Don't Miss!
- Sports ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಕೆಎಲ್ ರಾಹುಲ್ಗೆ ಸ್ಥಾನ?; ರಾಬಿನ್ ಉತ್ತಪ್ಪ ಹೇಳಿದ್ದೇನು?
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಿಯಲ್ ಸ್ಟಾರ್ ಉಪೇಂದ್ರ ಬ್ರಹ್ಮ ಮೊದಲರ್ಧ ಹೇಗಿದೆ?
ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್ ಚಂದ್ರು ಅವರ ಕಾಂಬಿನೇಷನ್ ಚಿತ್ರ ಎಂದ ಮೇಲೆ ನಿರೀಕ್ಷೆಗಳು ಸಾಕಷ್ಟು ಇದ್ದವು. ಅದಕ್ಕೆ ತಕ್ಕಂತೆ ಚಿತ್ರ ಇದೆಯೇ ಇಲ್ಲವೇ ಎಂಬುದು ಮೊದಲರ್ಧದಲ್ಲೇ ನಿರ್ಧರಿಸಲು ಸಾಧ್ಯವಿಲ್ಲ. ಇಲ್ಲಿರುವುದು ಕೇವಲ ಅನಿಸಿಕೆ ಎಂಬುದು ಗಮನಕ್ಕಿರಲಿ.
1970 ರ ದಶಕದಿಂದ ಆರಂಭವಾಗುವ ಚಿತ್ರ ಮಲೇಷ್ಯಾದಿಂದ ಇಂಡಿಯಾಗೆ ಹಾಗೂ ಅಲ್ಲಿಂದಿಲ್ಲಿಗೆ ಇಲ್ಲಿಂದ ಅಲ್ಲಿಗೆ ಹರಿದಾಡುತ್ತಾ ಕುತೂಹಲ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಮಲೇಷ್ಯಾದಲ್ಲಿ ಚಿತ್ರೀಕರಣಗೊಂಡಿರುವ ಎರಡು ಹಾಡುಗಳು ನೋಡಲು ಚೆನ್ನಾಗಿವೆ. ಕಣ್ಣಿಗೆ ಸೊಗಸು, ಕಿವಿಗೆ ಒಂಚೂರು ಇಂಪು.
ಸಯ್ಯಾಜಿ ಶಿಂಧೆ ಕನ್ನಡ ಅಷ್ಟಷ್ಟು ಮಾತ್ರವೆ. ರಂಗಾಯಣ ರಘು ಕಾಮಿಡಿ ಮೊದಲರ್ಧ ವರ್ಕ್ ಔಟ್ ಆಗಿದೆ. ಬ್ರಹ್ಮನ ಉದ್ದೇಶ ಏನು? ಅವನ್ಯಾರು ಎಂಬುದು ಗೊತ್ತಾಗಬೇಕಾದರೆ ಕೊನೆಯತನಕ ಕಾಯಲೇಬೇಕು.
ರಂಗಾಯಣ ರಘು ಅದೃಷ್ಟವಂತನಾಗಿ ಮೊದಲರ್ಧ ಕಾಮಿಡಿಯಿಂದ ತುಂಬಿ ತುಳುಕಿದೆ. ಮೊದಲರ್ಧ ನೋಡಿದ ಮೇಲೆ ಇದು ಚಂದ್ರು ಚಿತ್ರ ಅನ್ನಿಸುವುದಕ್ಕಿಂತ ಉಪ್ಪಿ ಚಿತ್ರ ಅನ್ನಿಸುತ್ತದೆ.
ಚಂದ್ರು ಅವರ ಈ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ಇಲ್ಲಿ ಅವರ ಮ್ಯಾಜಿಕ್ ಗಿಂತ ಉಪ್ಪಿ ಮ್ಯಾಜಿಕ್ ಹೆಚ್ಚಾಗಿ ಕಾಣುತ್ತದೆ. ಒಟ್ತಾರೆಯಾಗಿ ಚಂದೆಉ ಏನು ಹೇಳಲು ಹೊರಟಿದ್ದಾರೆ ಎಂಬುದು ಮಾತ್ರ ಕುತೂಹಲವಾಗಿದೆ.