Don't Miss!
- News
ಸುಳ್ಳು ಭರವಸೆ ಕೊಟ್ಟು ಜನರನ್ನು ದಾರಿತಪ್ಪಿಸುವ ಕೆಲಸ; ಎಲ್ಲಾ ಸಮಯದಲ್ಲಿ ಮೋಸ ಮಾಡಲು ಸಾಧ್ಯವಿಲ್ಲ: ಸಿಎಂ
- Automobiles
ಜನಪ್ರಿಯ ನಟನ ಮನೆಗೆ ಕಥೆ ಹೇಳಲು ಹೋಗಿ ಆತನ ದುಬಾರಿ ಕಾರ್ ಓಡಿಸಿಬಂದ ನಿರ್ದೇಶಕ...
- Sports
ಮೂಲೆಗುಂಪಾದ ಶಿಖರ್ ಧವನ್ ಬಗ್ಗೆ ಅಶ್ವಿನ್ ಅಚ್ಚರಿಯ ಹೇಳಿಕೆ: ಇಶಾನ್, ಗಿಲ್ ಬಗ್ಗೆ ಹೇಳಿದ್ದೇನು?
- Technology
ಭಾರತದಲ್ಲಿ ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್ಟಾಪ್ ಲಾಂಚ್; ಏನೆಲ್ಲಾ ಫೀಚರ್ಸ್ ಇವೆ ಗೊತ್ತಾ!?
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹಿಂದಿಯೇತರ ಪಾತ್ರಗಳನ್ನು ಕೀಳಾಗಿ ಚಿತ್ರಿಸಿದೆ ಬಾಲಿವುಡ್: ಸಿದ್ಧಾರ್ಥ್
ಬಹುಭಾಷಾ ನಟ ಸಿದ್ಧಾರ್ಥ್ ತಮ್ಮ ಅಭಿಪ್ರಾಯವನ್ನು ಗಟ್ಟಿಯಾಗಿ ಹೇಳುವ ಧೈರ್ಯವಂತ ನಟರಲ್ಲಿ ಒಬ್ಬರು. ರಾಜಕೀಯ, ಸಾಮಾಜಿಕ, ಧಾರ್ಮಿಕ ವಿಷಯಗಳ ಬಗ್ಗೆ ನಿರ್ಭೀತಿಯಿಂದ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ ಸಿದ್ಧಾರ್ಥ್.
ಬಾಲಿವುಡ್ ಹಲವು ದಶಕಗಳಿಂದ ದಕ್ಷಿಣ ಭಾರತದವರನ್ನು ಹೇಗೆ ನಡೆಸಿಕೊಂಡಿತು, ಯಾವ ದೃಷ್ಟಿಯಿಂದ ನೋಡುತ್ತಿತ್ತು ಎಂಬುದನ್ನು ಸಿದ್ಧಾರ್ಥ್ ಹೇಳಿದ್ದಾರೆ. ಸಿದ್ಧಾರ್ಥ್ರ ಈ ಹೇಳಿಕೆ ಬಾಲಿವುಡ್ ಮಂದಿಯ ಕಣ್ಣನ್ನು ಇನ್ನಷ್ಟು ಕೆಂಪಗೆ ಮಾಡಲಿದೆ ಎಂಬುದು ಖಾತ್ರಿ.
ಸಿದ್ಧಾರ್ಥ್, 'ಎಸ್ಕೈಪ್ ಪ್ಲಾನ್' ಹೆಸರಿನ ವೆಬ್ ಸರಣಿಯೊಂದರಲ್ಲಿ ನಟಿಸಿದ್ದು, ಈ ವೆಬ್ ಸರಣಿಯ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ಧಾರ್ಥ್, ''ಬಾಲಿವುಡ್ನಲ್ಲಿ ವರ್ಷಗಳಿಂದಲೂ ದಕ್ಷಿಣ ಭಾರತದ ಅಥವಾ ಹಿಂದಿಯೇತರ ಭಾಷಿಕ ಪಾತ್ರಗಳನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ'' ಎಂದಿದ್ದಾರೆ.
''ಹಿಂದಿನ ಸಿನಿಮಾಗಳಲ್ಲಿ ಕಮಿಡಿಯನ್ ಮೆಹಮೂದ್ ಮಾಡುತ್ತಿದ್ದ ಪಾತ್ರಗಳು ಬಹಳ ವಿಚಿತ್ರವಾಗಿಯೂ, ಅವಾಸ್ತವಿಕವಾಗಿಯೂ ಇದ್ದವು. ಆದರೆ ಜನ ಅವನ್ನು ಮೆಚ್ಚಿದ್ದರು. ಆದರೆ ಈಗ ಮೆಹಮೂದ್ ಅವರ ಆ ಪಾತ್ರಗಳನ್ನು ನೋಡಿದರೆ ಬೇಸರ ಎನಿಸುತ್ತದೆ'' ಎಂದಿದ್ದಾರೆ ಸಿದ್ಧಾರ್ಥ್. ಬಾಲಿವುಡ್ನ ಜನಪ್ರಿಯ ಹಾಸ್ಯನಟ ಮೆಹಮೂದ್ ತಮ್ಮ ಹಲವು ಸಿನಿಮಾಗಳಲ್ಲಿ ದಕ್ಷಿಣ ಭಾರತದ ವ್ಯಕ್ತಿಯ ಪಾತ್ರಗಳನ್ನು ಮಾಡಿದ್ದಾರೆ. ಆ ಪಾತ್ರಗಳು ದಡ್ಡ, ವ್ಯಂಗ್ಯ ರೀತಿಯ ವ್ಯಕ್ತಿತ್ವವನ್ನೇ ಹೊಂದಿದ್ದವು.
