Don't Miss!
- Automobiles ಫ್ಯಾಮಿಲಿ ಕಾರಾಗಿ ಜನರ ಮನಗೆದ್ದ ಹ್ಯುಂಡೈ ಅಲ್ಕಾಜರ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- News Tirupati Darshan Ticket: ತಿರುಪತಿ ದರ್ಶನಕ್ಕೆ ವಿಶೇಷ ಟಿಕೆಟ್ ಬಿಡುಗಡೆ: ಪೂಜಾ ಸೇವೆಯಲ್ಲಿ ಬಾಗವಹಿಸಲು ದಿನಾಂಕ ಆಯ್ಕೆ ಮಾಡಿ...
- Finance ಕಬ್ಬನ್ ಪಾರ್ಕ್ನಲ್ಲಿ ಮರ ಅಪ್ಪಿಕೊಳ್ಳುವ ಕಾರ್ಯಕ್ರಮಕ್ಕೆ ತಲಾ 1,500 ರೂ. ಶುಲ್ಕವಿಟ್ಟ ಕಂಪನಿ!
- Technology Itel: ಐಟೆಲ್ ಸೂಪರ್ ಗುರು 4G ಫೋನ್ ಲಾಂಚ್! ಯುಪಿಐ ಬೆಂಬಲ
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಕ್ಕೆ ಜಾಕ್ ಮಂಜು ಕೈ: ಇರಲಿದ್ದಾರೆ ಹಾಲಿವುಡ್ ನಟರು!
'ವಿಕ್ರಾಂತ್ ರೋಣ' ಸಿನಿಮಾದ ಯಶಸ್ಸಿನಿಂದ ಥ್ರಿಲ್ ಆಗಿದ್ದ ನಿರ್ಮಪಕ ಜಾಕ್ ಮಂಜು ಇದೀಗ ಹೊಸ ಪ್ರಾಜೆಕ್ಟ್ ಹಿಡಿದು ಬಂದಿದ್ದಾರೆ. ಆದರೆ ಈ ಬಾರಿ ಒಂದು ಹೊಸ ಪ್ರಯತ್ನಕ್ಕೆ ಮಂಜು ಕೈ ಹಾಕಿದ್ದಾರೆ.
ಕೋವಿಡ್ ಬಳಿಕ ಚಿತ್ರರಂಗವು ಕಂಟೆಂಟ್ ಕಡೆ ಹೊರಳಿಕೊಂಡಿದ್ದು, ಉತ್ತಮ ಕತೆ, ಚಿತ್ರಕತೆಯ ಅವಶ್ಯಕತೆಯನ್ನು ನಿರ್ದೇಶಕರು, ನಿರ್ಮಾಪಕರು ಮನಗಂಡಿದ್ದಾರೆ. ಇದೇ ಕಾರಣಕ್ಕೆ ಸಿನಿಮಾ ಪ್ರಾರಂಭಿಸುವ ಮುನ್ನ ಚಿತ್ರಕತೆಯ ಮೇಲೆಯೇ ಹೆಚ್ಚು ಗಮನ ವಹಿಸಿ, ಉತ್ತಮ ಚಿತ್ರಕತೆ ಪಡೆಯಲು ಬಂಡವಾಳ ಹೂಡಿದ್ದಾರೆ ಜಾಕ್ ಮಂಜು.
ವಿಕ್ರಾಂತ್ ವೈಷ್ಣವಿ ನೋಡಿ ಸ್ಪಂದನ ಮನದಲ್ಲಿ ಅನುಮಾನ
ನಿರ್ದೇಶಕ ನಾಗಶೇಖರ್ ನಿರ್ದೇಶಿಸಲಿರುವ ಸಿನಿಮಾವನ್ನು ಜಾಕ್ ಮಂಜು ನಿರ್ಮಾಣ ಮಾಡಲಿದ್ದಾರೆ. ಆದರೆ ಸಿನಿಮಾ ಪ್ರಾರಂಭಕ್ಕೂ ಮುನ್ನ ಚಿತ್ರಕತೆಯನ್ನು ಹಲವು ದಿಗ್ಗಜರನ್ನು ಒಟ್ಟು ಗೂಡಿಸಿ ಅವರಿಂದ ಬರೆಸಲಾಗುತ್ತಿದೆ!
