twitter
    For Quick Alerts
    ALLOW NOTIFICATIONS  
    For Daily Alerts

    ವಿಜಯ್ ನಟನೆಯ 'ಕನಕ'ನಿಗೆ ಮಹಾರಾಷ್ಟ್ರದ ಎಮ್ಮೆಗಳು

    By Suneel
    |

    ದುನಿಯಾ ವಿಜಯ್ ಮತ್ತು ಆರ್.ಚಂದ್ರು ಕಾಂಬಿನೇಷನ್‌ ನಲ್ಲಿ 'ಕನಕ' ಅಣ್ಣಾವ್ರ ಅಭಿಮಾನಿ ಚಿತ್ರ ಮೊದಲ ಚಿತ್ರವಾಗಿ ನಿರ್ಮಾಣವಾಗುತ್ತಿದೆ. 'ಮಾಸ್ತಿ ಗುಡಿ' ಚಿತ್ರೀಕರಣದ ವೇಳೆ ಸಂಭವಿಸಿದ ದುರ್ಘಟನೆಯಿಂದ ಇಬ್ಬರು ನಟರು ಸಾವನಪ್ಪಿದ ಕಾರಣ ದುನಿಯಾ ವಿಜಯ್ ಯಾವುದೇ ಚಿತ್ರಗಳಲ್ಲಿ ನಟಿಸದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸೂಚಿಸಿತ್ತು.[ಅಣ್ಣಾವ್ರ ಅಭಿಮಾನಿ 'ಕನಕ' ಸಾಂಗ್ ರೆಕಾರ್ಡಿಂಗ್ ಆರಂಭ]

    kanaka

    ಈಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ವಿಜಯ್‌ ರವರು ಚಿತ್ರದಲ್ಲಿ ನಟಿಸಲು ಅನುಮತಿ ನೀಡಿದ್ದು, ಈ ವಿಷಯ ತಿಳಿದ ಆರ್‌.ಚಂದ್ರು ವಿಜಯ್ ನಟನೆಯ 'ಕನಕ' ಚಿತ್ರೀಕರಣ ಮುಂದುವರೆಸಿದ್ದಾರೆ.

    ಕನಕ ಚಿತ್ರತಂಡ ಈಗ ಕನಕದಾಸರ ಹುಟ್ಟಿದ ಭಾಗದ ಚಿತ್ರೀಕರಣ ಮಾಡುತ್ತಿದ್ದು, ಇದರ ಚಿತ್ರೀಕರಣಕ್ಕಾಗಿ ಮಹಾರಾಷ್ಟ್ರದಿಂದ ಲಾರಿಗಳಲ್ಲಿ ಎಮ್ಮೆಗಳನ್ನು ಬೆಂಗಳೂರಿಗೆ ತರಿಸುತ್ತಿದೆಯಂತೆ. ಅಸಲಿ ಸಿನಿಮಾ ಸಂತ ಕನಕದಾಸರ ಬಗ್ಗೆ ಅಲ್ಲವಾದರೂ ಸಹ, ಅವರಿಗೆ ಗೌರವ ಸಲ್ಲಿಸಲು ಮುಂದಾಗಿರುವುದಾಗಿ ಆರ್.ಚಂದ್ರು ಹೇಳಿದ್ದಾರೆ.[ಆರ್ ಚಂದ್ರು ಚಿತ್ರದಲ್ಲಿ 'ರಾಜ್ ಕುಮಾರ್ ಫ್ಯಾನ್' ಯಾರು ಗೊತ್ತಾ?]

    kanaka 2

    'ಕನಕ' ಚಿತ್ರಕ್ಕೆ ನವೀನ್ ಸಜ್ಜು ಸಂಗೀತ ನೀಡಲಿದ್ದು, ಸತ್ಯ ಹೆಗಡೆ ಛಾಯಾಗ್ರಹಣವಿದೆ. ಮುಂದಿನ ವಾರದ ಒಳಗೆ ಚಿತ್ರಕ್ಕೆ ನಾಯಕ ನಟಿ ಆಯ್ಕೆ ಅಂತಿಮಗೊಳ್ಳಲಿದೆ ಎಂದು ಆರ್.ಚಂದ್ರು ಹೇಳಿದ್ದಾರೆ.

    English summary
    Karnataka film chamber yesterday gave permission to Vijay to act in movie. R.Chandru directorial 'Kanaka' shooting started again.
    Tuesday, January 3, 2017, 9:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X