''ಮಿಥುನ್ ಚಕ್ರವರ್ತಿ ಸಿನಿಮಾ ಒಂದರಲ್ಲಿ ಕೃಷ್ಣ ಐಯ್ಯರ್ ಎಂದು ಹೆಸರಿಟ್ಟುಕೊಂಡು ಎಳನೀರು ಮಾರುತ್ತಿರುತ್ತಾರೆ. ಆಗೆಲ್ಲ ಆ ಸಿನಿಮಾಗಳನ್ನು ಒಪ್ಪಿಕೊಂಡರು ಆದರೆ ಈಗ ನಾವು ಹಾಗೆ ಮಾಡಲು ಸಾಧ್ಯವಿಲ್ಲ. ಕನ್ನಡಿಗನನ್ನೊ, ಕಾಶ್ಮೀರಿಯನ್ನೊ ಹಾಗೆ ತೋರಿಸಿದರೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಯುದ್ಧವನ್ನೇ ಸಾರುತ್ತಾರೆ'' ಎಂದಿದ್ದಾರೆ ಸಿದ್ಧಾರ್ಥ್.
ನಟ ಸಿದ್ಧಾರ್ಥ್, 'ಎಸ್ಕೈಪ್ ಲೈವ್' ವೆಬ್ ಸರಣಿಯಲ್ಲಿ ಕನ್ನಡಿಗನ ಪಾತ್ರದಲ್ಲಿ ನಟಿಸಿದ್ದಾರೆ. ವೆಬ್ ಸರಣಿಯ ಟ್ರೇಲರ್ನಲ್ಲಿ ದೃಶ್ಯವೊಂದಿದೆ. ವ್ಯಕ್ತಿಯೊಬ್ಬ ಸಿದ್ಧಾರ್ಥ್ಗೆ 'ಮಲಯಾಳಿ' ಎಂದು ಮೂದಲಿಸುವ ರೀತಿಯಲ್ಲಿ ಹೇಳುತ್ತಾನೆ. ಆಗ ಸಿದ್ಧಾರ್ಥ್, ''ಹೇ ಮಗಾ, ನಾನು ಕನ್ನಡಿಗ, ನೀನು ಇರುವುದು ಕರ್ನಾಟಕದಲ್ಲಿ'' ಎನ್ನುತ್ತಾರೆ.
ಸಿದ್ಧಾರ್ಥ್ ನಟಿಸಿರುವ 'ಎಸ್ಕೈಪ್ ಲೈವ್' ವೆಬ್ ಸರಣಿಯು ಸಾಮಾಜಿಕ ಜಾಲತಾಣದ ಕೆಡುಕುಗಳ ಕುರಿತಾದ ಕತೆ ಹೊಂದಿದೆ, ಟಿಕ್ ಟಾಕ್ ಇನ್ನಿತರೆ ಕಿರು ವಿಡಿಯೋ ಆಪ್ಗಳು ಹೇಗೆ ಯುವಕರನ್ನು ಮರುಳು ಮಾಡಿ, ಹಣಕ್ಕೆ, ನಂಬರ್ ಒನ್ ಆಗುವ ಆಸೆ ತೋರಿಸಿ ಅಥವಾ ಸ್ಟಾರ್ ಆಗುವ ಆಸೆ ತೋರಿಸಿ ಅವರ ದಿಕ್ಕು ತಪ್ಪಿಸಿ ತಾವು ಹಣ ದೋಚುತ್ತಿವೆ ಎಂಬ ಕತೆಯನ್ನು ಹೊಂದಿದೆ. ವೆಬ್ ಸರಣಿಯ ಟ್ರೇಲರ್ ಬಹಳ ವೈರಲ್ ಆಗಿದೆ.
ನಟ ಸಿದ್ಧಾರ್ಥ್, ಹಲವು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ರಂಗ್ ದೇ ಬಸಂತಿ', 'ಸ್ಟ್ರೈಕರ್', 'ಚಷ್ಮೇ ಬಹದ್ದೂರ್', 'ದಿ ಹೌಸ್ ನೆಕ್ಸ್ಟ್ ಡೋರ್'ಗಳಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಹಿಂದಿ ವೆಬ್ ಸರಣಿಗಳಾದ 'ಲೈಲಾ' ಹಾಗೂ ಈಗ 'ಎಸ್ಕೈಪ್ ಲೈವ್' ನಲ್ಲಿ ನಟಿಸಿದ್ದಾರೆ.