ಐಂದ್ರಿತಾ ರೇಗೆ ರಜೆ ಕೊಡಿಸಿದ ವಿನಯ್ ಆಕ್ಸಿಡೆಂಟ್
ಯಾಕೋ ನಟಿ ಐಂದ್ರಿತಾ ರೇ ನಸೀಬು ನೆಟ್ಟಗಿದ್ದಂಗಿಲ್ಲ. ಕನ್ನಡದ ಹೆಸರಾಂತ ನಿರ್ದೇಶಕ ಚಿತ್ರಗಳಲ್ಲಿ ನಟಿಸಿದರೂ ಆಕೆಯ ಕೆರಿಯರ್ ಹಿಂದೆಹಿಂದಕ್ಕೆ ಹೋಗುತ್ತಿದೆ. ಯೋಗರಾಜ್ ಭಟ್ಟರ ಎರಡು, ದುನಿಯಾ ಸೂರಿಯ ಒಂದು, ಎಸ್. ನಾರಾಯಣ್ ನಿರ್ದೇಶನದ ಇನ್ನೊಂದು ಹೀಗೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದರೂ ಈಗ ಖಾಲಿ ಕುಳಿತಿರಬೇಕಾದ ಸ್ಥಿತಿ ಬಂದಿದೆ.
ಮೊದಲು ಐಂದ್ರಿತಾರನ್ನು ಅದೃಷ್ಟವಂತ ನಟಿ ಎಂದೇ ಬಿಂಬಿಸಲಾಗುತ್ತಿತ್ತು. ಹಾಗೇ ಇದ್ದರೂ ಕೂಡ. ಆದರೀಗ ಅದು ಉಲ್ಟಾ ಆಗಿದೆ. ಮೇಸ್ಟ್ರು ನಾಗತಿಹಳ್ಳಿ ಚಂದ್ರಶೇಖರ್ ಜತೆ ಗಲಾಟೆ ಮಾಡಿಕೊಂಡ ನಂತರ ಹೀಗಾಯ್ತೋ, ಅದಕ್ಕೂ ಇದಕ್ಕೂ ಸಂಬಂಧವೇ ಇಲ್ಲವೋ ಒಂದು ಗೊತ್ತಾಗದೇ ಇಡೀ ಗಾಂಧಿನಗರ ತಲೆ ಕೆರದುಕೊಳ್ಳುತ್ತಿದೆ.
ಚಿತ್ರಗಳು ಗೆದ್ದರೂ ಅವರಿಗೆ ಅವಕಾಶಗಳು ಅಟ್ಟಿಸಿಕೊಂಡು ಬರುತ್ತಿಲ್ಲ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಇತ್ತೀಚಿಗೆ ಬಿಡುಗಡೆಯಾಗಿ ಗೆದ್ದಿರುವ ಪಾರಿಜಾತ. ಪಾರಿಜಾತದ ನಂತರ ಈ 'ಪಾರಿಜಾತ'ಕ್ಕೆ ದಕ್ಕಿರುವುದು ಕೇವಲ 'ಮೊಗ್ಗಿನ ಮನಸು' ಶಶಾಂಕ್ ಅವರ ಹೊಸ ಚಿತ್ರವೊಂದರ ಆಫರ್. ಅದು ಬಿಟ್ಟರೆ ಐಂದ್ರಿತಾ ರೇ ಕೈ ಖಾಲಿ ಖಾಲಿ! ಮುಂದಿನ ಪುಟ ನೋಡಿ...


Click it and Unblock the Notifications











