ಲಿ ಮುಹೂರ್ತ ಆಚರಿಸಿಕೊಂಡು ಚಿತ್ರೀಕರಣ ಪ್ರಾರಂಭಿಸುವ ಯೋಜನೆ ನಿರ್ದೇಶಕ ಕೋಡಿಯವರದು. ದಿಗಂತ್ ಕೂಡ ಲೈಫು ಇಷ್ಟೇನೆ ನಂತರ ಹಿಟ್ ಒಂದಕ್ಕೆ ಕಾಯುತ್ತಿದ್ದಾರೆ. ಕೋಡಿ ರಾಮಕೃಷ್ಣ ಸಿನಿಮಾ ಮ್ಯಾಜಿಕ್ ಬಗ್ಗೆ ಎಲ್ಲರಿಗೂ ಗೊತ್ತು. ಜೊತೆಯಲ್ಲಿ ಲಕ್ಕಿ ಸ್ಟಾರ್ ರಮ್ಯಾ ಬೇರೆ ಇದ್ದಾರೆ. ಹಾಗಾಗಿ ಪ್ರೇಕ್ಷಕರಿಗೂ, ಘೋಷಣೆಯಾಗಿರುವ ಈ ಚಿತ್ರದ ಬಗ್ಗೆ ಅಪಾರ ನಿರೀಕ್ಷೆಯಿದೆ. (ಒನ್ ಇಂಡಿಯಾ ಕನ್ನಡ)