ನಾಗಶೇಖರ್ ಅವರು ಸಿನಿಮಾದ ಒಂದೆಳೆ ಕತೆಯನ್ನು ಜಾಕ್ ಮಂಜುಗೆ ಹೇಳಿದ್ದಾರೆ ಈಗ ಅದೇ ಒಂದೆಳೆ ಕತೆಯನ್ನು ಪರಿಪೂರ್ಣ ಚಿತ್ರಕತೆಯನ್ನಾಗಿ ಮಾಡುವ ಪ್ರಯತ್ನ ಚಾಲ್ತಿಯಲ್ಲಿದ್ದು, ಇದಕ್ಕಾಗಿ ಕನ್ನಡ ಚಿತ್ರರಂಗದ ಕೆಲವು ಪ್ರತಿಭಾನ್ವಿತ ನಿರ್ದೆಶಕರನ್ನು, ಸಿನಿಮಾ ಕರ್ಮಿಗಳನ್ನು ಹಾಗೂ ಪೊಲೀಸ್, ನ್ಯಾಯಾಂಗ ವಿಭಾಗದ ಕೆಲವರನ್ನು ಒಂದೆಡೆ ಸೇರಿಸಿದ್ದಾರೆ ಜಾಕ್ ಮಂಜು ಹಾಗೂ ನಾಗಶೇಖರ್.
ನಿರ್ದೇಶಕಿ ಸುಮನಾ ಕಿತ್ತೂರು, ಚಕ್ರವರ್ತಿ ಚಂದ್ರಚೂಡ್, ಸಿನಿಮಾಟೊಗ್ರಾಫರ್ ಸತ್ಯ ಹೆಗಡೆ, ನಿರ್ದೇಶಕ ರಾಘು ಕೋವಿ ಅವರುಗಳ ಜೊತೆಗೆ ಮಾಜಿ ಪೊಲೀಸ್ ಆಯುಕ್ತ ಬಿಬಿ ಅಶೋಕ್ ಕುಮಾರ್, ಜನಪ್ರಿಯ ಕ್ರಿಮಿನಲ್ ಲಾಯರ್ ದಿಲೀಪ್ ಇವರುಗಳೆಲ್ಲ ಸೇರಿ ಚಿತ್ರಕತೆ ಸಿದ್ಧಪಡಿಸಲಿದ್ದಾರೆ. ಕೇವಲ ಒಂದು ತಿಂಗಳಲ್ಲಿ ಚಿತ್ರಕತೆ ಪೂರ್ಣಗೊಳ್ಳುವ ಉಮೇದು ಜಾಕ್ ಮಂಜು ಅವರದ್ದು.
ರಾಷ್ಟ್ರೀಯ ಸಮಸ್ಯೆಯೊಂದರ ಹಿನ್ನೆಲೆಯಲ್ಲಿರುವ ಪ್ರೇಮಕತೆಯನ್ನು ಸಿನಿಮಾ ಒಳಗೊಂಡಿದೆಯಂತೆ. ಈ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದ್ದು. ದೊಡ್ಡ ಬಜೆಟ್ನಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. ನಿರದೇಶಕ ನಾಗ್ಶೇಖರ್ ಹೇಳಿರುವಂತೆ, ಸಿನಿಮಾಕ್ಕಾಗಿ ಕೆಲವು ದೊಡ್ಡ ನಟರನ್ನು ತಲೆಯಲ್ಲಿಟ್ಟುಕೊಂಡಿದ್ದೇನೆ, ಚಿತ್ರಕತೆ ತಯಾರಾದ ಮೇಲೆ ಅವರನ್ನು ಸಂಪರ್ಕಿಸಲಾಗುವುದು ಎಂದಿದ್ದಾರೆ. ಸಿನಿಮಾಕ್ಕೆ ಸ್ಥಳೀಯ ನಟರು ಮಾತ್ರವೇ ಅಲ್ಲದೆ ಹಾಲಿವುಡ್ನ ಕೆಲವು ನಟರನ್ನೂ ಕರೆಸಲಿದ್ದಾರಂತೆ.